ಮೊಬೈಲ್ ಬ್ಯಾಂಕಿಂಗ್ಗೆ ಮಾಲ್ವೇರ್
Team Udayavani, May 15, 2020, 7:31 AM IST
ಸಾಂದರ್ಭಿಕ ಚಿತ್ರ
ನವದೆಹಲಿ: ನಿಮ್ಮಲ್ಲಿ ಆ್ಯಂಡ್ರಾಯ್ಡ್ ಮೊಬೈಲ್ ಇದೆಯೇ, ನೀವು ಮೊಬೈಲ್ ಬ್ಯಾಂಕಿಂಗ್ ಬಳಕೆದಾರರೇ? ಸ್ವಲ್ಪ ಎಚ್ಚರ ತಪ್ಪಿದರೂ ನಿಮ್ಮ ಖಾತೆಗೆ ಕನ್ನ ಬೀಳುವ ಸಾಧ್ಯತೆಯಿದೆ.
ಇವೆಂಟ್ ಬೋಟ್ ಎಂಬ ಮೊಬೈಲ್ ಬ್ಯಾಂಕಿಂಗ್ ಮಾಲ್ವೇರ್ ಒಂದು ಇತ್ತೀಚೆಗೆ ಸೈಬರ್ ಸ್ಪೇಸ್ನಲ್ಲಿ ಸಕ್ರಿಯವಾಗಿದ್ದು, ಭಾರತದ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರ ವೈಯಕ್ತಿಕ ಹಣಕಾಸಿನ ಮಾಹಿತಿಯನ್ನು ಕದಿಯುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಫೆಡರಲ್ ಸೈಬರ್ ಸೆಕ್ಯೂರಿಟಿ ಸಂಸ್ಥೆಯೇ ಹೊರಹಾಕಿದೆ.
“ಟ್ರೋಜನ್ ವೈರಸ್ ನಿಮಗೆ ಅರಿವಿಲ್ಲದಂತೆಯೇ ಕಣ್ಣಿಗೆ ಮಣ್ಣೆರಚಿ ಹಣಕಾಸು ಮಾಹಿತಿಯನ್ನು ಕದಿಯುತ್ತಿದೆ’ ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ. ಈ ಟ್ರೋಜನ್ ವೈರಸ್ ಥರ್ಡ್ ಪಾರ್ಟಿ ಅಪ್ಲಿಕೇಷನ್ ಡೌನ್ಲೋಡ್ ಮಾಡುವಂಥ ಸೈಟ್ಗಳನ್ನು ಬಳಸಿಕೊಂಡು ಮೈಕ್ರೋಸಾಫ್ಟ್ ವರ್ಡ್, ಅಡೋಬೆ ಪ್ಲ್ಯಾಶ್ ಹಾಗೂ ಇತರೆ ಅಪ್ಲಿಕೇಷನ್ಗಳಂತೆ ಸೋಗು ಹಾಕಿ ಗೊತ್ತೇ ಇಲ್ಲದಂತೆ ನಿಮ್ಮ ಮೊಬೈಲ್ ಫೋನ್ನೊಳಕ್ಕೆ ನುಸುಳುತ್ತದೆ. ಗ್ರಾಹಕರ ಹಣಕಾಸು ಆ್ಯಪ್ಗ್ಳಲ್ಲಿನ ದತ್ತಾಂಶಗಳನ್ನು ಕದಿಯುವ, ಎಸ್ಎಂಎಸ್ ಸಂದೇಶಗಳನ್ನು ಓದುವ ಮತ್ತು ಛೇದಿಸುವ ಸಾಮರ್ಥ್ಯವನ್ನು ಈ ಮಾಲ್ವೇರ್ ಹೊಂದಿದೆ.
ಇವೆಂಟ್ ಬೋಟ್ ಸದ್ಯಕ್ಕೆ ಅಮೆರಿಕ ಮತ್ತು ಐರೋಪ್ಯ ಮೂಲದ ಬ್ಯಾಂಕಿಂಗ್ ಆ್ಯಪ್ಲಿಕೇಷನ್ಗಳು, ಹಣ ವರ್ಗಾವಣೆ ಸೇವೆಗಳು, ಕ್ರಿಪ್ಟೋಕರೆನ್ಸಿ ವ್ಯಾಲೆಟ್ಗಳು, ಇತರ ಹಣಕಾಸು ಸಂಬಂಧಿ ಆ್ಯಪ್ಲಿಕೇಷನ್ ಸೇರಿದಂತೆ ಸುಮಾರು 200 ವಿವಿಧ ಆ್ಯಪ್ಲಿಕೇಷನ್ಗಳನ್ನು ಟಾರ್ಗೆಟ್ ಮಾಡಿದೆ. ಈವರೆಗೂ ಗೂಗಲ್ ಪ್ಲೇ ಸ್ಟೋರ್ನಲ್ಲಿ ಇವೆಂಟ್ ಬೋಟ್ ಕಾಣಸಿಕ್ಕಿಲ್ಲ. ಆದರೆ, ಅದು ಮೊಬೈಲ್ ಫೋನ್ನ ನೈಜ ಅಪ್ಲಿಕೇಷನ್ ನ ಸೋಗಿನಲ್ಲಿ ಕಾಣಿಸಿಕೊಂಡು ಗ್ರಾಹಕರನ್ನು ಯಾಮಾರಿಸುವ ಸಾಧ್ಯತೆ ಅಧಿಕವಾಗಿದೆ ಎಂದು ಭಾರತದ ಕಂಪ್ಯೂಟರ್ ತುರ್ತು
ಪ್ರತಿಕ್ರಿಯೆ ತಂಡ(ಸಿಇಆರ್ ಟಿ- ಇಂಡಿಯಾ) ಹೇಳಿದೆ. ಅಲ್ಲದೆ, ಯಾವುದೇ ಕಾರಣಕ್ಕೂ ವಿಶ್ವಾಸಾರ್ಹವಲ್ಲದ ಮೂಲಗಳಿಂದ, ಅಪರಿಚಿತ ವೆಬ್ ಸೈಟ್, ಲಿಂಕ್ಗಳಿಂದ ಆ್ಯಪ್ಲಿಕೇಷನ್
ಗಳನ್ನು ಡೌನ್ಲೋಡ್ ಅಥವಾ ಇನ್ಸ್ಟಾಲ್ ಮಾಡಿಕೊಳ್ಳಬೇಡಿ. ಗೂಗಲ್ ಪ್ಲೇಸ್ಟೋರ್ನಿಂದ ಕೂಡ ಯಾವುದೇ ಆ್ಯಪ್ ಡೌನ್ಲೋಡ್ ಮಾಡುವ ಮುನ್ನ ಅವುಗಳ ವಿವರವನ್ನು ಪರಿಶೀಲಿಸಿ, ಎಷ್ಟು ಡೌನ್ ಲೋಡ್ ಆಗಿದೆ, ಬಳಕೆದಾರರು ಏನನ್ನುತ್ತಾರೆ, ಗ್ರಾಹಕರ ಪ್ರತಿಕ್ರಿಯೆಯೇನು ಎಂಬ ಮಾಹಿತಿಯನ್ನು ಸೂಕ್ಷ್ಮವಾಗಿ ಓದಿಕೊಂಡೇ ಡೌನ್ಲೋಡ್ ಮಾಡಿ ಎಂದು ಸಿಇಆರ್ಟಿ
ಸಲಹೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
MUST WATCH
ಹೊಸ ಸೇರ್ಪಡೆ
Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ
ಮುಗಿದ ಅಬ್ಬರ; ಎರಡು ದಿನ ಮನೆ-ಮನೆ ಸಂದಾಯ! 1992ರ ಚುನಾವಣೆ ನೆನಪಿಸಿದ ರಣತಂತ್ರ
Lok Sabha Election: ಮತಗಟ್ಟೆಗಳಿಗೆ ತೆರಳಿದ ಅಧಿಕಾರಿಗಳು, ಸಿಬ್ಬಂದಿಗಳು
Housefull 5: ಕಾಮಿಡಿ ಜರ್ನಿಯ ʼಹೌಸ್ ಫುಲ್ʼ ಕುಟುಂಬಕ್ಕೆ ಅಭಿಷೇಕ್ ಬಚ್ಚನ್ ಎಂಟ್ರಿ
T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ