ಸಚಿವ ಸೋಮಣ್ಣ ಜತೆ ಯುವಕನ ಸಂಭಾಷಣೆ ಆಡಿಯೋ ವೈರಲ್
Team Udayavani, May 16, 2020, 8:13 AM IST
ರಾಯಚೂರು: ವಸತಿ ಸಚಿವ ವಿ.ಸೋಮಣ್ಣ ಅವರ ಜತೆ ಸಿಂಧನೂರು ತಾಲೂಕಿನ ಧಡೇಸೂಗೂರು ಗ್ರಾಮದ ಯುವಕ ನಡೆಸಿದ ದೂರವಾಣಿ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಸಚಿವರಿಗೆ ಕರೆ ಮಾಡಿದ ಯುವಕ ತಮ್ಮ ಕ್ಷೇತ್ರದಲ್ಲಿ ವಸತಿ ಯೋಜನೆಯಡಿ ಅಕ್ರಮವಾಗಿದೆ ಎಂದು ಗಮನ ಸೆಳೆದಿದ್ದಾನೆ. ಆಗ ಸಚಿವರು ಈಗ ಯಾವುದೇ ಮನೆಗಳಿಗೂ ಹಣ ನೀಡಲಾ ಗುವುದಿಲ್ಲ.
ನಾವು ಬಂದ ಮೇಲೆ ಯಾರಿಗೂ ಮನೆಗಳನ್ನು ಹಂಚಿಕೆ ಮಾಡಿಲ್ಲ. ಹಿಂದೆ ಅನರ್ಹರಿಗೆ ಹಂಚಿಕೆ ಮಾಡಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾತನಾಡಿ. ಈಗಾಗಲೇ ಇಂಥ ಪ್ರಕರಣಗಳಲ್ಲಿ ಎಂಟು ಲಕ್ಷ ಮನೆಗಳ ಹಂಚಿಕೆಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲಿಗೆ ಸುಮ್ಮನಾಗದ ಯುವಕ ಉಳ್ಳವರಿಗೇ ಅದರಲ್ಲೂ ಹಿಂದೆ ಪಡೆದವರಿಗೇ ಮತ್ತೆ ಮನೆಗಳನ್ನು ನೀಡಿದ್ದಾರೆ.
ಪಂಚಾಯತ್ನಿಂದ ಇಂಥ ಪ್ರಕರಣಗಳನ್ನು ಪತ್ತೆ ಹಚ್ಚಿ ಪಟ್ಟಿ ಮಾಡಿ ಕೊಡುತ್ತೇವೆ ಎಂದು ಪ್ರತ್ಯುತ್ತರ ನೀಡಿದಾಗ; ಹಾಗಿದ್ದರೆ ಪಟ್ಟಿ ಮಾಡಿಕೊಂಡು ಬಾ. ನಿನಗೆ ಸನ್ಮಾನ ಮಾಡುತ್ತೇನೆ. ಬಸ್ ಪ್ರಯಾಣ ದರ ಕೂಡ ನೀಡುತ್ತೇನೆ. ಅನರ್ಹರಿಗೆ ಮನೆಗಳ ಹಂಚಿಕೆ ರದ್ದು ಮಾಡುತ್ತೇನೆ ಎಂದು ಸಚಿವರು ಹೇಳಿದ್ದಾರೆ. ಆಗ ಯುವಕ ಸನ್ಮಾನವೂ ಬೇಡ, ಪ್ರಯಾಣದ ಹಣವೂ ಬೇಡ. ಅರ್ಹರಿಗೆ ಮನೆಗಳನ್ನುಕೊಟ್ಟರೆ ಸಾಕು ಎಂದಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
MUST WATCH
ಹೊಸ ಸೇರ್ಪಡೆ
Charmadi ಘಾಟ್ನಲ್ಲಿ ಟಾಟಾ ಏಸ್ ಪಲ್ಟಿ
Prajadhwani 2; ಯಾದಗಿರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಸಮಾವೇಶ
State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ
Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್
Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?