ಶಾಸಕ ನಡಹಳ್ಳಿ ದಾಸೋಹಕ್ಕೆ ಶ್ರೀಗಳ ಮೆಚ್ಚುಗೆ
Team Udayavani, May 17, 2020, 5:54 AM IST
ಮುದ್ದೇಬಿಹಾಳ: ಯಂಕಂಚಿಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಆಲಮೇಲ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಶನಿವಾರ ಇಲ್ಲಿನ ದಾಸೋಹ ನಿಲಯಕ್ಕೆ ಆಗಮಿಸಿ ಕೋವಿಡ್ ಸಂಕಷ್ಟದಲ್ಲಿ ಬಡವರ ನೋವಿಗೆ ಸ್ಪಂದಿಸುತ್ತಿರುವ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮತ್ತು ಅವರ ಪತ್ನಿ ಮಹಾದೇವಿ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.
ಈ ವೇಳೆ ಸ್ವಾಮೀಜಿಗಳು ತಂದಿದ್ದ ಹೂಮಾಲೆ ಗಳನ್ನು ದಂಪತಿಗೆ ಹಾಕಿಸಿ ಪತಿ ಪತ್ನಿ ನಡುವಿನ ಅನ್ಯೋನ್ಯ ಬಾಂಧವ್ಯದ ಮಹತ್ವ ತಿಳಿಸಿಕೊಟ್ಟರು. ನಂತರ ಅವರ ಮೇಲೆ ಪುಷ್ಪವೃಷ್ಟಿಗೈದ ಶ್ರೀಗಳು, ಜನರ ಸೇವೆ ಮಾಡಲು ಇನ್ನಷ್ಟು ಶಕ್ತಿ ಬರಲಿ ಎಂದು ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಶಾಸಕರು, ಜನಸೇವೆ ಮಾಡಲು ಶ್ರೀಗಳ ಆಶೀರ್ವಾದ ಸದಾ ಹೀಗೆಯೇ ಇರಲಿ ಎಂದು ಕೇಳಿಕೊಂಡರು. ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಬಸಮ್ಮ ಸಿದರಡ್ಡಿ, ಸುಧಾ ಪಾಟೀಲ ಮತ್ತಿತರರು ಇದ್ದರು.
ಪ್ಯಾಕಿಂಗ್ ವೀಕ್ಷಣೆ: ದಾಸೋಹ ನಿಲಯದ ಆವರಣದಲ್ಲಿ ಬಡಜನರಿಗೆ ವಿತರಿಸಲು ತಯಾರಿಸಲಾಗುತ್ತಿರುವ ಆಹಾರ ಸಾಮಗ್ರಿ ಕಿಟ್ ಪ್ಯಾಕಿಂಗ್ ಕಾರ್ಯ ವೀಕ್ಷಿಸಿದ ಶ್ರೀಗಳು, ಇದುವರೆಗೆ 30,000 ಆಹಾರ ಸಾಮಗ್ರಿ ಕಿಟ್ ಹಂಚಿಕೆಯಾಗಿರುವುದನ್ನು ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲೆಲ್ಲ ತಿರುಗಾಡಿ ಆಹಾರ ಸಾಮಗ್ರಿಗಳನ್ನು ಪರಿಶೀಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ