ನೊಣದ ಕಾಟ; ಹಣ್ಣಿನ ಮಾವು ಉಪ್ಪಿನಕಾಯಿಗೆ

ಹಣ್ಣಿಗೆ ಹಾಕಿದ ಮಾವು ಕೊಳೆಯುತ್ತಿವೆ ; ಕೈಗೆ ಬಂದ ಮಾವು ಬಾಯಿಗೆ ಬರಲಿಲ್ಲ

Team Udayavani, May 25, 2020, 10:52 AM IST

ನೊಣದ ಕಾಟ; ಹಣ್ಣಿನ ಮಾವು ಉಪ್ಪಿನಕಾಯಿಗೆ

ಸಾಂದರ್ಭಿಕ ಚಿತ್ರ

ಧಾರವಾಡ: ಸುದೀರ್ಘ‌ ಸುಗ್ಗಿ, ಮಳೆಗಾಳಿ, ಕೋವಿಡ್ ಸೇರಿ ಅನೇಕ ತೊಂದರೆಗಳನ್ನು ಎದುರಿಸಿರುವ ಆಲ್ಫೊನ್ಸೋ ಮಾವು ಬೆಳೆಗಾರರಿಗೆ ಇದೀಗ ಕೆಟ್ಟ ನೊಣದ ಕಾಟ ಶುರುವಾಗಿದ್ದು, ಕೈಗೆ ಬಂದ ಮಾವಿನ ಹಣ್ಣನ್ನು ತಿಪ್ಪೆಗೆ ಎಸೆಯಲಾಗುತ್ತಿದೆ. ಹೌದು…, ಮಾವು ಬೆಳೆಗಾರರ ದುರ್ದೈವವೋ ಏನೋ ಈ ವರ್ಷಪೂರ್ತಿ ಒಂದಿಲ್ಲ ಒಂದು ಸಂಕಷ್ಟಕ್ಕೆ ಒಳಗಾಗಿರುವ ಅವರಿಗೆ ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಅಳಿದುಳಿದ ಮಾವಿನ ಹಣ್ಣುಗಳನ್ನು ಕೂಡ ತಿಪ್ಪೆಗೆ ಎಸೆದು ಕೈ ತೊಳೆದುಕೊಳ್ಳುವ ಸ್ಥಿತಿ ಎದುರಾಗಿದೆ.

ಆಲ್ಫೊನ್ಸೋ ಮಾವಿಗೆ ಈ ಹಿಂದಿನ ದಿನಗಳಲ್ಲಿ ಮ್ಯಾಂಗೋ ಹ್ಯಾಪರ್ (ಮಾವು ಜಿಗಿ) ರೋಗ ಕಾಣಿಸಿಕೊಂಡಿತ್ತು. ಅದನ್ನು ಬಿಟ್ಟರೆ ಕಳೆದ ನಾಲ್ಕು ವರ್ಷಗಳಿಂದ ಮಳೆಗಾಳಿಯಲ್ಲಿ ಪಾರಾಗಿ ಬಂದ ಎಲ್ಲಾ ಕಾಯಿಗಳು ಉತ್ತಮವಾಗಿ ಮಾಗಿದ ಮೇಲೆ ಹಣ್ಣಿಗೆ ತಿರುಗಿ ರುಚಿ ಕಟ್ಟಾಗಿ ತಿನ್ನಲು ಬರುವಂತಿದ್ದವು. ರೈತರು ಅಷ್ಟೇ ಈ ಹಣ್ಣುಗಳನ್ನೇ ಮಾರಾಟ ಮಾಡಿ ಉಳಿದ ಹಾನಿಯನ್ನು ಇದರಲ್ಲಿ ಸರಿದೂಗಿಸಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಕೊನೆಯ ಘಟ್ಟದಲ್ಲಿ ಕೂಡ ನಿಸರ್ಗ ಮಾವು
ಬೆಳೆಗಾರರನ್ನು ಹನಿದು ಹಾಕಿದ್ದು ಅನ್ನದಾತರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

ಧಾರವಾಡ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಪರೀತವಾಗಿ ಕಾಣಿಸಿಕೊಂಡಿರುವ ಈ ಹಸಿರು ನೊಣದ ಕಾಟಕ್ಕೆ ತೋಟಗಳ ಮಾಲೀಕರು ಮಾತ್ರ ಹೈರಾಣಾಗಿಲ್ಲ, ಅದನ್ನು ಗುತ್ತಿಗೆ ರೂಪದಲ್ಲಿ ಪಡೆದುಕೊಂಡು ವ್ಯಾಪಾರ ಮಾಡುವ ದಲ್ಲಾಳಿಗಳು ಕೂಡ ದಿಕ್ಕೆಟ್ಟು ಹೋಗಿದ್ದಾರೆ.

50 ಸಾವಿರ ಟನ್‌ ಹಾನಿ: 2020ರ ಮಾವು ಬೆಳೆ ಶೇ.65ರಷ್ಟು ಆರಂಭದಲ್ಲಿಯೇ ಹಾನಿ ಕಂಡಿದೆ. ಸುದೀರ್ಘ‌ ಸುಗ್ಗಿ ಮತ್ತು ಮಾವು ಈ ವರ್ಷ ಚಿಗುರು ಪ್ರಧಾನವಾಗಿದ್ದರಿಂದ ಹೆಚ್ಚು ಗಿಡಗಳಲ್ಲಿ ಮಾವಿನ ಕಾಯಿಗಳು ಆಗಿರಲೇ ಇಲ್ಲ. ಇನ್ನು ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಿನಲ್ಲಿ ಸುರಿದ ಭಾರೀ ಮಳೆಗಾಳಿಗೆ ಆಗಿರುವ ಶೇ.35ರಷ್ಟು ಮಾವಿನ ಕಾಯಿಗಳ ಪೈಕಿ ಶೇ.15ರಷ್ಟು ಕಾಯಿ ನೆಲಕ್ಕುರುಳಿಯಾಗಿದೆ. ಇನ್ನುಳಿದ ಶೇ.20ರಷ್ಟು ಕಾಯಿಗಳಿಗೂ ಇದೀಗ ಕೆಟ್ಟ ನೊಣದ ಕಾಟ ಶನಿಯಾಗಿ ಒಕ್ಕರಿಸಿದೆ.

ಉತ್ತರ ಕರ್ನಾಟಕ ಮಾವು ಮಾರಾಟ ವ್ಯಾಪಾರಿಗಳ ಸಂಘದವರು ಅಂದಾಜು ಮಾಡಿದಂತೆ ಈ ವರ್ಷ ಧಾರವಾಡ, ಬೆಳಗಾವಿ, ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದಾಜು 50 ಸಾವಿರ ಟನ್‌ನಷ್ಟು ಉತ್ತಮ ಮಾವು ಪ್ರಕೃತಿ ವಿಕೋಪ ಮತ್ತು ರೋಗ ರುಜಿನಕ್ಕೆ ತುತ್ತಾಗಿ ಹೋಗಿದೆ. ಕಳೆದ ವರ್ಷ ಅಂದರೆ 2019ರಲ್ಲಿ ಈ ಮೂರು ಜಿಲ್ಲೆಗಳಲ್ಲಿ ಬರೊಬ್ಬರಿ 87 ಸಾವಿರ ಟನ್‌ ಆಲ್ಫೊನ್ಸೋ ಮಾವು ಉತ್ಪಾದನೆಯಾಗಿತ್ತು.

ಹಣ್ಣಿನ ಮಾವು ಉಪ್ಪಿನ ಕಾಯಿಗೆ: ಏಪ್ರಿಲ್‌ ಮೊದಲ ವಾರದಲ್ಲಿ ಮಾವಿನ ಕಾಯಿ ಕಿತ್ತು ಹಣ್ಣಿಗೆ ಹಾಕಿದವರ ಮಾವು ಕೊಳೆತಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಮಾವು ಬೆಳೆಗಾರರು ಹಣ್ಣಿನ ಬದಲು ಅದನ್ನು ಉಪ್ಪಿನ ಕಾಯಿ ಕಾರ್ಖಾನೆಗಳಿಗೆ ಸಾಗಿಸುತ್ತಿದ್ದಾರೆ. ಹಣ್ಣಾಗಿ ಹೆಚ್ಚಿನ ದರ ಪಡೆದುಕೊಳ್ಳುತ್ತಿದ್ದ ರೈತರು ಅನಿವಾರ್ಯವಾಗಿ ಇದೀಗ ಮಾವಿನ ಕಾಯಿಯನ್ನು ನೇರವಾಗಿ ತೋಟಗಳಿಂದ ಮಾವು ದಲ್ಲಾಳಿಗಳ ಅಂಗಡಿಗಳಿಗೆ ಸಾಗಿಸುತ್ತಿದ್ದಾರೆ.

ಪ್ರತಿ ಕೆ.ಜಿ.ಗೆ 20 ರೂ.ನಂತೆ ಆಲ್ಫೊನ್ಸೋ , ಕಲಮಿ, ರತ್ನಾಗಿರಿ ಸೇರಿ ಎಲ್ಲಾ ಹಣ್ಣಿನ ಮಾವುಗಳನ್ನು ಮಾವು ದಲ್ಲಾಳಿಗಳು ಕೊಂಡುಕೊಂಡು ದೊಡ್ಡ
ದೊಡ್ಡ ಉಪ್ಪಿನಕಾಯಿ ಮತ್ತು ಜ್ಯೂಸ್‌ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಕ್ವಿಂಟಲ್‌ ಲೆಕ್ಕದಲ್ಲಿ ಹಣ್ಣು ಮಾಡಿ ಮಾರಾಟ ಮಾಡಿದ್ದರೆ ಕನಿಷ್ಠ ಐದು
ಸಾವಿರ ರೂ.ಗಳ ವರೆಗೂ ಹಣ ಲಭಿಸುತ್ತಿತ್ತು. ಇದೀಗ ಒಂದು ಕ್ವಿಂಟಲ್‌ ಮಾವಿಗೆ ಬರೀ ಎರಡು ಸಾವಿರ ರೂ. ಲಭಿಸುತ್ತಿದೆ. ಅದರಲ್ಲಿ ಮಾವು
ಕೀಳುವುದು ಸಾಗಿಸುವ ಖರ್ಚು ಕೂಡ ರೈತರ ಹೆಗಲಿಗೆ ಬೀಳುತ್ತಿದೆ.

ಇಡೀ ಮಾವು ಹಣ್ಣಿಗೆ ಹಾಕಿದಾಗ ಕೊಳೆತಿರುವುದು.

ಏನಿದು ಕೆಟ್ಟ ನೊಣ?
ನೊಣಗಳ ಜಾತಿಯಲ್ಲಿ ಅನೇಕ ರೀತಿಯ ನೊಣಗಳಿವೆ. ಮಾವಿನ ಹಣ್ಣಿನ ಮೇಲೆ ಕೂರುವ ನೊಣ ಕೂಡ ಈ ವರ್ಷ ಅತೀಯಾದ ಮಳೆಯಾಗಿದ್ದರಿಂದ ಕಾಣಿಸಿಕೊಂಡಿದೆ ಎಂದು ರೈತ ವಿಜ್ಞಾನಿಗಳು ಹೇಳುತ್ತಿದ್ದಾರೆ. ನೋಡಲು ನೊಣದಂತೆ ಇದ್ದರೂ, ಸೊಳ್ಳೆಯಂತೆ ಕಾಣುವ ಈ ವಿಚಿತ್ರ ನೊಣ ಮಾವಿನ ಕಾಯಿಯ ಮೇಲೆ ಕುಳಿತು ಅದಕ್ಕೆ ತನ್ನ ಮುಳ್ಳಿನಿಂದ ಚುಚ್ಚಿ ತಿನ್ನುವ ಪ್ರಯತ್ನ ಮಾಡುತ್ತದೆ. ಆಗ ಮಾವಿನ ಕಾಯಿಯ ಮೇಲೆ ಕೊಂಚ ಕರಿ ಬಣ್ಣದ ಸಣ್ಣ ಸಣ್ಣ ಚುಕ್ಕೆಗಳು ಮೂಡುತ್ತವೆ. ಗಿಡದಲ್ಲಿರುವಾಗ ಈ ಕಾಯಿ ಪರಿಪೂರ್ಣ ಬಣ್ಣ ಬಂದು ನೋಡಲು ಚೆನ್ನಾಗಿಯೇ ಕಾಣುತ್ತದೆ. ಆದರೆ ಮಾವು ಕಿತ್ತ ಮೂರು ದಿನಕ್ಕೆ ಅದು ಮೆತ್ತಗಾಗಿ
ಅದರ ತುಂಬ ಹುಳಗಳೇ ತುಂಬಿರುತ್ತವೆ.

ಗ್ರಾಹಕರಿಗೂ ಬರೆ
ಕೆಟ್ಟ ನೊಣದ ಕಾಟಕ್ಕೆ ಬರಿ ಮಾವು ಬೆಳೆಗಾರರು ಮಾತ್ರ ಸಂಕಷ್ಟ ಅನುಭವಿಸುತ್ತಿಲ್ಲ. ಬದಲಿಗೆ ಇದು ಗ್ರಾಹಕರಿಗೂ ಕೂಡ ಬರೆ ಕೊಟ್ಟಂತಾಗಿದೆ. ಇಲ್ಲಿ ಉತ್ತಮ
ಮಾವಿನ ಹಣ್ಣುಗಳು ಗ್ರಾಹಕರ ಮನೆ ಸೇರುತ್ತಿಲ್ಲ. ಒಂದು ಡಜನ್‌ ಮಾವಿನ ಹಣ್ಣಿನಲ್ಲಿ ಕನಿಷ್ಠ ಅರ್ಧ ಮಾವು ತೀವ್ರ ಹುಳಿ ಮತ್ತು ಹುಳಬಿದ್ದ ಮಾವುಗಳೇ
ಇರುತ್ತವೆ. ಭರಪೂರ ಬಣ್ಣ, ವಾಸನೆ ಮಾತ್ರ ಮಾರುಕಟ್ಟೆ ಆವರಿಸಿದೆ. ಆದರೆ ಹಣ್ಣು ತಿಂದ ತೃಪ್ತಿ ಗ್ರಾಹಕರಿಗೂ ಇಲ್ಲವಾಗಿದೆ.

ತೋಟದಿಂದ ನೇರವಾಗಿ ತಂದ ಮಾವಿನ ಕಾಯಿಗಳನ್ನು ಮಾತ್ರ ಕೊಳ್ಳುತ್ತೇವೆ. ಸದ್ಯಕ್ಕೆ ಉತ್ತಮ  ಮಾವಿನ ಕಾಯಿಗಳಿಗೆ ಕ್ವಿಂಟಲ್‌ಗೆ 2,100 ರೂ.ಗಳ ವರೆಗೂ ಬೆಲೆ ಇದೆ. ಮಾವು ಕಿತ್ತು ಮೂರು ದಿನಗಳ ನಂತರ ತಂದ ಮಾವಿಗೆ ಬೆಲೆ ಕಡಿಮೆ.
ಶಾಂತಯ್ಯ ಗುಡ್ಡದಮಠ, ಮಾವು ವ್ಯಾಪಾರಿ.

ಮಾವು ಬೆಳೆಗಾರರಿಗೆ ಈ ವರ್ಷಪೂರ್ತಿ ಅನೇಕ ಕಂಟಕಗಳು ಎದುರಾಗಿವೆ. ಇದೀಗ ಕೆಟ್ಟನೊಣದ ಕಾಟ, ಇದರಿಂದ ಮಾವು ಬೆಳೆಗಾರರು ಈ ರ್ಷ ಸಂಪೂರ್ಣ ನಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಮಾವು ಬೆಳೆಗಾರರ ನೆರವಿಗೆ ಬರಬೇಕು.
ಮಹಾವೀರ ಜೈನರ್‌, ಮಾವು ಬೆಳೆಗಾರರ ಸಂಘದ ಅಧ್ಯಕ್ಷ

ಬಸವರಾಜ ಹೊಂಗಲ್‌

ಟಾಪ್ ನ್ಯೂಸ್

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.