ಮಹಾಮಾರಿ ಕೋವಿಡ್ ತಡೆಯಲು 52 ವರ್ಷದ ವ್ಯಕ್ತಿಯ ನರಬಲಿ ಕೊಟ್ಟ ಅರ್ಚಕ!
ಮಧ್ಯರಾತ್ರಿ ನರಸಿಂಗ್ ಪುರ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ
Team Udayavani, May 29, 2020, 1:29 PM IST
Representative Image
ಒಡಿಶಾ(ಕಟಕ್):ದೇವಿಯನ್ನು ಸಂತುಗೊಳಿಸಿ ಕೋವಿಡ್ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಂಧಾಹುಡಾ ದೇವಾಲಯದೊಳಗೆ ಅರ್ಚಕನೊಬ್ಬ 52 ವರ್ಷದ ವ್ಯಕ್ತಿಯ ಶಿರಚ್ಚೇದಗೈದು ನರಬಲಿ ಕೊಟ್ಟ ಘಟನೆ ಒಡಿಶಾದ ಕಟಕ್ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ಕೋವಿಡ್ ವೈರಸ್ ನ ಪರಿಣಾಮವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಸಾರಿ ಓಜಾ (70ವರ್ಷ) ಎಂಬ ಅರ್ಚಕ ಮಾ ಬ್ರಹ್ಮನಿಧಿ ದೇವಾಲಯದ ಆವರಣದೊಳಗೆ ಬುಧವಾರ ರಾತ್ರಿ ಸರೋಜ್ ಪ್ರಧಾನ್ (52ವರ್ಷ) ಎಂಬ ವ್ಯಕ್ತಿಯ ಶಿರಚ್ಛೇದ ಮಾಡಿರುವುದಾಗಿ ತಿಳಿಸಿದೆ.
ದೇವಾಲಯದ ಸಮೀಪವೇ ಕೃಷಿ ಭೂಮಿಯನ್ನು ಹೊಂದಿದ್ದ, ಕೆಲಸದ ನಂತರ ಸರೋಜ್ ಪ್ರಧಾನ್ ದೇವಾಲಯದ ಆವರಣದೊಳಗೆ ವಿಶ್ರಾಂತಿ ಪಡೆಯುತ್ತಿದ್ದ. ಈ ಸಂದರ್ಭದಲ್ಲಿ ಹೊರಗಡೆಯಿಂದ ವಿಶ್ರಾಂತಿ ಕೋಣೆಯ ಬಾಗಿಲನ್ನು ಅರ್ಚಕ ಹಾಕಿರುವುದಾಗಿ ವರದಿ ತಿಳಿಸಿದೆ. ನಂತರ ದೇವಿಯನ್ನು ಸಂತುಷ್ಟಗೊಳಿಸಲು ಕೊಡಲಿಯಿಂದ ಪ್ರಧಾನ್ ತಲೆಕಡಿದಿದ್ದ. ನಂತರ ಮಧ್ಯರಾತ್ರಿ ನರಸಿಂಗ್ ಪುರ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ ಎಂದು ಪೊಲೀಸ್ ಠಾಣಾಧಿಕಾರಿ ಅಲೋಕ್ ರಂಜನ್ ರೇ ತಿಳಿಸಿದ್ದಾರೆ.
ದೇವಿಯೇ ತನಗೆ ನಾಲ್ಕು ದಿನಗಳ ಹಿಂದೆ ಕನಸಿನಲ್ಲಿ ಬಂದು ಕೋವಿಡ್ 19 ವೈರಸ್ ಹೊಡೆದೋಡಿಸಲು ತನಗೆ ನರಬಲಿ ಕೊಡಬೇಕು ಎಂದು ಆಜ್ಞಾಪಿಸಿರುವುದಾಗಿ ಅರ್ಚಕ ಓಜಾ ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಅರ್ಚಕ ವ್ಯಕ್ತಿಯ ಶಿರಚ್ಛೇದ ಮಾಡಿರುವುದಾಗಿ ರೇ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ