ಕ್ವಾರಂಟೈನ್ದಿಂದ ಮನೆಗೆ ಹೋದವರಿಗೆ ಸೋಂಕು
Team Udayavani, May 30, 2020, 10:38 AM IST
ಸಾಂದರ್ಭಿಕ ಚಿತ್ರ
ಶಹಾಬಾದ: ನಗರದ ವಿವಿಧ ಕ್ವಾರಂಟೈನ್ ಕೇಂದ್ರದಿಂದ ಗುರುವಾರ ಮನೆಗೆ ತೆರಳಿದ್ದ ಸುಮಾರು ಏಳು ಜನರಿಗೆ ಶುಕ್ರವಾರ ಕೋವಿಡ್ ಸೋಂಕು ಪತ್ತೆಯಾಗಿದೆ.
ನಗರದ ಜಿಪಿಎಸ್ ಶಾಲೆಯ ಕ್ವಾರಂಟೈನ್ ಕೇಂದ್ರದಿಂದ ಗುರುವಾರ ಮನೆಗೆ ಹೋಗಿದ್ದ ನಾಲ್ವರಿಗೆ ಹಾಗೂ ಭಂಕೂರ ವಸತಿ ನಿಲಯದಲ್ಲಿದ್ದ ಮೂವರಿಗೆ ಸೋಂಕು ಕಂಡು ಬಂದಿದೆ. ನಗರ ಜಿಪಿಎಸ್ ಶಾಲೆಯಲ್ಲಿ 69 ಜನ ಮುಂಬೈ ವಲಸಿಗರನ್ನು ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ ಗುರುವಾರ ಓರ್ವ ಮಹಿಳೆಗೆ ಸೋಂಕು ಕಂಡು ಬಂದಿತ್ತು. ಅವಳನ್ನು ಕಲಬುರಗಿಗೆ ಸಾಗಿಸಿ, ಉಳಿದವರನ್ನು ಕ್ವಾರಂಟೈನ್ ಕೇಂದ್ರದಿಂದ ಮನೆಗೆ ಕಳುಹಿಸಲಾಗಿತ್ತು. ಹೀಗೆ ಕಳುಹಿಸಿದ ಮೂವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲರನ್ನು ಶುಕ್ರವಾರ ಅಂಬುಲೆನ್ಸ್ ಮೂಲಕ ಕಲಬುರಗಿಗೆ ಕಳುಹಿಸಲಾಗಿದೆ.
ನಗರದ ಜಿಪಿಎಸ್ ಶಾಲೆಯಲ್ಲಿ ಸೋಂಕು ಕಂಡು ಬಂದ ವ್ಯಕ್ತಿಯೊಬ್ಬ ಗುರುವಾರ ಗೋಳಾ (ಕೆ) ಗ್ರಾಮದ ಮನೆಯಲ್ಲಿದ್ದು, ಶುಕ್ರವಾರ ಮದುವೆ ಕಾರ್ಯಕ್ರಮವೊಂದಕ್ಕೆ ಹೋಗಿ ಬಂದಿದ್ದಾನೆ ಎನ್ನಲಾಗಿದೆ. ಆತನ ಕುಟುಂಬಸ್ಥರು ಶುಕ್ರವಾರ ಗೋಳಾ ಶಾಲೆ ಆವರಣದಲ್ಲಿ ಶಾಸಕರು ನೀಡಿದ ದಿನಸಿ ಕಿಟ್ ಪಡೆಯಲು ಜನರ ಮಧ್ಯೆ ಇದ್ದರು ಎನ್ನಲಾಗಿದೆ.
ಭಂಕೂರನಲ್ಲಿ ಕೋವಿಡ್ ಸೊಂಕು ಕಂಡು ಬಂದ ವ್ಯಕ್ತಿಗಳು ಕ್ವಾರಂಟೈನ್ ಕೇಂದ್ರದ ಸಮೀಪದಲ್ಲಿಯೇ ತಮ್ಮ ಮನೆ ಇರುವುದರಿಂದ ಇದ್ದ 14 ದಿನ ತಮ್ಮ ಮನೆಗೆ ಹೋಗಿ, ಮನೆಯವರೊಂದಿಗೆ ಬೆರೆತಿದ್ದು, ಅವರಲ್ಲಿ ಓರ್ವ ವ್ಯಕ್ತಿ ಕ್ರೂಸರ್ನಲ್ಲಿ ಕಲಬುರಗಿಗೆ ಹೋಗಿದ್ದಾನೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
NewsClick ಸ್ಥಾಪಕ ಪ್ರಬೀರ್ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!
T20 ವಿಶ್ವಕಪ್ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಪೋಷಕರಿಗೆ ಆತಂಕ