ಮೋದಿ ವಿಕಾಸಯಾತ್ರೆಯ ಸಿಂಹಾವಲೋಕನ

ಟ್ವಿಟರ್‌,ವೆಬ್‌ಸೈಟ್‌ಗಳಲ್ಲಿ ಸಾಧನೆ ಅನಾವರಣ, ದೇಶವಾಸಿಗಳಿಗೆ ಪತ್ರ

Team Udayavani, May 31, 2020, 6:00 AM IST

ಮೋದಿ ವಿಕಾಸಯಾತ್ರೆಯ ಸಿಂಹಾವಲೋಕನ

ಹೊಸದಿಲ್ಲಿ: ನಮ್ಮ ವಿಕಾಸಯಾತ್ರೆ ಅಭಿವೃದ್ಧಿ, ಸಶಕ್ತೀಕರಣ ಮತ್ತು ಸೇವೆಯ ಸಾಮೂಹಿಕ ಪ್ರಯಾಣದ ದರ್ಶನ ನೀಡುತ್ತದೆ…

-ತಮ್ಮ ಸರಕಾರದ ಸಾಧನೆಯ ಬಗ್ಗೆ ಪ್ರಧಾನಿ ಮೋದಿ ಟ್ವಿಟರ್‌ ಮತ್ತು ವೆಬ್‌ಸೈಟ್‌ನಲ್ಲಿ ಬರೆದು ಕೊಂಡದ್ದು ಹೀಗೆ. ಸರಕಾರ ವರ್ಷ ಪೂರೈಸಿರುವ ಸಂದರ್ಭ ದೇಶವಾಸಿಗಳಿಗೆ ಪತ್ರ ಬರೆದು ವರ್ಷದ ಸಾಧನೆ ಬಗ್ಗೆ ಪ್ರಧಾನಿ ಹೆಮ್ಮೆಯಿಂದ ಹೇಳಿ ಕೊಂಡಿದ್ದಾರೆ. ಜತೆಗೆ ಟ್ವಿಟರ್‌, ವೆಬ್‌ ಸೈಟ್‌ನಲ್ಲಿ ಸಾಧನೆಯ ಅನಾವರಣ ಮಾಡಿದ್ದಾರೆ.

2019ರಲ್ಲಿ ಬೃಹತ್‌ ಜನಾದೇಶದೊಂದಿಗೆ ಮೋದಿ ಮತ್ತೆ ಅಧಿಕಾರ ಹಿಡಿದರು.ಭರವಸೆ ಈಡೇರಿಸಿದ್ದರ ಫ‌ಲವಾಗಿ, ಭವಿಷ್ಯದ ಮಾರ್ಗ ನಕ್ಷೆ ಯನ್ನು ಸ್ಪಷ್ಟವಾಗಿ ತೆರೆದಿಟ್ಟ ಕಾರಣಕ್ಕಾಗಿ ಈ ಅಪರೂಪದ ವಿದ್ಯಮಾನ ಸಾಧ್ಯವಾಯಿತು’ ಎನ್ನುವ ಅಂಶ “ವಿಕಾಸಪತ್ರ’ದ ಆರಂಭದಲ್ಲಿದೆ.

ಸಾಲು ಸಾಲು ಸಾಧನೆ
“ಜಮ್ಮು – ಕಾಶ್ಮೀರ,ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳ ಉದಯ, ಐತಿಹಾಸಿಕ ಕಾರ್ಪೊರೇಟ್‌ ತೆರಿಗೆ ಕಡಿತ, ವ್ಯಾಪಾರಿಗಳಿಗೆ ಪಿಂಚಣಿ, ಬಗೆಹರಿದ ಅಯೋಧ್ಯೆ ವಿವಾದ ಪ್ರಮುಖ ಹೆಜ್ಜೆಗಳು’ಎಂದು ಉಲ್ಲೇಖೀಸಲಾಗಿದೆ.

ಕೋವಿಡ್-19ಗೆ ಪ್ರತ್ಯುತ್ತರ
ಕೋವಿಡ್-19 ಬಿಕ್ಕಟ್ಟನ್ನು ಮೋದಿ ಸರಕಾರ ಯಶಸ್ವಿಯಾಗಿ ನಿಭಾಯಿಸಿದ ಅಂಶಗಳನ್ನೂ ಪ್ರಸ್ತಾವಿಸಲಾಗಿದೆ. ದೇಶಕ್ಕೆ ವೈರಸ್‌ ದಾಳಿ ಮಾಡಿದ ಆರಂಭದಲ್ಲಿ ತೆಗೆದುಕೊಂಡ ಮುಂಜಾಗ್ರತೆಗಳು, ಕಟ್ಟುನಿಟ್ಟಿನ ಲಾಕ್‌ಡೌನ್‌, ವೈದ್ಯಕೀಯ ಸೌಲಭ್ಯ ಹೆಚ್ಚಿಸಿರುವುದು, ಜಗತ್ತಿನಲ್ಲೇ ಅತಿಹೆಚ್ಚು ಪಿಪಿಇ ಕಿಟ್‌ ಉತ್ಪಾದನೆ, ಬಡವರ ಪರವಾಗಿ ತೆಗೆದುಕೊಂಡ ಮಹತ್ವದ ಯೋಜನೆಗಳು ಮೋದಿ ಸರಕಾರ ಕೋವಿಡ್-19 ಯುದ್ಧದಲ್ಲಿ ಗೆಲ್ಲುವಂತೆ ಮಾಡಿದವು ಎಂಬ ವಿವರಗಳಿವೆ.

ವಿದೇಶಾಂಗ ನೀತಿಯೇ ಆಗಲಿ, ರಾಷ್ಟ್ರೀಯ ಭದ್ರತೆ ವಿಚಾರವೇ ಆಗಲಿ, ಭಾರತ ಯಾವಾಗಲೂ ಪ್ರಥಮ ಸ್ಥಾನದಲ್ಲಿರಬೇಕೆಂದು ಮೋದಿ ಬಯಸುತ್ತಾರೆ. ಈ ಒಂದು ವರ್ಷದಲ್ಲಿ ಕೇಂದ್ರ ಸರಕಾರ ತೆಗೆದುಕೊಂಡ ದಿಟ್ಟ ಮತ್ತು ಐತಿಹಾಸಿಕ ನಿರ್ಧಾರಗಳಿಂದ ದೇಶ ವೇಗವಾಗಿ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಎಂಬುದನ್ನು “ವಿಕಾಸ ಪತ್ರ’ ಹೇಳಿದೆ.

ದೇಶವಾಸಿಗಳಿಗೆ ಪ್ರಧಾನಿ ಪತ್ರ
“ಕಳೆದ ವರ್ಷ ಈ ದಿನ, ಮೇ 30, 2019ರಂದು ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಆರಂಭವಾಯಿತು. ಸಾಮಾನ್ಯ ದಿನಗಳಾಗಿದ್ದರೆ ನಾನು ನಿಮ್ಮ ನಡುವೆ ಇದ್ದು, ವಾರ್ಷಿಕೋತ್ಸವವನ್ನು ಸಂಭ್ರಮಿಸುತ್ತಿದ್ದೆ. ಆದರೆ ಕೊರೊನಾದ ಸಂದಿಗ್ಧತೆ ಅವಕಾಶ ನೀಡುತ್ತಿಲ್ಲ. ಅದಕ್ಕಾಗಿ ಈ ಪತ್ರದ ಮೂಲಕ ನಿಮ್ಮ ಆಶೀರ್ವಾದ ಪಡೆಯುತ್ತಿದ್ದೇನೆ’

ಇದು ದೇಶವಾಸಿಗಳಿಗೆ ಪ್ರಧಾನಿ ಮೋದಿ ಬರೆದ ಪತ್ರದ ಆರಂಭಿಕ ಸಾಲುಗಳು. “ಕೋವಿಡ್-19 ದಾಳಿಗೈದಾಗ ಭಾರತ ನಲುಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ವಿಶ್ವಾಸ ಮತ್ತು ಸುಸ್ಥಿರತೆಯ ಮೂಲಕ ಜಗತ್ತು ನಮ್ಮನ್ನು ನೋಡುವ ವಿಧಾನವನ್ನು ನೀವು ಬದಲಾಯಿಸಿದ್ದೀರಿ. ವಿಶ್ವದ ಪ್ರಬಲ ಮತ್ತು ಸಮೃದ್ಧ ದೇಶಗಳೂ ಸರಿಗಟ್ಟಲಾಗದ ಸಾಮೂಹಿಕ ಶಕ್ತಿ ಪ್ರದರ್ಶನ ಮಾಡಿದ್ದೀರಿ. ಲಾಕ್‌ಡೌನ್‌ ಪಾಲನೆಯಲ್ಲಿ “ಏಕ ಭಾರತ, ಶ್ರೇಷ್ಠ ಭಾರತ’ ಕಲ್ಪನೆಯನ್ನು ಎತ್ತಿಹಿಡಿ ದಿದ್ದೀರಿ’ ಎಂದು ಮೋದಿ ಶ್ಲಾಘಿಸಿದ್ದಾರೆ.

60 ವರ್ಷಗಳ ಐತಿಹಾಸಿಕ ತಪ್ಪುಗಳಿಗೆ ಮುಕ್ತಿ
“ಆರು ದಶಕಗಳ ಐತಿಹಾಸಿಕ ತಪ್ಪುಗಳನ್ನು ಮೋದಿ ಸರಕಾರ ಕೇವಲ ಒಂದೇ ವರ್ಷದಲ್ಲಿ ಸರಿಪಡಿಸಿದೆ. ಮೋದಿ 2.0 ಸರಕಾರದ ಒಂದನೇ ವರ್ಷದ ಹಾದಿ ತುಂಬ ಐತಿ ಹಾಸಿಕ ಸಾಧನೆಗಳೇ ತುಂಬಿವೆ. ಪ್ರಧಾನಿ ಅವರು ಕಠಿನ, ದೊಡ್ಡ ನಿರ್ಧಾರಗಳಿಂದ ದೇಶದ ರೂಪುರೇಷೆ ಬದ ಲಿಸಿ ದ್ದಾರೆ’ ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.”ಮೊದಲ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಪ್ರಧಾನಿ ಮೋದಿ ಅವರನ್ನು ಅಭಿನಂದಿಸುತ್ತೇನೆ. ಸ್ವಾವ ಲಂಬಿ ಭಾರತಕ್ಕೆ ಸರಕಾರವು ಭದ್ರ ಅಡಿಪಾಯ ಹಾಕಿದೆ’ ಎಂದು ಶಾ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ರಾಹುಲ್‌ಗೆ ನಡ್ಡಾ ತಿರುಗೇಟು
“ಈ ಒಂದು ವರ್ಷದಲ್ಲಿ ಮೋದಿ ಮುಂದೆ ಹಲವು ಸವಾಲುಗಳಿದ್ದವು. ಕಠಿನ, ದಿಟ್ಟ ನಿರ್ಧಾರಗಳ ಮೂಲಕ ಮೋದಿ ಅವುಗಳಿಗೆ ಉತ್ತರಿಸಿದ್ದಾರೆ. ರಾಹುಲ್‌ ಗಾಂಧಿಯವರ ತಿಳಿವಳಿಕೆ ಮತ್ತು ಅಧ್ಯಯನ ಬಹಳ ಸೀಮಿತ. ಅದಕ್ಕಾಗಿ ಲಾಕ್‌ಡೌನ್‌ ಅನ್ನು ಪ್ರಶ್ನಿಸು ವಾಗ ಅವರು ಗೊಂದಲಮಯ ಹೇಳಿಕೆ ನೀಡುತ್ತಿದ್ದಾರೆ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ.

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.