ಹುಣಸೂರು: ಕೊಟ್ಟಿಗೆಗೆ ನುಗ್ಗಿ ಹಸುವನ್ನು ಗಾಯಗೊಳಿಸಿದ ಚಿರತೆ
Team Udayavani, May 31, 2020, 9:05 AM IST
ಹುಣಸೂರು: ಚಿರತೆಯೊಂದು ದನದ ಕೊಟ್ಟಿಗೆಗೆ ದಾಳಿ ನಡೆಸಿ ಹಸುವನ್ನು ಗಾಯಗೊಳಿಸಿದ ಘಟನೆ ತಾಲೂಕಿನ ಹನಗೋಡು ಹೋಬಳಿಯ ಹೆಮ್ಮಿಗೆ ಕಾಲೋನಿಯಲ್ಲಿ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಚಿರತೆಯು ಹೆಮ್ಮಿಗೆ ಕಾಲೋನಿಯ ತೋಟದ ಮನೆಯಲ್ಲಿ ವಾಸವಿರುವ ನಿವೃತ್ತ ಯೋಧ ಪುರುಷೋತ್ತಮ್ ಎಂಬುವವರ ತೋಟದ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಹಸುಗಳ ಅರಚಾಟ ಕೇಳಿ ಮನೆಯವರು ಕೂಗಾಟ ನಡೆಸಿದ ವೇಳೆ ಚಿರತೆ ಪರಾರಿಯಾಗಿದೆ ಎನ್ನಲಾಗಿದೆ.
ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ಗ್ರಾಮದ ಬಳಿಯ ಕಾಡು ಬಫರ್ ಝೋನ್ ಗೆ ಬರುವುದರಿಂದ ವನ್ಯ ಜೀವಿ ವಿಭಾಗದವರು ಸೆರೆ ಹಿಡಿಯಬೇಕು ಎನ್ನುತ್ತಾರೆ. ವನ್ಯಜೀವಿ ವಿಭಾಗದವರು ನಮ್ಮ ವ್ಯಪ್ತಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ. ಈ ಭಾಗದಲ್ಲಿ ಆಗಾಗ್ಗೆ ಚಿರತೆ ದಾಳಿ ನಡೆಸುತ್ತಲೇ ಇದೆ ವಯೋವೃದ್ದ ದಂಪತಿಗಳು ಮಾತ್ರ ವಾಸವಿದ್ದು, ಸಾಕು ಪ್ರಾಣಿಗಳ ಜೀವ ಉಳಿಸುವಂತೆ ಮನವಿ ಮಾಡಿದ್ದಾರೆ.
ತಾಲೂಕಿನ ಇತರೆಡೆಯೂ ಹಾವಳಿ: ತಾಲೂಕಿನ ಹನಗೋಡು ಗ್ರಾಮದ ಲಕ್ಷಣ ತೀರ್ಥ ನದಿ ದಡದಲ್ಲಿರುವ ರಮೇಶ್ ಎನ್ನುವವರ ತೋಟಕ್ಕೆ ನುಗ್ಗಿದ ಚಿರತೆ ಕೋಳಿಗಳನ್ನು ಕೊಂದು ತಿಂದು ಹಾಕಿದೆ. ಇನ್ನು ನಗರಕ್ಕೆ ಸಮೀಪದ ಅತ್ತಿಗುಪ್ಪೆ ಗ್ರಾಮದಲ್ಲಿ ಹಾಡುಹಗಲೇ ಚಿರತೆ ಕಾಣಿಸಿಕೊಂಡಿದೆ. ಇದರಿಂದ ರೈತರು, ಸಾರ್ವಜನಿಕರು ಭಯಭೀತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padma Shri: ಬದುಕಿಗಾಗಿ ದಿನಗೂಲಿ ಮಾಡುತ್ತಿರುವ ಪದ್ಮಶ್ರೀ ಪುರಸ್ಕೃತ ಕಲಾವಿದ!
Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಸಾವು
IPL 2024; ಧೋನಿ ಬದಲು ಸಿಎಸ್ ಕೆ ತಂಡದಲ್ಲಿ ವೇಗಿಯನ್ನು ಆಡಿಸಿ..: ಹರ್ಭಜನ್ ಸಿಂಗ್ ಟೀಕೆ
ಇಸ್ರೇಲ್ ದೇಶದಲ್ಲಿ ಅಲ್ಜಝೀರಾ ಸುದ್ದಿ ವಾಹಿನಿ ಶಾಶ್ವತ ಸ್ಥಗಿತ!
LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್