ಮಿಡತೆ ಪತ್ತೆ ಸ್ಥಳಕ್ಕೆ ಕೃಷಿ ಅಧಿಕಾರಿ ಭೇಟಿ ; ಮಿಡತೆ, ಎಲೆಗಳ ಮಾದರಿ ಸಂಗ್ರಹ
Team Udayavani, Jun 1, 2020, 10:48 AM IST
ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಿಡತೆ ಹಾಗೂ ಮಿಡತೆ ತಿಂದ ಎಲೆಗಳನ್ನು ಸಂಗ್ರಹಿಸಿದರು.
ಕಲ್ಲುಗುಡ್ಡೆ: ಕಡಬ ತಾ|ನ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ರೆಂಜಿಲಾಡಿಯಲ್ಲಿ ಹೇರ ಆನಂದ ಅವರ ಜಾಗದಲ್ಲಿ ಮಿಡತೆ ಹಿಂಡು ಕಂಡು ಬಂದ ಸ್ಥಳಕ್ಕೆ ರವಿವಾರ ಕೃಷಿ ಇಲಾಖಾ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಣಾಜೆ ಕಾಡಂಚಿನ ಪ್ರದೇಶದಲ್ಲಿರುವ ಈ ಕೃಷಿ ತೋಟದಲ್ಲಿರುವ ಗಿಡಗಳ, ಮರಗಳ ಎಲೆಗಳಲ್ಲಿ ಕಳೆದ ಶುಕ್ರವಾರದಿಂದ ಸಾಯಂಕಾಲ ವೇಳೆಯಲ್ಲಿ ಮಿಡತೆಗಳ ಹಿಂಡು ಬೀಡು ಬಿಟ್ಟು ಎಲೆಗಳನ್ನು ತಿನ್ನುತ್ತಿದ್ದವು. ಈ ಬಗ್ಗೆ ಮನೆಯವರು ಕೃಷಿ ಇಲಾಖೆಗೆ ಮಾಹಿತಿ ನೀಡಿದ್ದರು. ರವಿವಾರ ಸ್ಥಳಕ್ಕೆ ಭೇಟಿ ನೀಡಿದ ಕಡಬ ಕೃಷಿ ಅಧಿಕಾರಿ ತಿಮ್ಮಪ್ಪ ಗೌಡ ಅವರು ಬಾಧಿತ ಪ್ರದೇಶ ಪರಿಶೀಲನೆ ನಡೆಸಿ ಮಿಡತೆ ಹಾಗೂ ಅದು ತಿಂದ ವಿವಿಧ ಬಗೆಯ ಗಿಡಗಳ ಸೊಪ್ಪುಗಳನ್ನು ಸಂಗ್ರಹಿಸಿ ವಿಜ್ಞಾನಿಗಳ ಸಂಶೋಧನೆಗಾಗಿ ರವಾನಿಸಿದ್ದಾರೆ.
ಬಿಸಿಲಿಗೆ ಕಾಡಿನಲ್ಲಿ ತರೆಗೆಲೆಯ ಮಧ್ಯೆ ಮರೆ ಯಾಗಿ ವಾತಾವರಣ ತಂಪಾದ ಸಮಯದಲ್ಲಿ ಎಲೆಗಳ ಮೇಲೆ ಕೂತು ಎಲೆಗಳನ್ನು ಆಹಾರ ವನ್ನಾಗಿಸುತ್ತವೆ. ಹೇರ ಪ್ರದೇಶ ಕೊಣಾಜೆ ಕಾಡಂಚಿನ ಪ್ರದೇಶವಾಗಿರುವುದರಿಂದ ಈ ಪ್ರದೇಶಕ್ಕೆ ಬಹು ಬೇಗನೆ ಮಿಡತೆಗಳು ಆಗಮಿಸುತ್ತವೆ. ಇಲ್ಲಿರುವ ಮಿಡತೆ ಪ್ರಸ್ತುತ ಪ್ರಚಲಿತದಲ್ಲಿರುವ ಮರುಭೂಮಿ ಲೋಕಷ್ಟ್ ಅಲ್ಲ. ಈ ಮಿಡತೆ ಕೃಷಿ ತಜ್ಞರ ಪ್ರಕಾರ ಸ್ಟೋಟೆಡ್ ಕಾಫಿ ಗ್ರಾಸ್ ಹೋಪರ್ ಜಾತಿಯದ್ದಾಗಿದೆ. ಇದನ್ನು ಸಂಹಾರ ಮಾಡಲು ಸಾಧ್ಯವಿದೆ. ಮಿಡತೆ ಹಾವಳಿ ಕಂಡು ಬಂದಲ್ಲಿ ತತ್ಕ್ಷಣ ಕೃಷಿ ಇಲಾಖೆಯ ಗಮನಕ್ಕೆ ತರಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ.
ಮುಂಡಾಜೆಯಲ್ಲೂ ಮಿಡತೆ
ಮುಂಡಾಜೆ: ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೃಷಿಕರೋರ್ವರ ರಬ್ಬರ್ ತೋಟದಲ್ಲಿ ರವಿವಾರ ಮಿಡತೆಗಳು ಕಂಡು ಬಂದಿವೆ. ಗುಂಪಾಗಿರುವ ಮಿಡತೆಗಳು ಗಿಡಗಳ ಸೊಪ್ಪನ್ನು ತಿನ್ನುತ್ತಿವೆ.
ಕೃಷಿ ಇಲಾಖೆ ಸಲಹೆ
ವಿವಿಧ ಉಪಕರಣಗಳನ್ನು ಉಪಯೋಗಿಸಿ ದೊಡ್ಡ ಶಬ್ದದೊಂದಿಗೆ ಮಿಡತೆಗಳನ್ನು ಇತರೆಡೆಗೆ ಓಡಿಸುವುದು, ಬೇವಿನ ಮೂಲದ ಕೀಟನಾಶಕವನ್ನು ಬೆಳೆಗಳ ಮೇಲೆ ಸಿಂಪಡಿಸಿ ಬೆಳೆ ಹಾನಿ ತಪ್ಪಿಸುವುದು, ಕೀಟ ಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿ ಹಾಕುವುದು, ಕೀಟವು ಮರಿಹುಳಗಳಾಗಿದ್ದಲ್ಲಿ ಬಾಧಿತ ಪ್ರದೇಶದಲ್ಲಿ ಕನಿಷ್ಠ 2 ಅಡಿ ಆಳ ಮತ್ತು 3 ಅಡಿ ಅಗಲದ ಗುಂಡಿ ತೋಡಿ ಮರಿಹುಳಗಳನ್ನು ಸೆರೆಹಿಡಿದು ಸಂಹರಿಸುವುದು, ಮಿಡತೆ ಬರುವ ದಿಕ್ಕಿಗೆ ಯಂತ್ರಗಳ ಸಹಾಯದಿಂದ ಜ್ವಾಲೆ ಎಸೆಯುವುದು, ಮಿಡತೆ ಹಗಲಲ್ಲಿ ಸಂಚರಿಸಿ ಸಾಯಂಕಾಲ ಸಮಯದಲ್ಲಿ ಮರಗಿಡಗಳ ಮೇಲೆ ವಿಶ್ರಾಂತಿ ಪಡೆಯುವುದರಿಂದ ಯಂತ್ರದ ಮೂಲಕ ಅಗತ್ಯ ಕ್ರಮಕೈಗೊಂಡು ಕ್ಲೋರೊಪೈರಿಪಾಸ್ ಎಂಬ ಕೀಟನಾಶಕವನ್ನು ಸಿಂಪಡಣೆ ಮಾಡುವ ಸಲಹೆಯನ್ನು ಕೃಷಿ ಇಲಾಖೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
Desi Swara: ಮಸ್ಕತ್- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ