ರಾಚವಿ ವಿಸ್ತರಣೆಗೆ ಸ್ಥಳ ಪರಿಶೀಲನೆ
Team Udayavani, Jun 1, 2020, 11:55 AM IST
ಹಿರೇಬಾಗೇವಾಡಿ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಭಿವೃದ್ಧಿ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಹಿರೇಬಾಗೇವಾಡಿ ಗ್ರಾಮದ ಮಲ್ಲಪ್ಪನ ಗುಡ್ಡದ ಸರಕಾರಿ ಗಾಯರಾಣ ಪ್ರದೇಶ ರಾಚವಿ ವಿಸ್ತರಣೆಗೆ ಸೂಕ್ತವಾಗಿದ್ದು, ಇದು ಬೆಳಗಾವಿ ನಗರ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಮೀಪವಾಗಿದೆ.ಆದಷ್ಟು ಬೇಗನೆ ಮುಖ್ಯಮಂತ್ರಿಯವರೊಡನೆ ಚರ್ಚೆ ಮಾಡಿ ಸ್ಥಳ ಮಂಜೂರು ಮಾಡಿಸುವುದಾಗಿ ತಿಳಿಸಿದರು.
ಅಲ್ಲದೇ ಬೆಳಗಾವಿ-ಧಾರವಾಡ ರೈಲು ಮಾರ್ಗ ಇಲ್ಲಿಂದಲೇ ಹಾದು ಹೋಗುವುದರಿಂದ ವಿ.ವಿ ಅಭಿವೃದ್ಧಿಗೆ ಅನುಕೂಲವಾಗುವಂತೆ ಕೇಂದ್ರ ಮತ್ತುರಾಜ್ಯಸರ್ಕಾರದ ಜೊತೆ ಚರ್ಚಿಸಿ ರೇಲ್ವೆ ನಿಲ್ದಾಣ ಮಾಡಿಸುವುದಾಗಿ ಹೇಳಿದರು.
ರಾಚವಿ ಕುಲಪತಿ ಪ್ರೊ| ರಾಮಚಂದ್ರಗೌಡ ಮಾತನಾಡಿ, ಈಗಿನ ವಿಶ್ವವಿದ್ಯಾಲಯ ಪ್ರದೇಶವು ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆಯ ಅಧೀನದಲ್ಲಿರುವುದರಿಂದ ಯಾವುದೇ ರೀತಿ ಅಭಿವೃದ್ಧಿಗೆ ಅವಕಾಶವಿಲ್ಲದೆ ವಿ.ವಿ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದರು.
ರಾಚವಿ ಹೋರಾಟ ಸಮಿತಿ ಸಂಚಾಲಕ ಮಂಜುನಾಥ ವಸ್ತ್ರದ ಮಾತನಾಡಿ, ವಿವಿ ವಿಸ್ತರಣೆಗೆ ಗಾಯರಾಣ ಜಾಗವನ್ನು ಹಸ್ತಾಂತರಿಸುವುದು ಈ ಭಾಗದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದು ನುಡಿದರು.
ವಿವಿ ಕುಲಸಚಿವ ಬಸವರಾಜ ಪದ್ಮಶಾಲಿ, ಮೌಲ್ಯಮಾಪನ ಕುಲಸಚಿವ ಹುರಕಡ್ಲಿ, ಹಣಕಾಸು ಅಧಿಕಾರಿ ಪ್ರೊ| ಡಿ.ಎನ್.ಪಾಟೀಲ, ಪ್ರಾಚಾರ್ಯ ಎಂ. ಜಯಪ್ಪ, ನ್ಯಾಯವಾದಿ ಆರ್.ಎನ್. ಪಾಟೀಲ, ಗ್ರಾಮಸ್ಥರಾದ ವೈಜುಗೌಡಾ ಪಾಟೀಲ, ಎನ್.ಎಸ್.ಪಾಟೀಲ, ಸಿದ್ದಾರೂಡ ಹೊನ್ನನ್ನವರ, ಬಾಪು ನಾವಲಗಟ್ಟಿ, ಯಲ್ಲಪ್ಪ ಧರೆಣ್ಣವರ, ರಾಜು ಹಂಚಿನಮನಿ, ರಾಜು ರೊಟ್ಟಿ, ಶ್ರೀಶೈಲ ಪಡಗಲ್, ಯೂಕೂಬ ದೇವಲಾಪೂರ, ಇತರರು ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ