ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತತ್ಕಾಲ್‌ಗೆ ಆದ್ಯತೆ!

2021ರ ಹೊತ್ತಿಗೆ ಗುತ್ತಿಗೆ ಆಧಾರಿತ, ತಾತ್ಕಾಲಿಕ ಉದ್ಯೋಗಿಗಳ ನೇಮಕ ಹೆಚ್ಚಳ ನಿರೀಕ್ಷೆ

Team Udayavani, Jun 3, 2020, 11:39 AM IST

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತತ್ಕಾಲ್‌ಗೆ ಆದ್ಯತೆ!

ಸಾಂದರ್ಭಿಕ ಚಿತ್ರ

ಒಂದು ಕಡೆ ಕೋವಿಡ್ ಹಾವಳಿ ಏರುತ್ತಲೇ ಇದೆ. ಮತ್ತೂಂದು ಕಡೆ ಭಾರತೀಯರು ದಿಗ್ಬಂಧನದಿಂದ ಹೊರಬಂದು ಸಹಜ ಜೀವನಕ್ಕೆ ಮರಳಲು ಸಜ್ಜಾಗಿದ್ದಾರೆ. ಈ ಹಂತದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಇದನ್ನೇ ಆಧರಿಸಿರುವ ಸೇವೆಗಳಲ್ಲಿ ಒಂದು ಮಹತ್ವದ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶಾಶ್ವತ ನೌಕರರ ಬದಲು, ಗುತ್ತಿಗೆ ಆಧಾರದಲ್ಲಿ ಉದ್ಯೋಗಿಗಳನ್ನು ತೆಗೆದುಕೊಳ್ಳುವ ಪ್ರಮಾಣ ಏರುತ್ತದೆ. ಅಂದರೆ ತತ್ಕಾಲಕ್ಕೆ ಕೆಲಸ ಮಾಡುವರ ಸಂಖ್ಯೆ ಜಾಸ್ತಿಯಾಗುತ್ತದೆ. ಯಾಕೆ? ಹೇಗೆ?

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕಷ್ಟದಲ್ಲಿದೆ
ಸದ್ಯ ಕೋವಿಡ್ ಕಾರಣಕ್ಕೆ ಮಾಹಿತಿ ತಂತ್ರಜ್ಞಾನ ಮತ್ತು ಇದನ್ನೇ ಆಧರಿಸಿರುವ ವ್ಯವಹಾರ ನಡೆಸಿರುವ ಕಂಪನಿಗಳ ವಹಿವಾಟು ಕುಗ್ಗಿದೆ. ಈ ಎಲ್ಲ ಕಂಪನಿಗಳು ತಮ್ಮ ಆದಾಯಕ್ಕಾಗಿ ನೆಚ್ಚಿಕೊಂಡಿರುವುದು ಅಮೆರಿಕ ಮತ್ತು ಯೂರೋಪ್‌ ದೇಶಗಳನ್ನು. ಆದರೆ ಕೊರೊನಾದಿಂದ ಆ ದೇಶಗಳೇ ನಲುಗಿವೆ! ಆದ್ದರಿಂದ ಉದ್ಯೋಗಿಗಳನ್ನು ಸಾಕುವ ಸ್ಥಿತಿಯಲ್ಲಿ ಅವಿಲ್ಲ.

ಯಾಕೆ ಗುತ್ತಿಗೆ ಕೆಲಸಗಾರರಿಗೇ ಆದ್ಯತೆ?
ನಿಧಾನಕ್ಕೆ ಯೂರೋಪ್‌ ಮತ್ತು ಅಮೆರಿಕದಲ್ಲಿ ಮತ್ತೆ ಎಲ್ಲ ರೀತಿಯ ಸೇವೆಗಳು ಆರಂಭವಾಗುತ್ತಿವೆ. ಹಾಗೆಯೇ ವಿವಿಧ ಕಂಪನಿಗಳು ತಮ್ಮ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲ್‌ ಮಾಡಿಕೊಳ್ಳುವತ್ತ ಗಮನ ಹರಿಸಿವೆ. ಈ ಹಂತದಲ್ಲಿ ಮಾಹಿತಿ ತಂತ್ರಜ್ಞಾನಾಧಾರಿತ ಸೇವೆಗಳಿಗೆ ಮಹತ್ವ ಸೃಷ್ಟಿಯಾಗುತ್ತಿದೆ. ಆದರೆ ಕಂಪನಿಗಳು ಶಾಶ್ವತವಾಗಿ ಕೆಲಸಕ್ಕೆ ತೆಗೆದುಕೊಳ್ಳುವ ಬದಲು, ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದಕ್ಕೆ
ಆದ್ಯತೆ ನೀಡುತ್ತವೆ. ಇದಕ್ಕಿರುವ ಕಾರಣಗಳು ಹೀಗಿವೆ…

ನಿರ್ದಿಷ್ಟ ಯೋಜನೆಗಳಿಗೆ ತಕ್ಕಂತೆ ನೇಮಕ: ಐಟಿ ಕಂಪನಿಗಳು ತಾವು ಒಪ್ಪಿಕೊಳ್ಳುವ ನಿರ್ದಿಷ್ಟ ಯೋಜನೆಗಳಿಗೆ ತಕ್ಕಂತೆ ನೇಮಕ ಮಾಡಿಕೊಳ್ಳುವುದಕ್ಕೆ ಗಮನ ಹರಿಸುತ್ತವೆ. ಆ ಯೋಜನೆ ಮುಗಿದ ಮೇಲೆ ಉದ್ಯೋಗಿಗಳ ಕೆಲಸವೂ ಮುಗಿಯುತ್ತದೆ.

ಬದಲಾವಣೆ ಸುಲಭ: ಐಟಿ ಕಂಪನಿಗಳು ತರಹೇವಾರಿ ಯೋಜನೆಗಳನ್ನು ಒಪ್ಪಿಕೊಳ್ಳುತ್ತವೆ. ಇದಕ್ಕೆ ಅದೇ ರೀತಿಯ ಕುಶಲ ಕೆಲಸಗಾರರು ಬೇಕು. ಆಗ ಬೇಡದವರನ್ನು ಬಿಟ್ಟು ಹೊಸಬರನ್ನು ತೆಗೆದುಕೊಳ್ಳಬಹುದು.

ಫ‌ಲಿತಾಂಶ ಜಾಸ್ತಿ: ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಾಗ, ಕೆಲಸಗಾರರಿಗೆ ಗುರಿ ನೀಡಲಾಗಿರುತ್ತದೆ. ಆದ್ದರಿಂದ ಕಂಪನಿಗಳಿಗೆ ಫ‌ಲಿತಾಂಶ ಜಾಸ್ತಿ ಸಿಗುತ್ತದೆ. ಸಂಬಳದ ಸೋರಿಕೆಯೂ ಕಡಿಮೆ.

ಐಟಿಗೆ ವಿತ್ತ ವಲಯದಿಂದಲೂ ಸೇರ್ಪಡೆ
ಕಳೆದ ಕೆಲವು ವಾರಗಳಿಂದ ಸಿಬ್ಬಂದಿ ನೇಮಕ ಸಂಸ್ಥೆಗಳು ಒಂದು ವಿಶಿಷ್ಟ ಸಂಗತಿ ಗಮನಿಸಿವೆ. ಐಟಿ ಸಂಸ್ಥೆಗಳಿಗೆ ಬ್ಯಾಂಕ್‌, ಆರ್ಥಿಕ ಸೇವೆಗಳು, ವಿಮಾ ತಜ್ಞರು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳಾಗಿ ಸೇರಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣವೇನೆಂದರೆ ವಿತ್ತ ಆಧಾರಿತ ಸಂಸ್ಥೆಗಳು, ವಿಮಾ ಕಂಪನಿಗಳು, ಮ್ಯೂಚ್ಯುವಲ್‌ ಫ‌ಂಡ್‌ಗಳು, ಬ್ಯಾಂಕ್‌ಗಳು ತಮ್ಮ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲು, ಬಲಿಷ್ಠ ಮಾಡಲು ಹೊರಟಿವೆ. ಆಗ ತಜ್ಞರ ನೆರವು ಬೇಕಾಗುವುದರಿಂದ ಈ ರೀತಿಯ ಬದಲಾವಣೆಯಾಗಿದೆ.

ಯಾವ್ಯಾವ ಉದ್ಯೋಗಗಳಿಗೆ ಬೇಡಿಕೆ?
ಎಲ್ಲ ಕಡೆ ಕಂಪ್ಯೂಟರೀಕೃತ ವ್ಯವಸ್ಥೆ, ಆನ್‌ಲೈನ್‌ ಸೇವೆಗಳು, ಅದಕ್ಕೆ ಪೂರಕವಾದ ಇತರೆ ವ್ಯವಸ್ಥೆಗಳಿಗೆ ಗರಿಷ್ಠ ಆದ್ಯತೆ ಶುರುವಾಗಿದೆ. ಆದ್ದರಿಂದ ಈಗ ಮಾಹಿತಿ ತಂತ್ರಜ್ಞಾನಾಧಾರಿತ ಉದ್ಯೋಗಗಳಿಗೆ ಬೇಡಿಕೆಯಿದೆ. ಅವು ಹೀಗಿವೆ…

? ಡಿಜಿಟಲ್‌ ಪರಿವರ್ತನೆ ತಜ್ಞರು (ಟ್ರಾನ್ಸ್‌ಫಾರ್ಮೇಶನ್‌ ಎಕ್ಸ್‌ಪರ್ಟ್ಸ್)
? ಮಾಹಿತಿ ವಿಜ್ಞಾನಿಗಳು (ಡಾಟಾ ಸೈಂಟಿಸ್ಟ್ಸ್) ಮತ್ತು ಸಂಖ್ಯಾತಜ್ಞರು (ಸ್ಟಾಟಿಸ್ಟಿಶಿಯನ್ಸ್‌)
? ಮಾಹಿತಿ ತಂತ್ರಜ್ಞಾನ ಭದ್ರತೆ (ಐಟಿ ಸೆಕ್ಯುರಿಟಿ) ಮತ್ತು ನೆಟ್‌ವರ್ಕ್‌ ವಿನ್ಯಾಸಕರು (ಆರ್ಕಿಟೆಕ್ಟ್ಸ್)
? ಕ್ಲೌಡ್‌, ಉದ್ದಿಮೆ ಬುದಿಟಛಿಮತ್ತೆ (ಬ್ಯುಸಿನೆಸ್‌ ಇಂಟೆಲಿಜೆನ್ಸ್‌), ಕೃತಕ ಬುದಿಟಛಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌)
? ತಂತ್ರಾಂಶ ತಯಾರಕರು (ಸಾಫ್ಟ್ವೇರ್‌ ಡೆವಲಪರ್ಸ್‌)

ತಾತ್ಕಾಲಿಕ ಉದ್ಯೋಗಿಗಳ ಸಂಖ್ಯೆ 7 ಲಕ್ಷಕ್ಕೇರಿಕೆ?
ದೇಶದಲ್ಲಿರುವ 40 ಲಕ್ಷ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ಪೈಕಿ 5 ಲಕ್ಷ ಮಂದಿ ಗುತ್ತಿಗೆ ಆಧಾರದ ಕೆಲಸ ಹೊಂದಿದ್ದಾರೆ (2018ರ ಮಾಹಿತಿ).
2021ರ ಹೊತ್ತಿಗೆ ಈ ಪ್ರಮಾಣ ಶೇ.13ರಷ್ಟು ಏರಿ, ತಾತ್ಕಾಲಿಕ ಉದ್ಯೋಗಿಗಳ ಸಂಖ್ಯೆ 7.2 ಲಕ್ಷಕ್ಕೇರುವ ನಿರೀಕ್ಷೆಯಿದೆ ಎಂದು ಭಾರತ ಸಿಬ್ಬಂದಿ ಒಕ್ಕೂಟ (ಇಂಡಿಯನ್‌ ಸ್ಟಾಫಿಂಗ್‌ ಫೆಡರೇಶನ್‌) ತಿಳಿಸಿದೆ.

377 ಶೇ. ದೂರದಿಂದಲೇ ಕೆಲಸ ಮಾಡುವ ಅವಕಾಶಗಳಿಗಾಗಿ, ಫೆಬ್ರವರಿಯಿಂದ ಮೇವರೆಗೆ ಹುಡುಕಾಡಿದವರ ಪ್ರಮಾಣ.
168 ಶೇ. ಫೆಬ್ರವರಿಯಿಂದ ಮೇ ಅವಧಿಯಲ್ಲಿ,ಮನೆಯಿಂದಲೇ ಕೆಲಸ ಮಾಡುವ ವ್ಯಕ್ತಿಗಳನ್ನು ಕಂಪನಿಗಳು ಆಯ್ದುಕೊಂಡ ಪ್ರಮಾಣ.

ಟಾಪ್ ನ್ಯೂಸ್

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.