ಮಳೆಗಾಲದ ಪೂರ್ವತಯಾರಿ ಆಮೆಗತಿ

ಇಂದಿರಾನಗರ, ಬಡಗುಬೆಟ್ಟು ವಾರ್ಡ್‌

Team Udayavani, Jun 4, 2020, 5:22 AM IST

ಮಳೆಗಾಲದ ಪೂರ್ವತಯಾರಿ ಆಮೆಗತಿ

ಉಡುಪಿ: ಮುಂಗಾರು ಪೂರ್ವ ಮಳೆ ಈಗಾಗಲೇ ಸುರಿದಿದ್ದು, ಕೆಲವೇ ದಿನಗಳಲ್ಲಿ ಮುಂಗಾರು ಕೂಡ ಆರಂಭಗೊಳ್ಳಲಿದೆ. ಆದರೆ ಇಂದಿರಾ ನಗರ, ಬಡಗುಬೆಟ್ಟು ವಾರ್ಡ್‌ಗಳಲ್ಲಿ ಮಳೆಗಾಲದ ಪೂರ್ವತಯಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಚರಂಡಿಗಳ ಹೂಳೆತ್ತುವ ಕಾರ್ಯ ಸೇರಿ ಬೀದಿದೀಪ ಗಳ ಸಮಸ್ಯೆ ಈ ಭಾಗದಲ್ಲಿ ಕಾಡುತ್ತಿದೆ.

ಹೂಳೆತ್ತುವ ಕೆಲಸ ಬಾಕಿ
ನಗರಸಭೆ ವ್ಯಾಪ್ತಿಯಲ್ಲಿ 2ನೇ ಅತೀ ದೊಡ್ಡ ವಾರ್ಡ್‌ ಆಗಿರುವ ಬಡಗುಬೆಟ್ಟು ವಾರ್ಡ್‌ನಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಗಳ ಹೂಳೆತ್ತುವ ಕೆಲಸ ಬಹುತೇಕ ಬಾಕಿ ಇದ್ದು, ಇಲ್ಲಿನ ಪ್ರಮುಖ ಮಳೆ ಹರಿಯುವ ಚರಂಡಿ ಕುಕ್ಕಿಕಟ್ಟೆಯಿಂದ ಬಲಾಯಿ ಪಾದೆ ನಡುವೆ ಮುಖ್ಯ ತೋಡುಗಳ ಹೂಳೆತ್ತುವ ಕಾರ್ಯ ಬಾಕಿಯಲ್ಲೇ ಇದೆ. ವಾಸುದೇವಕೃಪಾ ಇಂಗ್ಲಿಷ್‌ ಮೀಡಿಯಂ ಶಾಲೆ, ಭೀಮಾನಗರ, ವಾಸುಕಿ ನಗರ, ಜಗನ್ನಾಥ ನಗರ, ದುರ್ಗಾನಗರ, ಬಡಗುಬೆಟ್ಟು ಪಾರ್ಕ್‌ ಬಳಿ ಪರಿಸ್ಥಿತಿ ಹೀಗೆಯೇ ಇದೆ.

ಕಳೆದ ವರ್ಷ ಇಷ್ಟ ಮಹಾಲಿಂಗೇಶ್ವರ ರಸ್ತೆಯಲ್ಲಿ ವಿದ್ಯುತ್‌ ಕಂಬಗಳು ಬಿದ್ದು ಸಮಸ್ಯೆ ಎದುರಾಗಿತ್ತು. ವಾರ್ಡ್‌ನ ಬಹುತೇಕ ಭಾಗಗಳಲ್ಲಿ ಅಪಾಯಕಾರಿ ಮರಗಳು ಇರುವುದರಿಂದ ಈ ಬಾರಿಯೂ ತೊಂದರೆ ಯಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಇಂದಿರಾ ನಗರ ವಾರ್ಡ್‌ನ ಕಲ್ಯಾಣ್‌ ನಗರ ಕುಕ್ಕಿಕಟ್ಟೆ, ಮಂಚಿ ಮೂಲಸ್ಥಾನ, ಪೋಸ್ಟ್‌ ಆಫೀಸ್‌ ದುಗ್ಲಿ ಪದವು ಮೊದಲಾದ ಭಾಗದಲ್ಲೂ ಚರಂಡಿಯ ಹೂಳೆತ್ತುವ ಕೆಲಸ ಬಾಕಿ ಇದೆ. ಅವೈಜ್ಞಾನಿಕ ರೀತಿಯಲ್ಲಿ ಈ ಭಾಗದ ಮಳೆ ನೀರು ಹರಿಯುವ ಚರಂಡಿಗಳನ್ನು ನಿರ್ಮಿಸಲಾಗಿದೆ. ಇದರಿಂದ ಪ್ರತಿವರ್ಷ ಇಂದಿರಾನಗರದ ಮೊದಲ ಕ್ರಾಸ್‌, 6ನೇ ಕ್ರಾಸ್‌ ಸೇರಿದಂತೆ ಕೆಲ ಭಾಗಗಳ ಮನೆಗಳಿಗೆ ನೀರು ಸೇರುತ್ತದೆ. ಹಾಗೆಯೇ ಮಂಚಿ ಭಾಗದ ಹಲವೆಡೆ ಕಳೆದ ಬಾರಿ ಮಳೆಗಾಲದಲ್ಲಿ ಗೆಲ್ಲುಗಳು ಮುರಿದು ತೊಂದರೆಯಾಗಿದ್ದು, ಈ ಬಾರಿಯೂ ಈ ಭಾಗದಲ್ಲಿ ಅಪಾಯವಿದೆ ಎಂದು ಇಂದಿರಾನಗರದ ಸ್ಥಳೀಯರಾದ ಪ್ರಶಾಂತ್‌ ಹೇಳಿದ್ದಾರೆ.

ನೀರಿನ ಸಮಸ್ಯೆ
ಇಂದಿರಾನಗರ ವಾರ್ಡ್‌ನ ದುಗ್ಲಿ ಪದವಿನಲ್ಲಿ ಮುಂಜಾವ 3 ಗಂಟೆಗೆ ನೀರು ಬಂದು 4 ಗಂಟೆಗೆ ಸ್ಥಗಿತವಾಗುವುದು ಮತ್ತು ಕೆಲವೊಮ್ಮೆ ಅದೂ ಇರುವುದಿಲ್ಲ. ಈ ಭಾಗದಲ್ಲಿ 170 ಮನೆ ಇದ್ದು, ಇಲ್ಲಿನ ಮಂದಿ ನೀರಿಗೆ ಪರದಾಡುವಂತಾಗಿದೆ. ಬೇಸಗೆಯಲ್ಲಿ ನೀರಿನ ಸಮಸ್ಯೆ ಇಲ್ಲಿ ಉಲ್ಬಣವಾಗುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ನೀರಿನ ಸಮಸ್ಯೆ
2 ತಿಂಗಳಿಂದ ಕಾರ್ಮಿಕರಿಲ್ಲದೆ ಮಳೆಗಾಲದ ಪೂರ್ವತಯಾರಿಗೆ ಸಮಸ್ಯೆಯಾಗಿದೆ. ಈ ಹಿಂದೆ ವಾರಕ್ಕೆ 2 ಬಾರಿ ಕಾರ್ಮಿಕರು ಬರುತ್ತಿದ್ದರು. ಈಗ ವಾರಕ್ಕೆ ಒಮ್ಮೆ 4 ಜನ ಮಾತ್ರ ಸಿಗುತ್ತಿದ್ದಾರೆ. ದುಗ್ಲಿಪದವಿನಲ್ಲಿ ತುಂಬ ನೀರಿನ ಸಮಸ್ಯೆ ಇದೆ. ಸದ್ಯ ಒಂದು ಕೊಳವೆ ಬಾವಿ ಮಾಡಿ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಕೆಲವೆಡೆ ಚರಂಡಿ ಕೆಲಸ ನಡೆಯುತ್ತಿದೆ.
– ಚಂದ್ರಶೇಖರ್‌ ಯು. ಶೇರಿಗಾರ್‌, 21ನೇ ಇಂದಿರಾನಗರ ವಾರ್ಡ್‌ ಸದಸ್ಯ.

ಕಾರ್ಮಿಕರ ಕೊರತೆ
ಮಳೆಗಾಲದ ಪೂರ್ವತಯಾರಿ ಯಾದ ಚರಂಡಿಗಳ ಹೂಳೆತ್ತುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. 2 ವಾರಗಳಿಂದ, ವಾರದಲ್ಲಿ ಒಂದು ದಿನದಂತೆ 4 ಮಂದಿ ಮಾತ್ರ ಕಾರ್ಮಿಕರು ವಾರ್ಡ್‌ನ ಕೆಲಸಕ್ಕೆ ಸಿಗುತ್ತಿದ್ದಾರೆ. ಬಡಗುಬೆಟ್ಟು ಮುಖ್ಯ ರಸ್ತೆಯ ತೋಡು ವೇಗಸ್‌ ಬಳಿಯ ತೋಡುಗಳ ಹೂಳು ತೆರವುಗೊಳಿಸಿದ್ದು ಬಿಟ್ಟರೆ ಬೇರೆ ಎಲ್ಲೂ ಕೆಲಸ ಆಗಿಲ್ಲ. ಬಡಗುಬೆಟ್ಟು ಪಾರ್ಕ್‌ ಬಳಿ ಹೊಸ ರಸ್ತೆಯ ಕಾಮಗಾರಿಯಾಗಿದ್ದು, ಚರಂಡಿ ಯಾಗದೆ ಇಲ್ಲಿ ನೀರು ನಿಲ್ಲುವ ಸಾಧ್ಯತೆಯೂ ಇದೆ.
– ವಿಜಯ ಪೂಜಾರಿ ಬೈಲೂರು, 22ನೇ
ಬಡಗುಬೆಟ್ಟು ವಾರ್ಡ್‌

ಟಾಪ್ ನ್ಯೂಸ್

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

MP Tejaswi Surya: ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Voters: ಮತ್ತೆ ದಾಖಲೆ ಬರೆದ ಹೊಸಕೋಟೆ ಕ್ಷೇತ್ರದ ಮತದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.