ಹೀಗೊಂದು ಕನವರಿಕೆ…
Team Udayavani, Jun 4, 2020, 5:47 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭುವಿಗೆ ಅಡಿಯಿಟ್ಟ ಮರುಕ್ಷಣವೆ
ಜಗದ ನಾಗಾಲೋಟವ ನೋಡುತ್ತಲೇ
ಆಲದ ಮರವಾಗಿ ಬೆಳೆದು,
ಬೆಂಬಿಡದೆ ಕಾಡಿ, ನಗಿಸಿ, ನೋಯಿಸಿ
ನರಳಿಸಿ, ಕೆರಳಿಸಿ, ಗೆಲ್ಲಿಸಿ, ಸೋಲಿಸಿ
ಸುಂದರ ನಾಳೆಗಾಗಿ,
ನಿತ್ಯ ಮಾರ್ಧನಿಸುತ್ತವೆ,
ಹುಚ್ಚು ಹೊಂಗನುಸುಗಳು…
ಹರೆಯ ಕಳೆದು,
ನೆರೆಯು ಬಂದು,
ಜರನು ಬದುಕಿನ ಕದವ ತಟ್ಟುತ್ತಿರಲು
ಎತ್ತರದ ಕನಸುಗಳು ತತ್ತರಿಸಿ ಹೋಗಿ
ಕುಬ್ಜವಾಗಿ, ಕರಗೇ ಹೋದವು
ಕಾಲನ ಕರೆಗೆ, ಕತ್ತಲಿನ ಕೂಪದಲಿ
ಸತ್ತೇ ಹೋದವು
ಈ ಹುಚ್ಚು ಹೊಂಗನಸುಗಳು…
– ರವಿನಾಗ್ ತಾಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ