ಕಣ್ಮರೆಯಾಗುತ್ತಿಹ ಕಾನನಕ್ಕೆ ನೇತ್ರಾ ಜಲವಿತ್ತು ಪೋಷಿಸುವ ಸ್ಥಿತಿ ಬಂದೀತು ಎಚ್ಚರ!


Team Udayavani, Jun 5, 2020, 6:45 PM IST

ಕಣ್ಮರೆಯಾಗುತ್ತಿಹ ಕಾನನಕ್ಕೆ ನೇತ್ರಾ ಜಲವಿತ್ತು ಪೋಷಿಸುವ ಸ್ಥಿತಿ ಬಂದೀತು ಎಚ್ಚರ!

ಸಾಂದರ್ಭಿಕ ಚಿತ್ರ

ಕಾನನ, ಕಾಡು, ವನ. ಅರಣ್ಯ ಎಂದೆಲ್ಲ ಕರೆಸಿಕೊಳ್ಳುವ ಈ ಅಡವಿಗೆ ಶತಮಾನದಿಂದಲೂ ಕಾಡುವ ಅತಿಯಾಸೆಯ ಕೈಗಳಿಂದ ಮುಕ್ತಿ ಸಿಕ್ಕಿಲ್ಲ.

ಹಗಲು-ಇರುಳೆನ್ನದೆ ತನ್ನ ಒಡಲ ಬಸಿಯುತ್ತಿರುವ ಶೂರರಿಗೆ ಕನಿಕರ ಬರಲಿಲ್ಲವಲ್ಲ ಎಂಬ ಕೋಪದ ಪ್ರತಿಬಿಂಬವೇ ಪ್ರಪಂಚದಲ್ಲಿ ನಡೆವ ನಡೆಯುತ್ತಿರುವ ಪ್ರಕೃತಿ ವಿಕೋಪಗಳು.

ಹವಾಮಾನದ ಏರಿಳಿತ, ನಡುಗುವ ಭೂಮಿ, ಒಮ್ಮೆಲೆ ಸುಳಿವಿಲ್ಲದೆ ಉಕ್ಕುವ ಜ್ವಾಲಾಮುಖಿ, ಕಾಡಿ ಕರಕಲು ಮಾಡುವ ಕಾಳ್ಗಿಚ್ಚು, ಬೇಡಿ ಅಂಗಲಾಚಿದರು ಬಾರದ ವರುಣ, ಸಾಕೆಂದರು ಎಂಬಂತೆ ಸುರಿಯುವ ವರ್ಷಧಾರೆ. ಇವುಗಳಿಗೆ ಕಿವಿಗೊಡದೆ. ತನ್ನ ತೂತು ಬಿದ್ದ ಕಿವಿಯ ಜೋಡಿಸಿಕೊಂಡು ಹೊರಟಿದ್ದಾನೆ ಬುದ್ದಿ ಜೀವಿ ಮಾನವ.

ಈ ಎಲ್ಲಾ ಶೋಚನಿಯತೆಯನ್ನು ಮನಗಂಡ ವಿಶ್ವಸಂಸ್ಥೆ 1974ರಂದು ಜೂನ್‌ನ 5ರಂದು ವಿಶ್ವ ಪರಿಸರ ದಿನವನ್ನಾಗಿ ಘೋಷಿಸಿತು. ಪರಿಸರವನ್ನು ರಕ್ಷಿಸುವ ಮತ್ತು ಪರಿಸರ ಕಾಳಜಿಯ ಬಗ್ಗೆ ಜಾಗೃತಿಯನ್ನು ಪ್ರೋತ್ಸಾಹಿಸುವ ದಿನವಾಗಿ ಆಚರೆಣೆಗೊಳ್ಳುತ್ತಾ ಬಂದಿದೆ. ಈ ಕಾರ್ಯಕ್ರಮವು 100ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಕವಾಗಿ ಆಚರಿಸಲ್ಪಡುವ ಸಾರ್ವಜನಿಕ ಪ್ರಭಾವದ ಜಾಗತಿಕ ವೇದಿಕೆಯಾಗಿ ಬೆಳೆದಿದೆ.

ಕಳೆದ ವರ್ಷವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಭಾರತ ಸರಕಾರ “ಸೆಲ್ಫಿ ವಿತ್‌ ಸ್ಯಾಪ್ಲಿಂಗ್‌’ ಅಭಿಯಾನವನ್ನು ಪ್ರಾರಂಭಿಸಿತು. ಸಸಿ ನೆಡಲು ಮತ್ತು ಅದರೊಂದಿಗೆ ಸೆಲ್ಫಿ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಲು ಜನರನ್ನು ಒತ್ತಾಯಿಸಿತ್ತು.

ಆದರೆ ಕಾರ್ಯಗಳು ಬಾರಿಯ ಛಾಯಾ ಚಿತ್ರಗಳಲ್ಲಿ ಜೀವಂತವಾಗಿದ್ದರೆ ಪ್ರಯೋಜನ ಇಲ್ಲ. ವಾಯು ಮಾಲಿನ್ಯತಡೆಗಟ್ಟುವಿಕೆ ಮತ್ತು ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು 1981ರಲ್ಲಿ ಜಾರಿಗೊಳಿಸಿತ್ತು. ಹೀಗೆ ಜಾರಿಯಾದ ಜಲರಕ್ಷಣಾ ಕಾಯ್ದೆ. ವನ್ಯ ಜೀವಗಳ ರಕ್ಷಣಾ ಕಾಯ್ದೆ. ಕಾಗದದ ಮೇಲೆ ಅಚ್ಚಾಗಿವೆ ಹೊರತು ಕಾರ್ಯರೂಪವಾಗುವ ಪ್ರಮಾಣ ತೀರಾ ಕಡಿಮೆ.

ವರದಿಗಳ ಪ್ರಕಾರ ವಿಶ್ವಾದ್ಯಂತ ಸುಮಾರು ಶೇ. 92 ಜನರು ಶುದ್ಧ ಗಾಳಿಯನ್ನು ಉಸಿರಾಡುವುದಿಲ್ಲ. ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಪ್ರತಿವರ್ಷ 5 ಟ್ರಿಲಿಯನ್‌ನಷ್ಟು ಹಣ ವಾಯು ಮಾಲಿನ್ಯ ನಿಯಂತ್ರಣಕ್ಕೆ ಖರ್ಚಾಗುತ್ತದೆ. ಓಝೋನ್‌ ಮಾಲಿನ್ಯವು 2030ರ ವೇಳೆಗೆ ಪ್ರಧಾನ ಬೆಳೆ ಇಳುವರಿಯನ್ನು ಶೇ. 26ರಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ. ಶುದ್ಧ ನೀರು ಸುಳಿವಿಲ್ಲದಾಗುವ ದಿನ ದೂರದಲ್ಲಿಲ್ಲ.

ಶುದ್ಧ ನೀರು ಗಾಳಿ ಶಾಂತಿಯುತ ವಾತಾವರಣ. ಹೊಟ್ಟೆ ತುಂಬುವಷ್ಟು ಅನ್ನ. ಉತ್ತಮ ಆರೋಗ್ಯಕ್ಕೆ ಹೊರಡುವ ಸಮಯ ಹತ್ತಿರವಾಗುತ್ತದೆ. ಇದು ಸಮೀಪಿಸುವಷ್ಟರಲ್ಲಿ ಎಚ್ಚೆತ್ತು. ನಮ್ಮ ಹುಟ್ಟು ಹಬ್ಬಕ್ಕೆ ಒಂದು ಸಸಿ ನೆಟ್ಟು ಮುಂದಿನ ಹುಟ್ಟುಹಬ್ಬದವರೆಗಾದರೂ ಅವನ್ನು ಪೋಷಿಸಿದರೆ ಸಾಕು ಅವು ನಮ್ಮನ್ನು ಜೀವನ ಪೂರ್ತಿ ಕಾಯುತ್ತವೆ.

ರಶ್ಮಿ ಎಂ. ಗೌರಿಪುರ, ಮಾನಸಗಂಗೋತ್ರಿ, ಮೈಸೂರು

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.