ಮಾಸ್ಕ್ ಬಳಸದ ಆಟೋಚಾಲಕರಿಂದ ಭೀತಿ


Team Udayavani, Jun 6, 2020, 5:35 AM IST

auto beeti

ಬೆಂಗಳೂರು: ನಗರದಲ್ಲಿ ಕೆಲ ಆಟೋ ಚಾಲಕರು ಮುಖಗವಸು ಹಾಕಚಾಲನೆ ಮಾಡುತ್ತಿದ್ದು, ಸ್ವಲ್ಪ ಯಾಮಾರಿದರೂ ಇವು ಸೋಂಕಿನ ಮೂಲಗಳಾಗಿ ಪರಿವರ್ತನೆ ಆಗುವ ಸಾಧ್ಯತೆ ಇದೆ. ನಮ್ಮ ಮೆಟ್ರೋ’ ಸೇವೆ ಸದ್ಯಕ್ಕಿಲ್ಲ. ಇನ್ನು  ಬಿಎಂಟಿಸಿ ಬಸ್‌ಗಳ‌ು ಏರಲು ನ ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ನಗರದ ರೈಲು, ಬಸ್‌ ನಿಲಾಣಗಳಿಗೆ ಬಂದಿಳಿಯುವವರ ನ್ನು ಮನೆಗಳಿಗೆ ತಲುಪಿಸುವ “ಸಂಪರ್ಕ ಸೇತುವೆ’ಗಳಾಗಿ ಆಟೋಗಳು ಈಗ ಕಾರ್ಯನಿರ್ವಹಿಸುತ್ತಿವೆ.

ಆದರೆ, ಕೆಲ ಚಾಲಕರು ಮುಖಗವಸು ಮತ್ತು ಹ್ಯಾಂಡ್‌ ಸ್ಯಾನಿಟೈಸರ್‌ ಬಳಕೆ ಮಾಡುತ್ತಿಲ್ಲ. ಅಷ್ಟೇ ಅಲ್ಲ, ಸಾಮಾ ಜಿಕ ಅಂತರವಂತೂ ಮರೀಚಿಕೆ ಯಾಗಿದೆ. ಇದು ಸೋಂಕಿನ ಭೀತಿಗೆ ಎಡೆಮಾಡಿಕೊಡುತ್ತಿದೆ. ಹಲಸೂರು, ಕೆ.ಆರ್‌. ಪುರ, ರಾಜಾಜಿನಗರ, ಮಲ್ಲೇಶ್ವರ ಮತ್ತಿತರ ಕಡೆಗಳಲ್ಲಿ ಸಂಚರಿಸುವ ಆಟೋ ಚಾಲಕರು ಅಲ್ಲಲ್ಲಿ ಮುಖಗವಸು ಹಾಕದೆ, ಚಾಲನೆ ಮಾಡುತ್ತಿರುವುದು ಕಂಡುಬರುತ್ತಿದೆೆ.

ನ‌ಗರದಲ್ಲಿ  ಒಂದೆಡೆ ದಿನದಿಂದ ‌ಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಯಾಗುತ್ತಿದೆ. ಮತ್ತೂಂದೆಡೆ ಲಾಕ್‌ ಡೌನ್‌ ತೆರವಾಗುತ್ತಿದ್ದು, ಜನ ಸಂಚಾರ ಹೆಚ್ಚಳವಾಗಿದೆ. ಈ ವೇಳೆ ಮುನ್ನೆಚ್ಚರಿಕೆ ಕ್ರಮಗಳ ನಿರ್ಲಕ್ಷ್ಯ ಮತ್ತೂಂದು ಸಮಸ್ಯೆಗೆ ಆಹ್ವಾನಿಸಿ ದಂತಾಗುತ್ತದೆ. ಈ  ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಪ್ರಯಾಣಿಕರಿಂದ ಕೇಳಿಬರುತ್ತಿದೆ.

“ತಡೆದು ವಿಚಾರಿಸಿದ್ದು ಕಂಡಿಲ್ಲ’: “ಮುಖಗವಸು ಇಲ್ಲದೆ ಚಾಲನೆ ಮಾಡುತ್ತಿರುವುದು ಅಥವಾ ಸಾಮಾಜಿಕ ಅಂತರ  ಇಲ್ಲದೆ ಹೆಚ್ಚು ಜನರನ್ನು ಕರೆದೊಯ್ಯುತ್ತಿರುವುದು ಕಂಡುಬಂದರೂ, ಇಲ್ಲಿಯವರೆಗೆ ಯಾವುದೇ ಆಟೋಗಳನ್ನು ತಡೆದು ವಿಚಾರಣೆ ಮಾಡಿದ್ದನ್ನು ನಾನು ನೋಡಿಲ್ಲ. ಸಿಗ್ನಲ್‌ಗ‌ಳಲ್ಲೇ ಎಷ್ಟೋ ಕಡೆ ಈ ರೀತಿ ಕೆಲವರು ಮುನ್ನೆಚ್ಚರಿಕೆ  ಕ್ರಮಗಳ ಬಗ್ಗೆ ನಿರ್ಲಕ್ಷ್ಯ ತೋರಿರುವುದನ್ನು ಕಾಣಬಹುದು’ ಎಂದು ಮಲ್ಲೇಶ್ವರ ನಿವಾಸಿ ಮೋಹನ್‌ ತಿಳಿಸುತ್ತಾರೆ. “ಉಳಿದವರಿಗಿಂತ ಆಟೋ ಚಾಲಕರು ಹೆಚ್ಚು ಜಾಗರೂ ಕರಾಗಿರಬೇಕು.

ಇದು ಗ್ರಾಹಕರ ಹಿತದೃಷ್ಟಿಯಿಂದ ಮಾತ್ರವಲ್ಲ; ಸ್ವತಃ  ಚಾಲಕರ ದೃಷ್ಟಿಯಿಂದಲೂ ಮುಖ್ಯ. ಯಾಕೆಂದರೆ, ಆಟೋ ಗಳಲ್ಲಿ ನಿತ್ಯ ನೂರಾರು ಜನ ಪ್ರಯಾಣಿಸುತ್ತಾರೆ. ಅದೂ ನಾನಾ ಭಾಗಗಳಿಂದ ನಗರಕ್ಕೆ ಬಂದಿಳಿದವರು ಇದರಲ್ಲಿ ಹತ್ತಿ-ಇಳಿದಿರುತ್ತಾರೆ. ಒಂದು ವೇಳೆ ಯಾರೊಬ್ಬರಲ್ಲಿ ವೈರಸ್‌  ಪತ್ತೆಯಾದರೂ ಸೋಂಕಿನ ಮೂಲ ಹಿಡಿಯುವುದು ಕಷ್ಟಕರ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸುವ ಅವಶ್ಯಕತೆ ಇದೆ’ ಎಂದು ಹಲಸೂರು ನಿವಾಸಿ ಗಿರೀಶ್‌ ಒತ್ತಾಯಿಸುತ್ತಾರೆ.

ಶೀಘ್ರ ವಿಶೇಷ ಕಾರ್ಯಾಚರಣೆ; ಅಧಿಕಾರಿ: ಲಾಕ್‌ಡೌನ್‌ ಪರಿಣಾಮ 2ತಿಂಗಳಿಂದ ಈ ವರ್ಗ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈಗಷ್ಟೇ ರಸ್ತೆಗಿಳಿಯುತ್ತಿದ್ದು, ಚೇತರಿಕೆ ಕಾಣುತ್ತಿದೆ. ಇದರ ಜತೆಗೆ ಆರೋಗ್ಯ ರಕ್ಷಣೆ ಕೂಡ ಮುಖ್ಯ. ದುಡಿಮೆ  ಭರದಲ್ಲಿ ಕೆಲವು ಆಟೋಗಳಲ್ಲಿ ನಾಲ್ಕೈದು ಜನರನ್ನು ಕೊಂಡೊ ಯ್ಯುವುದು ಸಾಮಾನ್ಯವಾಗಿ ದೆ. ನಿತ್ಯ ಮುಂಬೈ, ಬೆಳಗಾವಿ, ಹೌರಾ, ದೆಹಲಿ ಸೇರಿದಂತೆ ಹಲವು ಕಡೆಗಳಿಂದ ಯಶವಂತಪುರ, ಮೆಜೆಸ್ಟಿಕ್‌ಗೆ ಜನ ಬಂದಿಳಿಯುತ್ತಿದ್ದಾರೆ.

ಅವರೆಲ್ಲಾ ನೇರವಾಗಿ ಆಟೋಗಳನ್ನು ಏರಿ, ಮನೆಗಳಿಗೆ ತೆರಳುತ್ತಾರೆ. “ನಗರದಲ್ಲಿ ಸುಮಾರು 1.40 ಲಕ್ಷ ಆಟೋಗಳಿವೆ. 2-ಸ್ಟ್ರೋಕ್‌ ಆಟೋಗಳು ತುಂಬಾ ಕಡಿಮೆ. ಸರ್ಕಾರಿ ನಿಯಮದ ಪ್ರಕಾರ ಮುಖಗವಸು ಹಾಕಿಕೊಳ್ಳುವುದು ಹಾಗೂ  ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ನಿಯಮ ಉಲ್ಲಂಘನೆ ದಂಡನಾರ್ಹವಾಗಿದೆ. ಈ ಬಗ್ಗೆ ಶೀಘ್ರ ಕಾರ್ಯಾಚರಣೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ಅಂತಹ ಯಾವುದೇ ದೂರುಗಳಂತೂ ಬಂದಿಲ್ಲ’  ಎಂದು ಸಾರಿಗೆ ಇಲಾಖೆ ಅಪರ ಸಾರಿಗೆ ಆಯುಕ್ತ (ಪ್ರವರ್ತನ) ಶಿವರಾಜ್‌ ಪಾಟೀಲ್‌ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ಟಾಪ್ ನ್ಯೂಸ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.