ಕಾರಹುಣ್ಣಿಮೆ ಆಚರಣೆಗೆ ಕೋವಿಡ್ ಕರಿನೆರಳು
ಎತ್ತುಗಳಿಗೆ ಅಲಂಕಾರ-ಪೂಜೆಗಷ್ಟೇ ಹಬ್ಬ ಸೀಮಿತಅಕ್ಕಿ-ಬೆಲ್ಲ-ಹೋಳಿಗೆ ನೈವೇದ್ಯ
Team Udayavani, Jun 7, 2020, 6:30 PM IST
ಸಾಂದರ್ಭಿಕ ಚಿತ್ರ
ಕಂಪ್ಲಿ: ಕೋವಿಡ್ ಮಹಾಮಾರಿ ಹಿನ್ನೆಲೆಯಲ್ಲಿ ಕಾರಹುಣ್ಣಿಮೆಯಂದು ರೈತರು ತಮ್ಮ ಎತ್ತುಗಳನ್ನು ಶೃಂಗರಿಸುವುದಕ್ಕೆ ಮಾತ್ರ ಸೀಮಿತಗೊಳಿಸಿದರು. ಎತ್ತುಗಳನ್ನು ಸ್ವಚ್ಛವಾಗಿ ತೊಳೆದು ಅವುಗಳ ಕೋಡು(ಕೊಂಬು)ಗಳನ್ನು ಕೆತ್ತಿಸಿ ಅವುಗಳಿಗೆ ಕೋಡಣಸು, ಗಗ್ರಿಗಳನ್ನು ಜೋಡಿಸಿ ನಂತರ ಗ್ರಾಮದಲ್ಲಿ ಮೊದಲಿನಿಂದಲೂ ಬಣ್ಣ ಹಚ್ಚುವವರ ಹತ್ತಿರ ಎತ್ತಿನ ಕೋಡುಗಳಿಗೆ ವೈವಿಧ್ಯಮಯ ಬಣ್ಣಗಳಿಂದ ವಿವಿಧ ಚಿತ್ರಗಳನ್ನು ಬಿಡಿಸಿದ್ದರು.
ಎತ್ತುಗಳ ಕೋಡುಗಳ ಮೇಲೆ ಮದುವೆ ಸಂದರ್ಭದಲ್ಲಿ ಉಪಯೋಗಿಸುವ ಬಾಸಿಂಗದ ಚಿತ್ರವನ್ನು ಬಿಡಿಸಿದ್ದು ಸಾಮಾನ್ಯವಾಗಿತ್ತು. ನವಿಲು ಮತ್ತು ಗಿಳಿಗಳ ಚಿತ್ರಗಳನ್ನು ಬಿಡಿಸಲಾಗಿತ್ತು. ಹೀಗೆ ಬಣ್ಣಗಳಿಂದ ಶೃಂಗರಿಸಿದ ಎತ್ತುಗಳನ್ನು ಮನೆಗೆ ಹೊಡೆದುಕೊಂಡು ಬಂದು ಮನೆಯ ಎತ್ತುಗಳ ಗ್ವಾದಲಿಯಲ್ಲಿ ಅವುಗಳನ್ನು ಕಟ್ಟಿ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅಕ್ಕಿ ಬೆಲ್ಲ ಮತ್ತು ಹೋಳಿಗೆಯನ್ನು ನೈವೇದ್ಯ ಮಾಡಿ ಅದನ್ನು ಅವುಗಳಿಗೆ ತಿನ್ನಿಸಿದರು.
ಸಂಜೆ ಎತ್ತುಗಳನ್ನು ಗೆಜ್ಜೆ, ಗೊಂಡೇವುಗಳಿಂದ ಶೃಂಗರಿಸಿ ಗ್ರಾಮದ ಅಗಸೆ ಬಾಗಿಲಿನಲ್ಲಿ ಊರ ಬುಡ್ಡೆ ಕಲ್ಲಿನ ಹತ್ತಿರ ಎತ್ತುಗಳನ್ನು ಕರಿ ಬಿಡುತ್ತಾರೆ. ಆದರೆ ಕೋವಿಡ್ ಒಕ್ಕರಿಸಿರುವುದರಿಂದ ರೈತರು ತಮ್ಮ ಎತ್ತುಗಳನ್ನು ಕೇವಲ ಶೃಂಗರಿಸಿ ಪೂಜೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ