ಹೊಟೇಲ್ ಪುನರಾರಂಭ: ಗ್ರಾಹಕರ ಸಂಖ್ಯೆ ವಿರಳ
Team Udayavani, Jun 9, 2020, 9:47 AM IST
ಬೆಳ್ತಂಗಡಿ ತಾಲೂಕಿನಲ್ಲಿ ಬಸ್ಗಳ ಸಂಚಾರ ಆರಂಭ ಗೊಂಡಿರುವುದು.
ಬೆಳ್ತಂಗಡಿ: ಕೆಲವು ದಿನಗಳಿಂದ ಪಾರ್ಸೆಲ್ ನೀಡುತ್ತಿದ್ದ ತಾಲೂಕಿನ ಬಹುತೇಕ ಹೊಟೇಲ್ಗಳು ಸೋಮವಾರದಿಂದ ಅಧಿಕೃತ ವಾಗಿ ತೆರೆದಿವೆ. ಹೊಟೇಲ್ಗಳಲ್ಲಿ ಮುಂಜಾನೆ ಉಪಾಹಾರ ಹಾಗೂ ಮಧ್ಯಾಹ್ನ ಊಟಕ್ಕೆ ಬೇಡಿಕೆಯಿದೆ. ಮಧ್ಯಾಹ್ನ ಬಳಿಕ ಗ್ರಾಹಕರ ಸಂಖ್ಯೆ ಇಳಿಕೆಯಾಗಿದೆ. ಹಿಂದಿನ ವ್ಯವಹಾರಕ್ಕೆ ಹೋಲಿಸಿದರೆ ಶೇ. 40ರಷ್ಟು ವ್ಯವಹಾರದಲ್ಲಿ ಇಳಿಕೆಯಾಗಿದೆ ಎಂದು ಹೊಟೇಲ್ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಬಸ್ ಓಡಾಟ
ತಾಲೂಕಿನಲ್ಲಿ ಖಾಸಗಿ ಬಸ್ ಓಡಾಟ ಆರಂಭಗೊಂಡಿದ್ದು, ಈಗಾಗಲೆ ಶೇ.50 ರಷ್ಟು ಟ್ರಿಪ್ ಕಡಿತಗೊಳಿಸಲಾಗಿದೆ. ಉಪ್ಪಿನಂಗಡಿ, ಮಡಂತ್ಯಾರು ಸಹಿತ ಗ್ರಾಮಾಂತರ ಪ್ರದೇಶಗಳಿಗೆ ಸೀಮಿತ ಬಸ್ ಓಡಾಟ ನಡೆಸಲಾಗುತ್ತಿದೆ. ಹಿಂದೆ 25 ಬಸ್ಗಳ 75 ಟ್ರಿಪ್ ಇದ್ದಲ್ಲಿ ಪ್ರಸಕ್ತ 10 ಬಸ್ಗಳ 25 ಟ್ರಿಪ್ ನಡೆಸಲಾಗುತ್ತಿದೆ. ಶಾಲಾ ಕಾಲೇಜು ತೆರೆಯದಿ ರುವುದರಿಂದ ಮತ್ತಷ್ಟು ಪ್ರಯಾಣಿಕರ ಕೊರತೆಯಾಗಿದೆ. ಇದರಿಂದ ನಷ್ಟದಲ್ಲೇ ಬಸ್ ಓಡಾಟ ನಡೆಸಬೇಕಾಗಿದೆ ಎಂದು ಖಾಸಗಿ ಬಸ್ ಮಾಲಕ ವಿಜಯ ಫೆರ್ನಾಡಿಂಸ್ ತಿಳಿಸಿದ್ದಾರೆ.
ತೆರೆದ ಹೊಟೇಲ್ಗಳು; ಸಹಜ ಸ್ಥಿತಿಗೆ ಬಂಟ್ವಾಳ
ಬಂಟ್ವಾಳ: ಬಂಟ್ವಾಳ- ಬಿ.ಸಿ. ರೋಡ್ ಸಹಿತ ತಾಲೂಕಿನ ಬಹು ತೇಕ ಪ್ರದೇಶಗಳಲ್ಲಿ, ಹೊಟೇಲ್ಗಳು ತೆರೆದು ಕೊಂಡಿದ್ದು, ಜನಸಂಚಾರವೂ ಕಂಡುಬಂತು.
ಕೆಲವು ದಿನಗಳ ಹಿಂದೆಯೇ ಲಾಕ್ಡೌನ್ ಸಡಿಲಿಕೆಯಾಗಿದ್ದರೂ ಹೊಟೇಲ್ಗಳು ತೆರೆ ಯದೇ ಇದ್ದುದರಿಂದ ಮಧ್ಯಾಹ್ನದ ವೇಳೆಗೆ ಬಹುತೇಕ ಮಂದಿ ಮನೆಗೆ ತೆರಳುತ್ತಿದ್ದರು. ಆದರೆ ಸೋಮವಾರ ಸಂಜೆಯವರೆಗೂ ಹೆಚ್ಚಿನ ಜನ ಸಂಚಾರ ಕಂಡುಬಂತು. ಆದರೂ ಹೊಟೇಲ್ಗಳಲ್ಲಿ ಗ್ರಾಹಕರ ಸಂಖ್ಯೆ ಹಿಂದಿನಂತೆ ಇರಲಿಲ್ಲ.
ಬಹುತೇಕ ಮಾರ್ಗಗಳಲ್ಲಿ ಖಾಸಗಿ ಬಸ್ಗಳ ಸಂಚಾರ ಆರಂಭಗೊಂಡಿದ್ದರೂ ಬಸ್ಗಳ ಸಂಖ್ಯೆ ವಿರಳವಾಗಿತ್ತು. ಕೆಎಸ್ಆರ್ಟಿಸಿ ಬಸ್ಗಳು ಕೂಡ ಕಡಿಮೆ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯುಂಟಾಗಿತ್ತು. ಉಳಿದಂತೆ ಇತರ ಎಲ್ಲ ವಾಹನಗಳ ಓಡಾಟ ಆರಂಭಗೊಂಡಿದ್ದು, ಸರಕಾರಿ ಕಚೇರಿ ಗಳಲ್ಲೂ ಹೆಚ್ಚಿನ ಜನ ಕಂಡುಬಂದರು.
ಬಂಟ್ವಾಳ: ಬಂಟ್ವಾಳ- ಬಿ.ಸಿ. ರೋಡ್ ಸಹಿತ ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ, ಹೊಟೇಲ್ಗಳು ತೆರೆದು ಕೊಂಡಿದ್ದು, ಜನಸಂಚಾರವೂ ಕಂಡುಬಂತು.
ಕೆಲವು ದಿನಗಳ ಹಿಂದೆಯೇ ಲಾಕ್ಡೌನ್ ಸಡಿಲಿಕೆಯಾಗಿದ್ದರೂ ಹೊಟೇಲ್ಗಳು ತೆರೆ ಯದೇ ಇದ್ದುದರಿಂದ ಮಧ್ಯಾಹ್ನದ ವೇಳೆಗೆ ಬಹುತೇಕ ಮಂದಿ ಮನೆಗೆ ತೆರಳುತ್ತಿದ್ದರು. ಆದರೆ ಸೋಮ ವಾರ ಸಂಜೆಯವರೆಗೂ ಹೆಚ್ಚಿನ ಜನ ಸಂಚಾರ ಕಂಡುಬಂತು. ಆದರೂ ಹೊಟೇಲ್ಗಳಲ್ಲಿ ಗ್ರಾಹಕರ ಸಂಖ್ಯೆ ಹಿಂದಿನಂತೆ ಇರಲಿಲ್ಲ.
ಬಹುತೇಕ ಮಾರ್ಗಗಳಲ್ಲಿ ಖಾಸಗಿ ಬಸ್ಗಳ ಸಂಚಾರ ಆರಂಭಗೊಂಡಿದ್ದರೂ ಬಸ್ಗಳ ಸಂಖ್ಯೆ ವಿರಳವಾಗಿತ್ತು. ಕೆಎಸ್ಆರ್ಟಿಸಿ ಬಸ್ಗಳು ಕೂಡ ಕಡಿಮೆ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯುಂಟಾಗಿತ್ತು. ಉಳಿದಂತೆ ಇತರ ಎಲ್ಲ ವಾಹನಗಳ ಓಡಾಟ ಆರಂಭಗೊಂಡಿದ್ದು, ಸರಕಾರಿ ಕಚೇರಿ ಗಳಲ್ಲೂ ಹೆಚ್ಚಿನ ಜನ ಕಂಡುಬಂದರು.
ಜನರ ಓಡಾಟ ಹೆಚ್ಚಳ
ಪುತ್ತೂರು/ಸುಳ್ಯ: ಜೂ. 8ರಿಂದ ಹೊಟೇಲ್ ಗಳಲ್ಲಿ ಸ್ಥಳದಲ್ಲೇ ಆಹಾರ, ಉಪಾಹಾರ ನೀಡಲು ಅವಕಾಶ ಹಿನ್ನೆಲೆಯಲ್ಲಿ ಸುಳ್ಯ, ಪುತ್ತೂರು ನಗರದಲ್ಲಿ ಹೊಟೇಲ್ಗಳಲ್ಲಿ ಊಟ, ಉಪಾಹಾರ ಪುನರಾರಂಭ ಗೊಂಡಿದೆ. ಈ ಹಿಂದೆ ಪಾರ್ಸೆಲ್ಗೆ ಮಾತ್ರ ಅವಕಾಶ ಇತ್ತು. ಈಗ ಸಾಮಾಜಿಕ ಅಂತರ ಪಾಲನೆ, ನೈರ್ಮಲ್ಯ ರಕ್ಷಣೆ, ಗ್ರಾಹಕ ಸಂಖ್ಯೆ ಮಿತಿಯೊಂದಿಗೆ ಹೊಟೇಲ್ ತೆರೆ ದಿವೆ. ನಗರದಲ್ಲಿ ಜನರ ಓಡಾಟ, ವಾಹನ ಸಂಚಾರ ಹೆಚ್ಚಾಗಿದ್ದರೂ ಹೊಟೇಲ್ಗಳಲ್ಲಿ ಗ್ರಾಹಕರ ಸಂಖ್ಯೆ ಇಳಿಮುಖವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು