ರೈತ ಅನುವುಗಾರರ ಮುಂದುವರಿಸಿ
Team Udayavani, Jun 11, 2020, 8:46 AM IST
ಸೊರಬ: ಕೃಷಿ ಇಲಾಖೆಯಲ್ಲಿನ ರೈತ ಅನುವುಗಾರ ಸಿಬ್ಬಂದಿಯನ್ನು ಮುಂದಿನ ಆರ್ಥಿಕ ವರ್ಷದ ಅವಧಿಗೂ ಮುಂದುವರೆಸುವಂತೆ ಒತ್ತಾಯಿಸಿ ರೈತ ಅನುವುಗಾರರ ಸಂಘದಿಂದ ತಾಲೂಕು ಕಚೇರಿಯಲ್ಲಿ ಶಿರಸ್ತೇದಾರ್ ಚನ್ನಕೇಶವ ಅವರಿಗೆ ಮನವಿ ಸಲ್ಲಿಸಲಾಯಿತು.
ಕೃಷಿ ಇಲಾಖೆಯಲ್ಲಿನ ರೈತ ಅನುವುಗಾರರ ಸೇವೆಯನ್ನು 2020-21ನೇ ಸಾಲಿನಲ್ಲಿ ಇಲಾಖೆಯ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಮುಂದುವರೆಸಬೇಕು. ಮುಂಗಾರು ಬಿತ್ತನೆ ಬಗ್ಗೆ ಹಾಗೂ ಇತರೆ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ರೈತ ಅನುವುಗಾರರನ್ನು ಬಳಸಿಕೊಳ್ಳಲಾಗುತ್ತಿದೆ. ಕೋವಿಡ್-19 ಪರಿಸ್ಥಿತಿಯಲ್ಲಿ ರೈತ ಅನುವುಗಾರರನ್ನು ಸೇವೆಯಲ್ಲಿ ಮುಂದುವರೆಸುವ ಜೊತೆಗೆ ಗೌರವಧನವನ್ನು 10 ಸಾವಿರ ರೂ., ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ರೈತ ಅನುವುಗಾರರ ಸಂಘದ ಜಿಲ್ಲಾಧ್ಯಕ್ಷ ಎಂ. ಸೋಮಪ್ಪ, ತಾಲೂಕು ಉಪಾಧ್ಯಕ್ಷ ಗಣಪತಿ, ಮಂಜುನಾಥ, ಶಿವಲಿಂಗಸ್ವಾಮಿ, ಇತರರಿದ್ದರು.