ಇ- ಫೈಲಿಂಗ್‌: ಮಂಗಳೂರು ಪೊಲೀಸ್‌ ಕಮಿಷನರ್‌ ಕಚೇರಿ ನಂ. 1


Team Udayavani, Jun 12, 2020, 5:30 AM IST

ಇ- ಫೈಲಿಂಗ್‌: ಮಂಗಳೂರು ಪೊಲೀಸ್‌ ಕಮಿಷನರ್‌ ಕಚೇರಿ ನಂ. 1

ವಿಶೇಷ ವರದಿ- ಮಹಾನಗರ: ಮಂಗಳೂರು ಪೊಲೀಸ್‌ ಕಮಿಷನರ್‌ ಕಚೇರಿ ಕಡತ ನಿರ್ವಹಣೆಯನ್ನು ಇ- ತಂತ್ರಾಂಶದ ಮೂಲಕ ಹಸ್ತ ಚಾಲಿತ (ಮ್ಯಾನ್ಯುವಲ್‌) ವ್ಯವಸ್ಥೆ ಯಿಂದ ಎಲೆಕ್ಟ್ರಾನಿಕ್‌ ವ್ಯವಸ್ಥೆಗೆ ಬದಲಾವಣೆ ಮಾಡಿಕೊಂಡು 8 ತಿಂಗಳಾಗುತ್ತಿದ್ದು, ಇದೀಗ ಇ-ಫೈಲಿಂಗ್‌ ವ್ಯವಸ್ಥೆ ಯಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ.

ಪೊಲೀಸ್‌ ಇಲಾಖೆಯಲ್ಲಿ 2019ರ ಜುಲೈನಲ್ಲಿ ಇ- ಫೈಲಿಂಗ್‌ ವ್ಯವಸ್ಥೆ ಅನು ಷ್ಠಾನಕ್ಕೆ ಬಂದಿತ್ತು. ಕೇಂದ್ರ ಸಿಐಡಿ ಕಚೇರಿ ಮತ್ತಿತರ ಕೆಲವು ಕಚೇರಿಗಳು ತತ್‌ ಕ್ಷಣದಿಂದಲೇ ಇ-ಫೈಲಿಂಗ್‌ ವ್ಯವಸ್ಥೆ ಆರಂಭಿಸಿದ್ದವು. ಮಂಗಳೂರು ಕಮಿ ಷನರ್‌ ಕಚೇರಿಯು 2019ರ ಅಕ್ಟೋಬರ್‌ನಿಂದ ಅದ್ಭುತ ಸಾಧನೆ ಇ-ಫೈಲಿಂಗ್‌ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಕೆಲವೇ ತಿಂಗಳಲ್ಲಿ ಮಂಗಳೂರು ಕಚೇರಿಯು ರಾಜ್ಯದ ಇತರ ಎಲ್ಲ ಪೊಲೀಸ್‌ ಕಚೇರಿಗಳನ್ನು ಹಿಂದಿಕ್ಕಿ ಅದ್ಭುತ ಸಾಧನೆ ಮಾಡಿದೆ. ಮಂಗಳೂರು ಪೊಲೀಸ್‌ ಕಮಿಷನರ್‌ ಕಚೇರಿಯ ಸಿಎಸ್‌ಬಿ (ಸಿಟಿ ಸ್ಪೆಷಲ್‌ ಬ್ರ್ಯಾಂಚ್‌) ವಿಭಾಗವನ್ನು ಹೊರತುಪಡಿಸಿ ಉಳಿದಂತೆ ಎಲ್ಲ ವಿಭಾಗಗಳನ್ನು ಇ- ಫೈಲಿಂಗ್‌ ವ್ಯಾಪ್ತಿಗೆ ತರಲಾಗಿದೆ.

ಬಹುತೇಕ ಪೇಪರ್‌ಲೆಸ್‌ ಆಗಿವೆ. (ಸಿಎಸ್‌ಬಿ ವಿಭಾಗವನ್ನು ಗೌಪ್ಯತೆ ಕಾಪಾಡುವ ಕಾರಣಕ್ಕಾಗಿ ಪೂರ್ಣ ಪ್ರಮಾಣದಲ್ಲಿ ಇ-ಆಡಳಿತ ವ್ಯಾಪ್ತಿಗೆ ಒಳಪಡಿಸಿಲ್ಲ.) 2019ರ ಅಕ್ಟೋಬರ್‌ನಲ್ಲಿ ಕಚೇರಿಯಲ್ಲಿ ಇ- ಫೈಲಿಂಗ್‌ ವ್ಯವಸ್ಥೆ ಅನುಷ್ಠಾನಕ್ಕೆ ಬಂದ ಬಳಿಕ ಕಡತಗಳ ವಿಲೇವಾರಿ ತ್ವರಿತಗತಿಯಲ್ಲಿ ಆಗುತ್ತಿದೆ. ಮುಂದಿನ ಹಂತದಲ್ಲಿ ಕಮಿಷನರೆಟ್‌ ವ್ಯಾಪ್ತಿಯ ಎಸಿಪಿ ಕಚೇರಿಗಳನ್ನು (ಉತ್ತರ, ದಕ್ಷಿಣ, ಕೇಂದ್ರೀಯ, ಸಂಚಾರ ವಿಭಾಗ) ಇ- ಫೈಲಿಂಗ್‌ ವ್ಯಾಪ್ತಿಗೆ ಒಳ ಪಡಿಸುವ ಉದ್ದೇಶವನ್ನು ಕಮಿಷನರೆಟ್‌ ಹೊಂದಿದೆ.

ಇ-ಫೈಲಿಂಗ್‌ ವ್ಯವಸ್ಥೆಯನ್ನು ಅಳವಡಿ ಸುವುದಕ್ಕಾಗಿ ಸಿಬಂದಿಗೆ ರಾಜ್ಯದ ವಿವಿಧೆಡೆ ಕಳುಹಿಸಿ ತರಬೇತಿ ನೀಡಲಾಗಿದೆ. ಕಚೇರಿಯ ಸಹಾಯಕ ಆಡಳಿತಾಧಿಕಾರಿ ರವಿಚಂದ್ರ ಅವರು ಕಳೆದ ಫೆಬ್ರವರಿಯಲ್ಲಿ ಹೊಸದಿಲ್ಲಿಗೆ ತೆರಳಿ ರಾಷ್ಟ್ರಮಟ್ಟದ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಬಂದಿ ದ್ದಾರೆ ಎಂದು ಪೊಲೀಸ್‌ ಆಯುಕ್ತ ಡಾ | ಹರ್ಷ ಪಿ.ಎಸ್‌. ತಿಳಿಸಿದ್ದಾರೆ. ರಾಜ್ಯದ ಡಿಜಿಪಿ ಕಚೇರಿಯಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಇ-ಫೈಲಿಂಗ್‌ ವ್ಯವಸ್ಥೆ ಅನುಷ್ಠಾನಗೊಂಡಿಲ್ಲ. ಅದಿನ್ನೂ ಇ- ಫೈಲಿಂಗ್‌ ಪ್ರಕ್ರಿಯೆಯ ಹಂತದಲ್ಲಷ್ಟೇ ಇದೆ. ಮಂಗಳೂರು ಕಚೇರಿಯ ಸಿಬಂದಿ ಮಾಹಿತಿ ತಂತ್ರಜ್ಞಾನದಲ್ಲಿ ಎಷ್ಟೊಂದು ಪಳಗಿದ್ದಾರೆ ಎಂದರೆ, ಇತ್ತೀಚೆಗೆ ಆಯುಕ್ತರ ಕಚೇರಿಯ ಸಿಬಂದಿ ಅಲ್ಲಿನ ಶಾಖಾಧಿಕಾರಿ ಹಂಪಣ್ಣ ಅವರ ಹುಟ್ಟುಹಬ್ಬ ಆಚರಿಸುವಾಗ ವಿಶೇಷ ರೀತಿಯ ಕೇಕ್‌ ತಯಾರಿಸಿ, ಕೇಕ್‌ನ ಮೇಲ್ಭಾಗದಲ್ಲಿ ಪ್ರಶಂಸಾಪತ್ರವನ್ನು ಮುದ್ರಿಸಿ ಡಿಜಿಟಲ್‌ ಸಹಿ ಮಾಡಿ ಶುಭಾಶಯ ಕೋರಿದ್ದರು.

42,803 ಕಡತ ಇ-ಫೈಲ್‌
2020ರ ಜೂ. 3ರ ವೇಳೆಗೆ ಮಂಗಳೂರು ಕಚೇರಿಯಲ್ಲಿ 42,803 ಕಡತಗಳನ್ನು ಇ-ಫೈಲ್‌ ಮಾಡಿ ಮೂವ್‌ ಮಾಡಲಾಗಿದೆ 46,162 ಕಡತಗಳಿಗೆ ಇ- ರಿಸಿಪ್ಟ್ ಮಾಡಲಾಗಿದೆ. ರಾಜ್ಯದ ಬೇರೆ ಯಾವುದೇ ಪೊಲೀಸ್‌ ಕಮಿಷನರ್‌ ಕಚೇರಿ, ಐಜಿಪಿ ಕಚೇರಿ ಅಥವಾ ಎಸ್‌ಪಿ ಕಚೇರಿಯಲ್ಲಿ ಇಷ್ಟೊಂದು ಪ್ರಮಾಣದ ಸಾಧನೆ ಆಗಿಲ್ಲ. ಪ್ರಥಮವಾಗಿ ಇ-ಫೈಲಿಂಗ್‌ ಆರಂಭಿಸಿದ ಬೆಂಗಳೂರಿನ ಸಿಐಡಿ ಕಚೇರಿ 2ನೇ ಸ್ಥಾನದಲ್ಲಿದೆ. ಸಿಐಡಿ ಕಚೇರಿಯಲ್ಲಿ ಜೂ. 3ರ ತನಕ 20,550 ಕಡತಗಳನ್ನು ಇ- ಫೈಲ್‌ ಮಾಡಿ ಮೂವ್‌ ಮಾಡಲಾಗಿದೆ ಹಾಗೂ 16,656 ಕಡತಗಳಿಗೆ ಇ-ರಿಸಿಪ್ಟ್ ಮಾಡಲಾಗಿದೆ. ಎಸ್‌ಪಿ ಕಚೇರಿಗಳ ಪೈಕಿ ಮಂಡ್ಯ ಜಿಲ್ಲೆ ಮುಂಚೂಣಿಯಲ್ಲಿದ್ದು, 14,311 ಕಡತಗಳನ್ನು ಇ- ಫೈಲ್‌ ಮಾಡಿ ಮೂವ್‌ ಮಾಡಲಾಗಿದೆ ಹಾಗೂ 6164 ಕಡತಗಳಿಗೆ ಇ-ರಿಸಿಪ್ಟ್ ಮಾಡಲಾಗಿದೆ. ದ್ವಿತೀಯ ಸ್ಥಾನದಲ್ಲಿರುವ ದ.ಕ. ಎಸ್‌ಪಿ ಕಚೇರಿಯಲ್ಲಿ 10,713 ಇ- ಫೈಲ್‌ ಮೂವ್‌ ಮಾಡಲಾಗಿದೆ ಹಾಗೂ 6,215 ಇ- ರಿಸಿಪ್ಟ್ ಮಾಡ ಲಾಗಿದೆ.

 ಮಾದರಿ
ಇ-ಫೈಲಿಂಗ್‌ ವ್ಯವಸ್ಥೆಯ ಸಾಧನೆಯಲ್ಲಿ ಮಂಗಳೂರು ಕಮಿಷನರ್‌ ಕಚೇರಿ ರಾಜ್ಯದಲ್ಲಿಯೇ ಮುಂಚೂಣಿ ಯಲ್ಲಿದ್ದು, ಮಾದರಿಯಾಗಿದೆ. ಎಂಟ್ರಿಯಿಂದ ಹಿಡಿದು ಡಿಸ್‌ಪ್ಯಾಚ್‌ವರೆಗಿನ ಪ್ರಕ್ರಿಯೆ 6-7 ತಾಸುಗಳಲ್ಲಿ ಮುಗಿಯುತ್ತದೆ. ಇದರಿಂದ ಸಾರ್ವಜನಿಕರಿಗೂ ಅನುಕೂಲವಾಗಿದೆ. ಕೇಂದ್ರ ಕಚೇರಿಗೂ ಅವತ್ತವತ್ತೇ ಕಡತಗಳು ರವಾನೆಯಾಗುತ್ತವೆ.
-ಡಾ| ಹರ್ಷ ಪಿ.ಎಸ್‌.
ಪೊಲೀಸ್‌ ಕಮಿಷನರ್‌

 ಸುಸಜ್ಜಿತ ವ್ಯವಸ್ಥೆ
ಮಂಗಳೂರು ಕಚೇರಿ ಇ-ಫೈಲಿಂಗ್‌ನ ಸಾಧನೆಯಲ್ಲಿ ಮುಂದೆ ಇದೆ. ಪೊಲೀಸ್‌ ಆಯುಕ್ತರ ಉತ್ತೇಜನ ಮತ್ತು ಸಲಹೆ ಈ ಸಾಧನೆಗೆ ಪ್ರೇರಣೆ ಮತ್ತು ಕಾರಣ. 2019ರ ಜುಲೈನಲ್ಲಿ ಅಧಿಕಾರ ಸ್ವೀಕರಿಸಿದ ಕೂಡಲೇ ಅವರು ಇ- ಆಡಳಿತದ ಬಗ್ಗೆ ಸೂಚನೆ ನೀಡಿ ಅಗತ್ಯ ಸಹಕಾರದ ಭರವಸೆ ನೀಡಿದ್ದರು. ಸೆ. 30 ನಮಗೆ ಗಡುವು ವಿಧಿಸಿದ್ದರು. ಸೆ. 29ರಂದು ಪ್ರಾಯೋಗಿಕವಾಗಿ ಇ- ಫೈಲಿಂಗ್‌ ಆರಂಭಿಸಿದ್ದೆವು. ಅ. 1ರಿಂದ ಸುಸಜ್ಜಿತವಾಗಿ ಇ- ಫೈಲಿಂಗ್‌ ಫೈಲಿಂಗ್‌ ವ್ಯವಸ್ಥೆಯನ್ನು ಆರಂಭಿಸಿದ್ದೇವೆ.
 -ರವಿಚಂದ್ರ
ಕಚೇರಿಯ ಸಹಾಯಕ ಆಡಳಿತಾಧಿಕಾರಿ

ಟಾಪ್ ನ್ಯೂಸ್

boxing

Doping test ನಕಾರ: ಬಾಕ್ಸರ್‌ ಪರ್ವೀನ್‌ ಹೂಡಾಗೆ ನಿಷೇಧ

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’

Foot ball

Women’s ವಿಶ್ವಕಪ್‌ ಫುಟ್‌ಬಾಲ್‌ ಆತಿಥ್ಯ ಬ್ರಝಿಲ್‌ಗೆ ಲಭಿಸಿತು

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

1-wqewqe

Impact player ನಿಯಮದಿಂದ ಬೌಲರ್‌ಗಳಿಗೆ ಹೊಡೆತ: ಶಾಬಾಜ್‌

Natural Ice Cream ಸಂಸ್ಥಾಪಕ ರಘುನಂದನ್‌ ಕಾಮತ್‌ ಇನ್ನಿಲ್ಲ

Natural Ice Cream ಸಂಸ್ಥಾಪಕ ರಘುನಂದನ್‌ ಕಾಮತ್‌ ಇನ್ನಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’

Natural Ice Cream ಸಂಸ್ಥಾಪಕ ರಘುನಂದನ್‌ ಕಾಮತ್‌ ಇನ್ನಿಲ್ಲ

Natural Ice Cream ಸಂಸ್ಥಾಪಕ ರಘುನಂದನ್‌ ಕಾಮತ್‌ ಇನ್ನಿಲ್ಲ

ವೆಲೆನ್ಸಿಯಾ: ಬೈಕ್‌ನಿಂದ ರಸ್ತೆಗೆ ಬಿದ್ದು ಮಹಿಳೆ ಸಾವು

ವೆಲೆನ್ಸಿಯಾ: ಬೈಕ್‌ನಿಂದ ರಸ್ತೆಗೆ ಬಿದ್ದು ಮಹಿಳೆ ಸಾವು

Kinnigoli: ಮೀನು ಮಾರಾಟಗಾರರ ಗಲಾಟೆ; ದೂರು

Kinnigoli: ಮೀನು ಮಾರಾಟಗಾರರ ಗಲಾಟೆ; ದೂರು

Road Mishap ಪರಸ್ಪರ ಢಿಕ್ಕಿ; ವಾಹನಗಳು ಜಖಂ

Road Mishap ಪರಸ್ಪರ ಢಿಕ್ಕಿ; ವಾಹನಗಳು ಜಖಂ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

boxing

Doping test ನಕಾರ: ಬಾಕ್ಸರ್‌ ಪರ್ವೀನ್‌ ಹೂಡಾಗೆ ನಿಷೇಧ

Rain ಮುಂದುವರಿದ “ಎಲ್ಲೋ ಅಲರ್ಟ್‌’

Rain ಮುಂದುವರಿದ “ಎಲ್ಲೋ ಅಲರ್ಟ್‌’

Foot ball

Women’s ವಿಶ್ವಕಪ್‌ ಫುಟ್‌ಬಾಲ್‌ ಆತಿಥ್ಯ ಬ್ರಝಿಲ್‌ಗೆ ಲಭಿಸಿತು

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.