ಪ್ರವಾಸೋದ್ಯಮ ಆರಂಭ: ಕ್ಯೂಬಾ ಸರಕಾರ ಚಿಂತನೆ

ಸದ್ಯ ಬೀಚ್‌ ಪ್ರವಾಸೋದ್ಯಮಕ್ಕೆ ಸೀಮಿತ ಅವಕಾಶ ನೀಡಲು ನಿರ್ಧರಿಸಲಾಗಿದೆ

Team Udayavani, Jun 12, 2020, 12:45 PM IST

ಪ್ರವಾಸೋದ್ಯಮ ಆರಂಭ: ಕ್ಯೂಬಾ ಸರಕಾರ ಚಿಂತನೆ

ಹವಾನಾ: ಕೋವಿಡ್‌ ಮುಂಜಾಗ್ರತೆಯಾಗಿ ನಗರದಲ್ಲಿ ಮನೆಗಳಿಗೆ ಆರೋಗ್ಯ ಸಿಬಂದಿ ಭೇಟಿ ನೀಡುತ್ತಿದ್ದಾರೆ.

ಕ್ಯೂಬಾ: ಅಂತಾರಾಷ್ಟ್ರೀಯ ಟೂರಿಸಂ ಆರಂಭವಾದ ಬಳಿಕ ತನ್ನ ದೇಶಕ್ಕೆ ಬರುವ ಎಲ್ಲ ಪ್ರವಾಸಿಗರನ್ನು ಕೊರೊನಾ ವೈರಸ್‌ ಪತ್ತೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಕ್ಯೂಬಾದ ಪ್ರಧಾನಿ ಮನಿಯಲ್‌ ಮೆರೇರೋ ಕ್ರೂಜ್‌ ಅವರು ಬುಧವಾರ ಹೇಳಿದ್ದಾರೆ. ದೇಶದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ ಅನ್ನು ಭಾಗಶಃ ತೆರವು ಮಾಡುವ ಬಗ್ಗೆ ಘೋಷಿಸಿದ ಅವರು, ಬೀಚ್‌ ಪ್ರವಾಸೋದ್ಯಮಕ್ಕೆ ಸೀಮಿತ ಅವಕಾಶ ನೀಡಲಾಗುವುದು ಎಂದು ಹೇಳಿದರು.

ಪ್ರವಾಸೋದ್ಯಮ ಪುನರಾರಂಭಕ್ಕೆ ಸಮಯಮಿತಿ ನಿಗದಿಗೊಳಿಸದ ಅವರು, ಪ್ರವಾಸಿಗರು ತಂಗುವ ಹೊಟೇಲ್‌ಗ‌ಳಲ್ಲಿ ಸಾಂಕ್ರಾಮಿಕ ಆರೋಗ್ಯ ತಜ್ಞರು ನಿಗಾ ಇರಿಸಲಿದ್ದಾರೆ.ಪ್ರವಾಸಿಗರು ಹವಾನಕ್ಕೆ ಭೇಟಿ ನೀಡುವುದನ್ನು ಕೂಡ ನಿರ್ಬಂಧಿಸಲಾಗುವುದು. ಪ್ರವಾಸೋದ್ಯಮವನ್ನು ಮೊದಲು ದೇಶದ ಪ್ರಜೆಗಳಿಗೆ ಮುಕ್ತಗೊಳಿಸಿ, ಆ ಬಳಿಕ ವಿದೇಶಿಯರ ಆಗಮನಕ್ಕೆ ಅವಕಾಶ ನೀಡಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ಕೋವಿಡ್‌ ಹೋರಾಟದಲ್ಲಿ ಜಯ
ಈ ಪುಟ್ಟ ಕೆರಿಬಿಯನ್‌ ದ್ವೀಪವು ಅತಿ ಕಡಿಮೆ ಕೋವಿಡ್ ಸೋಂಕಿತರನ್ನು ಹೊಂದಿತ್ತು ಹಾಗೂ ಕೊರೊನಾಮುಕ್ತವಾಗುವ ದಿನಗಳು ಹತ್ತಿರದಲ್ಲಿದೆ.ಹೊಸ ಲಾಕ್‌ಡೌನ್‌ ಯೋಜನೆ ಬಗ್ಗೆ ತಿಳಿಸಿದ ಪ್ರಧಾನಿ, ದೇಶದ ಸಾರ್ವಜನಿಕ ಈಜುಕೊಳಗಳು ಈ ಬಾರಿಯ ಬೇಸಗೆಗೆ ಶೇ. 30ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯಾರಂಭ ಮಾಡಲಿದೆ. ಸಾಮಾಜಿಕ ಅಂತರ ಕಾಪಾಡುವ ಷರತ್ತಿನೊಂದಿಗೆ ಸ್ಥಳೀಯಾಡಳಿತ ನಿಗಾದಲ್ಲಿ ಬೀಚುಗಳು ಪ್ರವಾಸಿಗರಿಗೆ ಮುಕ್ತವಾಗಲಿವೆ. ಆದರೆ ಸೋಂಕು ಹರಡುವುದನ್ನು ತಡೆಯುವ ಭಾಗವಾಗಿ ಈ ಬಾರಿ ಬೀಚುಗಳಲ್ಲಿ ಬೇಸಗೆ ಹಬ್ಬಗಳನ್ನು ಸರಕಾರ ಆಯೋಜಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ನಡುವೆ ಶಾಲೆಗಳನ್ನು ಸೆಪ್ಟಂಬರ್‌ ಮತ್ತು ನವೆಂಬರ್‌ನಲ್ಲಿ ಎರಡು ಹಂತಗಳಲ್ಲಿ ತೆರೆಯಲು ಸರಕಾರ ನಿರ್ಧರಿಸಿದೆ. ಸಾರ್ವಜನಿಕ ಹಾಗೂ ಖಾಸಗಿ ವಾಹನ ಸಂಚಾರವು ಕ್ರಮೇಣ ದೇಶವ್ಯಾಪಿಯಾಗಿ ಪುನರಾರಂಭವಾಗಲಿದೆ. ಸಾರ್ವಜನಿಕ ಸ್ಥಳಗಳು ಹಾಗೂ ಜನರು ಹತ್ತಿರದ ಸಂಪರ್ಕದಲ್ಲಿರುವಲ್ಲೆಲ್ಲ ಮಾಸ್ಕ್ ಬಳಕೆ ಕಡ್ಡಾಯವಾಗಿದೆ ಎಂದೂ ಅವರು ಹೇಳಿದ್ದಾರೆ. ದೇಶದಲ್ಲಿ ಸೋಂಕು ಪತ್ತೆಯಾದ ಕೂಡಲೇ ಗಡಿಗಳನ್ನು ಹಾಗೂ ಶಾಲೆಗಳನ್ನು ಮುಚ್ಚುವ ಮೂಲಕ ಸರಕಾರವು ವೈರಸ್‌ ಹೆಚ್ಚು ಹರಡದಂತೆ ನೋಡಿಕೊಂಡಿತ್ತು.

ಟಾಪ್ ನ್ಯೂಸ್

Chikkamagaluru Rains: ಕಾಫಿನಾಡು ಭಾಗದಲ್ಲಿ ಭಾರೀ ಮಳೆ;  ರೈತರ ಮೊಗದಲ್ಲಿ ಮಂದಹಾಸ

Chikkamagaluru Rains: ಕಾಫಿನಾಡು ಭಾಗದಲ್ಲಿ ಭಾರೀ ಮಳೆ; ರೈತರ ಮೊಗದಲ್ಲಿ ಮಂದಹಾಸ

1-wqeqwewq

Gangavathi: ಪೊಲೀಸ್ ಠಾಣೆಯಲ್ಲೇ ಒಂದೇ ಕೋಮಿನ ಎರಡು ಗುಂಪುಗಳ ಮಾರಾಮಾರಿ

Panaji: ಕೇಜ್ರಿವಾಲ್‍ಗೆ ಜಾಮೀನು… ಬೆರಗಾದ ಬಿಜೆಪಿ ನಾಯಕರು: ವಿನೋದ ಪಾಲೇಕರ್

Panaji: ಕೇಜ್ರಿವಾಲ್‍ಗೆ ಜಾಮೀನು… ಬೆರಗಾದ ಬಿಜೆಪಿ ನಾಯಕರು: ವಿನೋದ ಪಾಲೇಕರ್

PAK ಆಕ್ರಮಿತ ಕಾಶ್ಮೀರದಲ್ಲಿ ಜನಾಕ್ರೋಶ-ಭುಗಿಲೆದ್ದ ಪ್ರತಿಭಟನೆ-ಹಿಂಸಾಚಾರಕ್ಕೆ 2 ಸಾವು

PAK ಆಕ್ರಮಿತ ಕಾಶ್ಮೀರದಲ್ಲಿ ಜನಾಕ್ರೋಶ-ಭುಗಿಲೆದ್ದ ಪ್ರತಿಭಟನೆ-ಹಿಂಸಾಚಾರಕ್ಕೆ 2 ಸಾವು

16-uv-fusion

Conductor’s Humanity: ಮಾನವೀಯತೆ ಮೆರೆದ ಬಸ್‌ ಕಂಡಕ್ಟರ್‌

Bollywood: 2026ರ ಗಣರಾಜ್ಯೋತ್ಸವಕ್ಕೆ ಸನ್ನಿ ಡಿಯೋಲ್‌  ʼಬಾರ್ಡರ್‌ -2ʼ ರಿಲೀಸ್?‌

Bollywood: 2026ರ ಗಣರಾಜ್ಯೋತ್ಸವಕ್ಕೆ ಸನ್ನಿ ಡಿಯೋಲ್‌ ʼಬಾರ್ಡರ್‌ -2ʼ ರಿಲೀಸ್?‌

15-uv-fusion

Bus Conductor: ಕಂಡಕ್ಟರ್‌ ಎಂಬ ರಿಮೋಟ್‌ ಕಂಟ್ರೋಲರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Chikkamagaluru Rains: ಕಾಫಿನಾಡು ಭಾಗದಲ್ಲಿ ಭಾರೀ ಮಳೆ;  ರೈತರ ಮೊಗದಲ್ಲಿ ಮಂದಹಾಸ

Chikkamagaluru Rains: ಕಾಫಿನಾಡು ಭಾಗದಲ್ಲಿ ಭಾರೀ ಮಳೆ; ರೈತರ ಮೊಗದಲ್ಲಿ ಮಂದಹಾಸ

1-wqeqwewq

Gangavathi: ಪೊಲೀಸ್ ಠಾಣೆಯಲ್ಲೇ ಒಂದೇ ಕೋಮಿನ ಎರಡು ಗುಂಪುಗಳ ಮಾರಾಮಾರಿ

ಬ್ಯಾಡಗಿ- ಮದುವೆ ಮೂಲ ಅರ್ಥ ಕಳೆದುಕೊಳ್ತಿದೆ: ಸ್ವಾಮೀಜಿ

ಬ್ಯಾಡಗಿ- ಮದುವೆ ಮೂಲ ಅರ್ಥ ಕಳೆದುಕೊಳ್ತಿದೆ: ಸ್ವಾಮೀಜಿ

ಉತ್ತರಾಧಿಕಾರಿ ಆಯ್ಕೆ ಟ್ರಸ್ಟ್‌-ಹಿರಿಯರ ಹೊಣೆ: ಮಾದಾರ ಚನ್ನಯ್ಯ ಶ್ರೀ

ಉತ್ತರಾಧಿಕಾರಿ ಆಯ್ಕೆ ಟ್ರಸ್ಟ್‌-ಹಿರಿಯರ ಹೊಣೆ: ಮಾದಾರ ಚನ್ನಯ್ಯ ಶ್ರೀ

ವಿಶಿಷ್ಟ ಸ್ವಾದದೊಂದಿಗೆ ಜನರ ಮನ ಗೆದ್ದ ಮಲೆನಾಡ ತೀರ್ಥಹಳ್ಳಿ ಅಡಕೆ!

Arecanut: ವಿಶಿಷ್ಟ ಸ್ವಾದದೊಂದಿಗೆ ಜನರ ಮನ ಗೆದ್ದ ಮಲೆನಾಡ ತೀರ್ಥಹಳ್ಳಿ ಅಡಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.