ಕನಸಿನ ಬದುಕು ಹಾದಿ ತಪ್ಪದಿರಲಿ

ನಾನು ಮತ್ತು ನನ್ನ ಕನಸು

Team Udayavani, Jun 13, 2020, 2:59 PM IST

ಕನಸಿನ ಬದುಕು ಹಾದಿ ತಪ್ಪದಿರಲಿ

ಸಾಂದರ್ಭಿಕ ಚಿತ್ರ

ಬದುಕು ಗೊಂದಲಗಳ ಗೂಡು. ಈಗಷ್ಟೇ ಡಿಗ್ರಿ ಎಂಬ ಬಣ್ಣದ ಬದುಕಿನಿಂದ ಹೊರಬಂದ ಯುವ ಮನದ ಹಕ್ಕಿಗಳಿಗೆ ತಮ್ಮದೇ ಗೂಡನ್ನು ಅಂದವಾಗಿ ಕಟ್ಟಿಕೊಳ್ಳಲು ನೂರೆಂಟು ಅಡ್ಡಿಗಳು. ತಮ್ಮದೇ ರೀತಿಯಲ್ಲಿ ರೂಪಿಸಿಕೊಳ್ಳಬೇಕೆಂಬ ಇಚ್ಛೆಯಿರುತ್ತದೆ. ತಿನ್ನೋ ತಿನಿಸಿನಿಂದ ಹಿಡಿದು, ಹಾಕೋ ಬಟ್ಟೆಯವರೆಗೆ ನಮ್ಮದೇ ಆಯ್ಕೆಗಳಿರುತ್ತವೆ. ಇನ್ನು ನನ್ನ ಜೀವನದಲ್ಲಿ ನಾನು ಏನು ಆಗಬೇಕು? ಯಾವ ಕ್ಷೇತ್ರದಲ್ಲಿ ಹೋದರೆ ನಾನು ಗಟ್ಟಿಯಾಗಿ ನಿಲ್ಲಬಹುದು? ನನ್ನ ಆಸಕ್ತಿ, ನನ್ನ ಮನೋಬಲ, ನನ್ನ ಮನೆಯ ಸ್ಥಿತಿಗತಿ, ಎಲ್ಲಕ್ಕಿಂತ ಹೆಚ್ಚು ನನ್ನ ಕನಸು…ಇವೆಲ್ಲವನ್ನೂ ತಲೆಯಲ್ಲಿಟ್ಟುಕೊಂಡು ದಿಟ್ಟ ನಿರ್ಧಾರಗಳನ್ನು ಸಮಯದ ಬೇಲಿಯೊಳಗೆ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ.

ನಾವು ಸಣ್ಣವರಿದ್ದಾಗ ಹೀಗೆ ಆಗುತ್ತಿರಲಿಲ್ಲ. ನೀಲಿ ಬಣ್ಣದ ರೈನ್‌ಕೋಟ್‌ ಬೇಕು ಅಂದರೆ, ಅದು ಸಿಗುವವರೆಗೂ ನಮ್ಮ ಹಠ ನಿಲ್ಲುತ್ತಿರಲಿಲ್ಲ. ಕಡೆಗೆ ನಮ್ಮ ಹಠವೇ ಗೆಲ್ಲುತ್ತಿತ್ತು. ಆದರೆ ಈಗ ಹಾಗೆ ಆಗಿಲ್ಲ. ನಮಗೆ ಜವಾಬ್ದಾರಿಗಳ ಅರಿವಿದೆ. ಅಪ್ಪ ಅಮ್ಮನ ಕಷ್ಟ ಅರ್ಥ ಈಗ ಅರ್ಥವಾಗುತ್ತಿದೆ. ಪ್ರೀತಿಸಿದ ಹುಡುಗಿಯನ್ನು ಮದುವೆ ಆಗೋ ಅರ್ಹತೆನೂ ಇಲ್ದೇ ಹೋದ್ರೆ ಅನ್ನೋ ತೊಳಲಾಟ ಇದೆ. ಎಲ್ಲಕ್ಕಿಂತ ಹೆಚ್ಚು ಸಮಾಜದ ಭಯ ತುಂಬಾ ಕಾಡುತ್ತಿರುತ್ತದೆ. ಆದರೆ ಇವೆಲ್ಲದರ ಮಧ್ಯೆ ಆ ಹಠ ಎಲ್ಲಿ ಕಳೆದುಹೋಯ್ತು? ಮುಂಚೆ ಇದ್ದ “ನೀಲಿ ಬಣ್ಣದ್ದೇ ರೈನ್‌ಕೋಟ್‌ ಬೇಕು’ ಎಂಬ ನಿಚ್ಚಳವಾದ ಸ್ಪಷ್ಟತೆ ಎಲ್ಲಿ ಮಾಯ ಆಯ್ತು? ವಸ್ತುಗಳನ್ನ ಕೊಂಡು ಕೊಳ್ಳಬೇಕಾದರೆ ಅದೂ ಅಷ್ಟು ಸಣ್ಣ ವಯಸ್ಸಿನಲ್ಲಿ ಇರುತ್ತಿದ್ದ ಸ್ಪಷ್ಟತೆ, ಜೀವನ ಕಟ್ಟಕೊಬೇಕಾದ್ರೇ ಅದೂ ಈ ವಯಸ್ಸಿನಲ್ಲಿ ಇರಬೇಕಲ್ವಾ?
ಎಲ್ಲವೂ ನಾವು ಅಂದು ಕೊಂಡಂತೆ ನಡೆಯೋದಿಲ್ಲ ನಿಜ. ಆದರೆ ಸಾಧ್ಯತೆಗಳ ಬಗ್ಗೆ ನಮಗೆ ವಿಶ್ವಾಸವಿದ್ದರೆ ಯಾವುದನ್ನು ತಡೆಯೋಕೆ ಆಗಲ್ಲ. ಕಷ್ಟಪಟ್ಟು ಓದು ಆಮೇಲೆ ಆರಾಮವಾಗಿರಬಹುದು. ಎನ್ನುವ ಅಮ್ಮಂದಿರ ಮಾತು ಸುಳ್ಳು. ನಿಜವಾದ ಪ್ರಶ್ನೆಗಳು, ಕಷ್ಟಗಳು ಶುರುವಾಗುವುದು ಪಿಯುಸಿ ಮುಗಿದ ಮೇಲೆ. ನಮಗೆ ಬೇಕಾದ ಕೋರ್ಸ್‌, ವಿಷಯಗಳು, ಕಾಲೇಜು ಆರಿಸೋದ್ರಿಂದ ಹಿಡಿದು, ಅಲ್ಲಿ ಏನೋ ಸಾಧಿಸಿದ್ದೇವೆ ಅಂತ ಖುಷಿ ಪಡೋಷ್ಟರಲ್ಲೇ ನಮ್ಮ ಪದವಿ ಜೀವನ ಮುಗಿದಿರುತ್ತದೆ. ಪದವಿಯ ಅನಂತರ ಕೆಲವರು ಜಾಬ್‌ ಅಂತ ಹೋಗ್ತಾರೆ. ಇನ್ನು ಕೆಲವರು ಮನೆಯಲ್ಲಿರ್ತಾರೆ, ಮತ್ತೂಂದಿಷ್ಟು ಜನ ಮದುವೆ ಆಗ್ತಾರೆ, ಇನ್ನು ಕೆಲವರು ಮುಂದಿನ ಶಿಕ್ಷಣದ ಬಗ್ಗೆ ಯೋಚಿಸ್ತಾರೆ. ಇವೆಲ್ಲದರ ಮಧ್ಯೆ ಬೆರಳೆಣಿ ಕೆಯಷ್ಟು ಜನ ಮಾತ್ರ ತಮ್ಮ ಕನಸುಗಳನ್ನ ನನಸು ಮಾಡಿಕೊಳ್ಳುತ್ತಾರೆ. ಬದುಕಿನ ಗೊಂದಲಗಳ ಮಧ್ಯೆ ಕನಸುಗಳನ್ನು ಮರೆಯಬೇಡಿ. ನಮ್ಮ ಬದುಕಿನ ನಿರ್ಧಾರಗಳು ನಮ್ಮ ದೇ ಆಗಿರಲಿ. ಯಾಕೆಂದ್ರೆ ಎಲ್ಲರಕ್ಕಿಂತ ಹೆಚ್ಚು ನಮ್ಮ ಬಗ್ಗೆ ನಮಗೆ ಮಾತ್ರ ಗೊತ್ತಿರಲು ಸಾಧ್ಯ.

ಹತ್ತು ವರ್ಷ ಆದಮೇಲೆ ‘ನಾನು ಇನ್ನೇನೋ ಆಗಿರುತ್ತಿದ್ದೆ’ ಎಂಬ ಕೊರಗು ನಮ್ಮನ್ನು ಕಾಡಬಾರದು. ಆದರೆ ನಿಮ್ಮ ನಿರ್ಧಾರಗಳ ಮೇಲೆ ನಂಬಿಕೆಯಿರಲಿ, ಕಡೇ ಪಕ್ಷ ನನಗೆ ಬೇಕಾದ ಹಾಗೆ ಬದುಕಿದೆ ಅನ್ನೋ ಸಮಾಧಾನವಾದ್ರೂ ಇರುತ್ತೆ. ಕನಸನ್ನ ತಲುಪೋ ಕಿಚ್ಚು ಕಣ್ಣುಗಳಲ್ಲಿರಲಿ, ಎಲ್ಲಕ್ಕಿಂತ ಹೆಚ್ಚು ನಿಮ್ಮ ಕನಸಿನ ದಾರಿಯಲ್ಲಿ ಒಬ್ಬರೇ ನಡಿಯಲು ತುಂಬು ಧೈರ್ಯವಿರಲಿ. ಹಟ ಮತ್ತು ಸ್ಪಷ್ಟತೆಯಂತೂ ಇರಲೇಬೇಕಲ್ವಾ?


– ಲಾವಣ್ಯ ಎನ್‌.ಕೆ.
ಎಕೊಸಾಫಿಕಲ್‌ ಏಸ್ತೆಟಿಕ್ಸ್‌, ವಿದ್ಯಾರ್ಥಿ, ಮಾಹೆ ಮಣಿಪಾಲ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.