ಬೈಕಂಪಾಡಿ: ನೀರು ಹರಿಯಲು ಹೆದ್ದಾರಿ ಇಲಾಖೆ ತೋಡಿದ ಗುಂಡಿಯಿಂದ ಜನರಿಗೆ ನಿತ್ಯ ಸಂಕಷ್ಟ
Team Udayavani, Jun 14, 2020, 2:24 PM IST
ಸುರತ್ಕಲ್: ಇಲ್ಲಿನ ಬೈಕಂಪಾಡಿ ಸಿಂಡಿಕೇಟ್ ಬ್ಯಾಂಕ್ ಬಳಿ ಹೆದ್ದಾರಿ ಇಲಾಖೆ ಗುಂಡಿ ತೋಡಿದ್ದು, ಸದ್ಯ ಅದರಲ್ಲಿ ಮಳೆ ನೀರು ನಿಂತು ಜನ ಸಂಕಷ್ಟ ಅನುಭವಿಸುವಂತಾಗಿದೆ.
ಮಳೆ ನೀರು ಹರಿದು ಹೋಗಲು ಎಂಬ ಕಾರಣಕ್ಕೆ ಸಿಂಡಿಕೇಟ್ ಬ್ಯಾಂಕ್ ಬಳಿ ಜೆಸಿಬಿ ವಾಹನದಿಂದ ಹೊಂಡ ತೋಡಲಾಗಿದೆ. ಆದರೆ ನೀರು ಹರಿಯುವ ಬದಲು ಅಲ್ಲೇ ನಿಂತು ಜನರು ಬೀಳುವಂತಾಗಿದೆ.
ಎದುರಲ್ಲೇ ಬ್ಯಾಂಕ್ ಒಂದರ ಎಟಿಎಂ ಇದ್ದು ಹಣ ತೆಗೆಯಲು ಬರುವ ಮಂದಿ ಇಲ್ಲಿ ಹೊಂಡ ಇರುವುದು ತಿಳಿಯದೆ ಬೀಳುತ್ತಿದ್ದಾರೆ. ಈಗಾಗಲೇ ಅನೇಕರು ಬಿದ್ದು ಕಾಲು ಉಳುಕಿಸಿಕೊಂಡಿದ್ದಾರೆ. ಹಣ ಹೊಂಡದ ಪಾಲಾಗಿದೆ.ಇನ್ನು ಹೊಂಡ ತೆಗೆದ ಪರಿಣಾಮ ನೀರು ನಿಂತು ಜನರು ನಡೆಯಲು ಸಾಧ್ಯವಾಗುತ್ತಿಲ್ಲ.ರಸ್ತೆಯವರೆಗೆ ನೀರು ನಿಂತಿದೆ. ಸ್ವಲ್ಪ ಏಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.
ಹೊಂಡದಲ್ಲಿ ಕೆಸರು ನೀರು ತುಂಬಿ ಹೋಗಿದ್ದು ಗೊತ್ತಿಲ್ಲದೆ ಇಲ್ಲಿ ಯಾರಾದರೂ ಕಾಲಿಟ್ಟರೆ ಕೆಸರು ನೀರಿಗೆ ಬೀಳುವ ಅಪಾಯವಿದೆ. ಯಾವುದೇ ಪ್ರಾಣಾಪಾಯ ನಡೆಯುವ ಮೊದಲು ತಕ್ಷಣ ಈ ಬಗ್ಗೆ ಹೆದ್ದಾರಿ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ತುರ್ತು ಕ್ರಮ ಕೈಗೊಳ್ಳ ಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್
ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್ ಪಡೀಲ್ ಆಯ್ಕೆ
ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!
Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !
Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!