ಮಾಳಗಡ್ಡೆ ಬಡಾವಣೆಗೆ ಮೂಲ ಸೌಲಭ್ಯಕ್ಕೆ ಒತ್ತಾಯಿಸಿ ಹೋರಾಟ
ಮಾಳಗಡ್ಡೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ
Team Udayavani, Jun 16, 2020, 11:47 AM IST
ಬಳ್ಳಾರಿ: ಮೂಲಸೌಲಭ್ಯಕ್ಕೆ ಆಗ್ರಹಿಸಿ ಮಾಳಗಡ್ಡೆ ಹೋರಾಟ ಸಮಿತಿ ವತಿಯಿಂದ ಜಿಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಬಳ್ಳಾರಿ: ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ಮಾಳಗಡ್ಡೆ ಬಡಾವಣೆಯಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ಮಾಳಗಡ್ಡೆ ಹೋರಾಟ ಸಮಿತಿ ವತಿಯಿಂದ ನಗರದ ಜಿಪಂ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು. ಶ್ರೀಧರಗಡ್ಡೆ ಗ್ರಾಮದ ಮಾಳಗಡ್ಡೆ ಬಡವಣೆಯಲ್ಲಿ ಸುಮಾರು 150 ಮನೆಗಳಿವೆ. ಈ ಬಡಾವಣೆಯಲ್ಲಿ ವಾಸಮಾಡುತ್ತಿರುವ ಜನತೆ, ಕೃಷಿ ಕಾರ್ಮಿಕರು ಹಾಗೂ ದಿನಗೂಲಿ ಕಾರ್ಮಿಕರಾಗಿರುತ್ತಾರೆ . ಇವರೆಲ್ಲರಿಗೂ 1981ರಲ್ಲಿ ಮತ್ತು 1991ರಲ್ಲಿ ಆಶ್ರಯ ಯೋಜನೆಯಡಿ ಹಾಗೂ 1995ರಲ್ಲಿ ಇಂದಿರಾ ಆವಾಸ್ ಯೋಜನೆಯಡಿ ಸರ್ಕಾರವು ಪಟ್ಟಾ ಮಂಜೂರು ಮಾಡಿದೆ. ವಿಪರ್ಯಾವೆಂದರೆ, ಈ ಬಡಾವಣೆಯಲ್ಲಿ ಪಂಚಾಯಿತಿ ಪ್ರಾಧಿಕಾರವು ಕಳೆದ 10-15 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ.
ಶೌಚಾಲಯ ನಿರ್ಮಿಸಲು ಯೋಜನೆಯಿದ್ದರೂ ಹಣ ನೀಡಿಲ್ಲ. ಸುಸಜ್ಜಿತ ರಸ್ತೆ ನಿರ್ಮಿಸಿಲ್ಲ. ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಜನತೆ ದಿನಂಪ್ರತಿ ಸಮಸ್ಯೆಗಳ ಸುಳಿಯಲ್ಲಿ ಜೀವನ ಮಾಡುತ್ತಿದ್ದಾರೆ. ಅನಾರೋಗ್ಯಕರ ವಾತಾವರಣದಲ್ಲಿ ಬದುಕು ಸಾಗಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾನಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಬದ್ದ ಹಕ್ಕುಗಳಿಂದ ವಂಚಿತರಾದ ಈ ಜನತೆಗೆ ಸರ್ಕಾರಿ ಯೋಜನೆಯಡಿ ಕೂಡಲೇ ಶೌಚಾಲಯ ನಿರ್ಮಿಸಿಕೊಡಬೇಕು. ಕುಡಿವ ನೀರು ಸರಬರಾಜು, ನಿಯಮಿತವಾಗಿ ಮಾಡಲು ಸೂಕ್ರ ಕ್ರಮ ಕೈಗೊಳ್ಳಬೇಕು. ಪೈಪ್ಲೈನ್ ಅಳವಡಿಸಿ ನೀರು ಸರಬರಾಜು ಮಾಡಬೇಕು. ಕೆಟ್ಟು ಹಾಳಾಗಿ ಹೋಗಿರುವ, ನೀರು ಹರಿಯದಂತಾಗಿ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿ ಅನೇಕ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿರುವ ಒಳಚರಂಡಿಗಳನ್ನು ದುರಸ್ತಿ ಮಾಡಿ, ಪುನಃ ನಿರ್ಮಿಸಿಕೊಡಬೇಕು. ಬಡಾವಣೆಯಲ್ಲಿ ರಸ್ತೆಯೇ ಇಲ್ಲ, ಆದ್ದರಿಂದ ರಸ್ತೆ ನಿರ್ಮಿಸಿಕೊಡಬೇಕು. ಬೀದಿ ದೀಪಗಳನ್ನು ಅಳವಡಿಸಿಕೊಡಬೇಕು. ಕಳೆದ 10-15 ವರ್ಷಗಳಿಂದ ವಿನಾಃ ಕಾರಣ ಕಟ್ಟಿಸಿಕೊಳ್ಳದ ಮನೆ ತೆರಿಗೆಯನ್ನು ಈಗಿನಿಂದಲೇ ಕಟ್ಟಿಸಿಕೊಳ್ಳಬೇಕು. ಜತೆಗೆ ಸೂಕ್ತ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂದವರು ಒತ್ತಾಯಿಸಿದ್ದಾರೆ. ಬಳಿಕ ಜಿಪಂ ಸಿಇಒ ಕೆ.ನಿತೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾಳಗಡ್ಡ ನಿವಾಸಿಗಳ ಹೋರಾಟ ಸಮಿತಿಯ ಶ್ರೀಧರಗಡ್ಡೆ ಸಂಚಾಲಕ ಇ.ಹನುಮಂತಪ್ಪ, ಆರ್. ಸೋಮಶೇಖರ್ಗೌಡ, ಎ.ದೇವದಾಸ್, ಎನ್.ಬಿ.ಬಾಬು ಹಾಗೂ ಸದಸ್ಯರಾದ ಚೆನ್ನಬಸಪ್ಪ, ಸುಂಕಪ್ಪ, ಈರಮ್ಮ, ಸಣ್ಣ ಹನುಮಪ್ಪ, ಪಂಪಾ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
HDK ಹೇಳುತ್ತಿದ್ದದ್ದು ಪ್ರಜ್ವಲ್ ಪೆನ್ಡ್ರೈವ್ ಇರಬೇಕು: ಜಮೀರ್
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ
ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್