ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಪಡುಬಿದ್ರಿ ಪರಿಸರದಲ್ಲಿ ಕೃತಕ ನೆರೆ ಭೀತಿ
Team Udayavani, Jun 16, 2020, 1:39 PM IST
ಪಡುಬಿದ್ರಿ : ಪಡುಬಿದ್ರಿ : ರಾಷ್ಟ್ರೀಯ ಹೆದ್ದಾರಿಯವರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪಡುಬಿದ್ರಿ ಹೆದ್ದಾರಿ ಬದಿಯ ಮನೆಯವರಿಗೆ ಕೃತಕ ನೆರೆಯ ಭೀತಿ ಎದುರಾಗಿದೆ.
ಕಳೆದ ಎರಡು ಮೂರು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು ಪಡುಬಿದ್ರಿಯಲ್ಲಿ ಹೆದ್ದಾರಿ ಕಾಮಗಾರಿಯವರು ನೀರು ಹರಿವ ಪರಂಬೋಕು ತೋಡಿಗೆ ಮಣ್ಣು ತುಂಬಿ ಮಚ್ಚಿರುವುದರಿಂದ ಕೃತಕ ನೆರೆ ಹಾವಳಿಯುಂಟಾಗಿದೆ.
ಇದರಿಂದಾಗಿ ಇಲ್ಲಿನ ಹೆದ್ದಾರಿ ಸಮೀಪದ ದಿ. ರಮೇಶ ಆಚಾರ್ಯ ಮತ್ತು ಲಲಿತಾ ದೇವಾಡಿಗರ ಮನೆಗಳು ಕೃತಕ ನೆರೆಯ ಹಾವಳಿಗೆ ಒಳಗಾಗಿವೆ.
ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ತಗ್ಗು ಪ್ರದೇಶಗಳಿಗೆ ಮಳೆ ನೀರು ಹರಿಯುತ್ತಿವೆ.
ಹೆದ್ದಾರಿಯವರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹೆದ್ದಾರಿ ಬದಿಯ ನಿವಾಸಿಗಳು ಆತಂಕದಲ್ಲಿ ದಿನ ದೂಡುವ ಪರಿಸ್ಥಿತಿ ಎದುರಾಗಿದೆ.