ಕೋವಿಡ್-19 ಕಡಿವಾಣ ಹಾಕಿದ 1960ರ ದಶಕದ ಡೆಕ್ಸಾಮೆಥಾಸೋನ್
Team Udayavani, Jun 18, 2020, 2:18 PM IST
ಲಂಡನ್: ವಿಶ್ವದೆಲ್ಲೆಡೆ ಕೋವಿಡ್-19 ಸೋಂಕಿಗೆ ಕಡಿವಾಣ ಹಾಕಲು ಔಷಧ ಕಂಡುಹಿಡಿಯುವಲ್ಲಿ ನಾನಾ ದೇಶಗಳ ಸಂಶೋಧಕರು ತಂಡೋಪತಂಡವಾಗಿ ನಿರಂತರ ಪ್ರಯತ್ನ ನಡೆಸುತ್ತಿದ್ದು, ಸದ್ಯಕ್ಕೆ ಇರುವ ಔಷಧಿಯನ್ನೇ ಸೋಂಕಿತರ ಮೇಲೆ ಪ್ರಯೋಗ ಮಾಡಲಾಗುತ್ತಿದೆ.
ಆಶಾದಾಯಕ ಹೊಸ ಬೆಳವಣಿಗೆಯೊಂದು ನಡೆದಿದ್ದು, ಸೋಂಕಿತರಿಗೆ ಡೆಕ್ಸಾಮೆಥಾಸೋನ್(Dexamethasone) ನೀಡಿದಲ್ಲಿ ಗುಣಮುಖರಾಗುತ್ತಾರೆ ಎಂದು ಇಂಗ್ಲೆಂಡ್ ಸಂಶೋಧಕರು ಹೇಳಿದ್ದಾರೆ. ಆ ಮೂಲಕ ಕೋವಿಡ್-19 ಸೋಂಕು ಹರಡುವಿಕೆಗೂ ಕಡಿವಾಣ ಹಾಕಬಹುದಾಗಿದ್ದು, ಪ್ರಾಯೋಗಿ ಪರೀಕ್ಷೆ ವೇಳೆ ಈ ಅಂಶ ತಿಳಿದುಬಂದಿದೆ.
ಸಾವಿನ ಕದ ತಟ್ಟಿದವರು ಶೀಘ್ರ ಗುಣಮುಖ
ಸೋಂಕಿಗೆ ತುತ್ತಾಗಿ ಸಾವಿನ ಕದ ತಟ್ಟಿದ್ದ ಸುಮಾರು 5 ಸಾವಿರ ಕೋವಿಡ್-19 ಸೋಂಕಿತರಿಗೆ ಡೆಕ್ಸಾಮೆಥಾಸೋನ್ ಔಷಧ ನೀಡಿದ್ದು, ಸೋಂಕಿತರು ಶೀಘ್ರವಾಗಿ ಗುಣಮುಖವಾಗುವ ಮೂಲಕ ಸಾವಿನ ದವಡೆಯಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಪರಿಣಾಮಕಾರಿ ಔಷಧ
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನ ತಂಡ ಈ ಕುರಿತು ಅಧ್ಯಯನ ನಡೆಸಿದ್ದು, ಡೆಕ್ಸಾಮೆಥಾಸೋನ್ ಪರಿಣಾಮಕಾರಿ ಔಷಧವಾಗಿ ಕಾರ್ಯನಿರ್ವಸುತ್ತದೆ ಎಂದು ಸಂಶೋಧನ ವರದಿ ತಿಳಿಸಿದೆ. ಜತೆಗೆ ಈ ತಂಡದ ಸದಸ್ಯ ಪ್ರೊ. ಪೀಟರ್ಹಾರ್ಬಿ ಈ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದು, ಡೆಕ್ಸಾಮೆಥಾಸೋನ್ ಸಾವಿನ ಪ್ರಮಾಣವನ್ನು ಕಡಿತಗೊಳಿಸುವಲ್ಲಿಯೂ ಉಪಕಾರಿಯಾಗಿದೆ ಮತ್ತು ಸೋಂಕು ತಡೆಯುವಲ್ಲಿ ಯಶಸ್ವಿಯಾಗಿದೆ ಎಂದ್ದಾರೆ.
1960ರಿಂದ ಬಳಕೆ
1960ರಿಂದಲೇ ವಿಶ್ವದೆಲ್ಲೆಡೆ ಡೆಕ್ಸಾಮೆಥಾಸೋನ್ ಔಷಧ ಬಳಕೆಯಾಗುತ್ತಿದ್ದು, ಅಸ್ತಮಾ ಸೇರಿದಂತೆ ಹಲವು ರೋಗಿಗಳ ಚಿಕಿತ್ಸೆಯಲ್ಲಿ ಉಪಯೋಗ ಮಾಡಲಾಗುತ್ತಿದೆ. ಸದ್ಯ ಕೊರೊನಾ ತಡೆಗೆ ಹೆಚ್ಚಾಗಿ ಬಳಸುತ್ತಿರುವ ಹೈಡ್ರಾಕ್ಸಿಕ್ಲೊರೋಕ್ವಿನ್ ನಿಂದ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇದಕ್ಕೆ ಪರ್ಯಾಯವಾಗಿ ಡೆಕ್ಸಾಮೆಥಾಸೋನ್ ಸಿಕ್ಕಿರುವ ಆಶಾದಾಯಕ ಬೆಳವಣಿಗೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ