ಮಗುವಿನ ಚಿಕಿತ್ಸಾ ಸಹಾಯಕ್ಕೆ ಮನವಿ
Team Udayavani, Jun 18, 2020, 10:30 PM IST
ಸಾಂದರ್ಭಿಕ ಚಿತ್ರ..
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಮೂಡು ತೆಕ್ಕಟ್ಟೆ ನಿವಾಸಿ ಯಜ್ಞೇಶ್ ಆಚಾರ್ಯ ಅವರ ಎರಡು ವರುಷದ ಮಗು ಶ್ರೀಯಾ ಎಂದಿನಂತೆ ಮನೆಯೊಳಗೆ ಆಟ ಆಡುತ್ತಿದ್ದು , ಆಡುತ್ತಾ ದೇವರ ಕೋಣೆಯೊಳಗೆ ಹೋಗಿ ಅಲ್ಲಿ ಉರಿಯುತ್ತಿದ್ದ ದೀಪ ಮಗುವಿನ ಬಟ್ಟೆಗೆ ತಗಲಿ ಬೆಂಕಿ ಹತ್ತಿಕೊಂಡಿದೆ, ಮಗು ಕಿರುಚಿದ ಧ್ವನಿ ಕೇಳಿ ಮನೆಯವರು ಓಡೋಡಿ ಬರುವುದರೊಳಗೆ ಮಗುವಿನ ದೇಹ ಭಾಗಶಃ ಸುಟ್ಟು ಗಾಯವಾಗಿದೆ.
ತತ್ಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿದ್ದಾಳೆ. ಚಿಕಿತ್ಸಾ ವೆಚ್ಚ 4 ಲ. ರೂ. ಗೂ ಅಧಿಕ ಮೊತ್ತ ತಗಲಬಹುದು ಎಂದು ಹೇಳಲಾಗಿದ್ದು , ಮಗುವಿನ ತಂದೆ ಯಜ್ಞೇಶ್ ಆಚಾರ್ಯ ಬಡಕುಟುಂಬ ದವರಾಗಿದ್ದು , ಆರ್ಥಿಕ ಸಂಕಷ್ಟದಲ್ಲಿರುವ ಇವರಿಗೆ ಚಿಕಿತ್ಸಾ ವೆಚ್ಚವನ್ನು ಭರಿಸಲು ಕಷ್ಟಸಾಧ್ಯವಾಗಿದ್ದು ಮಾನವೀಯ ಸ್ಪಂದನೆಯ ನಿರೀಕ್ಷೆಯಲ್ಲಿದ್ದಾರೆ. ಸಹಾಯಕ್ಕಾಗಿ : Yajnesh Achar, Ac.No 4152500101055101, IFSC- KARB0000415, Branch – kumbhashi.