Innaje : ಆಸರೆ ಕಳೆದುಕೊಂಡಿರುವ ಅಣ್ಣ-ತಂಗಿ | Udayavani
Team Udayavani, Jun 20, 2020, 6:31 PM IST
ಇನ್ನಂಜೆ : ಆಸರೆ ಕಳೆದುಕೊಂಡು, ತುತ್ತು ಅನ್ನಕ್ಕೂ ಪರದಾಡುತ್ತಿರುವ ಅಣ್ಣ-ತಂಗಿ ; ನೆರವಿಗೆ ದಾನಿಗಳ ಮೊರೆ ಕಾಪು, ಜೂ. ೧೯ : ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಎರಡು ಬಡ ಜೀವಗಳು ಆಸರೆಗಾಗಿ ಸಾರ್ವಜನಿಕರ ಸಹಕಾರದ ಮೊರೆ ಹೋಗಿವೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಂಡೇಡಿ ಬಂಡಿ ತೊಟ ಸಂಕಪ್ಪ ಯಾನೆ ಶಂಕರ ಪೂಜಾರಿ ಮತ್ತು ಅವರ ತಂಗಿ ಸರಸು ಪೂಜಾರ್ತಿ ಅವರು ತಮಗಾರೂ ಆಸರೆಯಿಲ್ಲದೇ ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಂಡು ಕೊರಗುತ್ತಾ ತುತ್ತು ಅನ್ನಕ್ಕೂ ಪರದಾಡುತ್ತಿರುವ ದೃಷ್ಯ ಮನುಕುಲುಕುವಂತಿದೆ. ಮುಂಬೈನಲ್ಲಿ ಉದ್ಯೋಗದಲ್ಲಿರುವವರೆಗೂ ಉತ್ತಮ ಸ್ಥಿತಿವಂತರಾಗಿಯೇ ಇದ್ದ ಸಂಕಪ್ಪ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸೊಂಟ ಬಲ ಕಳೆದುಕೊಂಡ ಬಳಿಕ ಅವರ ಜೀವನವು ಹಳಿ ತಪ್ಪಿದೆ. ಇದಾದ ಕೆಲವೇ ಸಮಯಗಳಲ್ಲಿ ಅವರ ತಂಗಿ ಸರಸು ಪೂಜಾರ್ತಿ ಅವರ ದಾಂಪತ್ಯ ಜೀವನವೂ ಹಳಿ ತಪ್ಪಿದ್ದು, ಗಂಡನಿಂದ ಬೇರ್ಪಟ್ಟ ಅವರು ಸಹೋದರನ ಆಶ್ರಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳಿದ್ದರೂ ಅನಾಥರಂತೆ ಬದುಕುತ್ತಿರುವ ಸಂಕಪ್ಪ ಅವರ ದೈನಂದಿನ ಎಲ್ಲಾ ಚಟುವಟಿಕೆಗಳಿಗೂ ತಂಗಿ ಸರಸು ಅವರೇ ಆಸರೆಯಾಗಿದ್ದಾರೆ. ಆದಾಯದ ಮೂಲವೇ ಇಲ್ಲದ ವೃದ್ಧ ಅಣ್ಣ – ತಂಗಿಯ ಜೀವನವು ದಿನದಿಂದ ದಿನಕ್ಕೆ ನಾವಿಕನಿಲ್ಲದ ದೋಣಿಯಂತೆ ಮುಳುಗುತ್ತಿದೆ. ಮೊನ್ನೆಯವರೆಗೂ ಸರಕಾರದ ಅಂತ್ಯೋದಯ ಕಾರ್ಡ್ನ ಸೌಲಭ್ಯಗಳ ಸಹಿತವಾಗಿ ಹೊಟ್ಟೆ ಪಾಡಿಗಾಗಿ ಅಕ್ಕಪಕ್ಕದವರು ಮತ್ತು ಸಂಬಂಽಗಳಿಂದ ಸಹಾಯ ಪಡೆದು ಜೀವನ ನಡೆಸುತ್ತಿದ್ದ ಅಣ್ಣ-ತಂಗಿಯ ಬದುಕನ್ನು ಮಹಾಮಾರಿ ಕೊರೊನಾ ಮತ್ತು ಅದರ ಕಾರಣದಿಂದಾಗಿ ಜಾರಿಗೆ ಬಂದ ಲಾಕ್ಡೌನ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿ ಬಿಟ್ಟಿದೆ. ಮೊದಲೇ ಕಷ್ಟದಲ್ಲಿದ್ದವರ ಬದುಕಿನಲ್ಲಿ ಕೊರೋನಾ ಸಂಕಷ್ಟದ ಬಿರುಗಾಳಿಯನ್ನೇ ಎಬ್ಬಿಸಿದೆ. ಒಪ್ಪತ್ತು ಅನ್ನಕ್ಕೂ ಕಷ್ಟಪಡುತ್ತಿದ್ದ ಉಡುಪಿಯ ಅಣ್ಣ ತಂಗಿ ಈಗ ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ. ಈ ಕುಟುಂಬಕ್ಕೆ ಸಹಾಯ, ಸಹಕಾರ ನೀಡುತ್ತಿದ್ದ ದಾನಿಗಳು ಕೂಡಾ ಕೊರೊನಾ ಕಂಟಕದಿಂದ ಇವರನ್ನು ಕೈ ಬಿಟ್ಟಿದ್ದು, ಪ್ರಸ್ತುತ ಅಣ್ಣ-ತಂಗಿಯ ಜೀವನ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ತುತ್ತು ಅನ್ನಕ್ಕೂ ಪರದಾಡುತ್ತಿರುವ ಈ ಬಡ ಕುಟುಂಬಕ್ಕೆ ದಾನಿಗಳ ನೆರವಿನ ಸಹಾಯ ಹಸ್ತ ದೊರಕಬೇಕಾದ ಅಗತ್ಯತೆಯಿದೆ. ಬಡ ವೃದ್ಧ ಅಣ್ಣ-ತಂಗಿಯ ಬದುಕಿಗೆ ನೆರವಾಗುವಂತೆ ಆರ್ಥಿಕ ನೆರವು ನೀಡಲಿಚ್ಚಿಸುವವರು, ಶಂಕರ ಪೂಜಾರಿ, ಕೆನರಾ ಬ್ಯಾಂಕ್ ಶಂಕರಪುರ ಶಾಖೆ, ಖಾತೆ ಸಂಖ್ಯೆ : ೦೬೩೬೧೧೯೦೦೦೩೧೫ (ಐಊಖಇ : ಇಘ್ಕೆಆ೦೦೦೦೬೩೬) ಇಲ್ಲಿಗೆ ಹಣ ಜಮಾ ಮಾಡಬಹುದಾಗಿದೆ. ಅಥವಾ ಮೊ : ೮೦೯೫೨೨೮೬೦೭ ಗೆ ಸಂಪರ್ಕಿಸಬಹುದಾಗಿದೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ