Mattu : ಕೃಷಿ ಗದ್ದೆಯಲ್ಲಿ ನಾಟಿ ಮಾಡಿದ ಯುವಜನರ ತಂಡ | Udayavani
Team Udayavani, Jun 20, 2020, 3:29 PM IST
ಕಟಪಾಡಿ ,,,;; NATION FIRST ತಂಡವು(Ex cadet team) ‘ಮಟ್ಟು’ ಪ್ರದೇಶದಲ್ಲಿ ‘ಸಾಧನಾ ದೇಜಪ್ಪ ಕೋಟ್ಯಾನ್’ರವರ ಹಡಿಲು ಬಿದ್ದ ಗದ್ದೆಯನ್ನು ಸಮತಟ್ಟುಗೊಳಿಸಿ ‘ಸಾಲು ನಟ್ಟಿ’ ಪದ್ಧತಿಯಲ್ಲಿ ಕೃಷಿಯನ್ನು ನಡೆಸಿ ಸಂತೃಪ್ತಿ ವ್ಯಕ್ತಪಡಿಸಿತು. ಸುಮಾರು 24 ದಿವಸದ ಹಿಂದೆ ಬೀಜವನ್ನು ಬಿತ್ತಿ ಎಮ್ 4 ತಳಿಯ ನೇಜಿಯನ್ನು ನಾಟಿ ನಡೆಸಿದ ತಂಡದಲ್ಲಿ ಸುಮಾರು 20 ಮಂದಿ ಭಾಗವಹಿಸಿದರು, ಈ ತಂಡವು ಉಡುಪಿಯ ವಿವಿಧ ಪ್ರದೇಶದಲ್ಲಿ ಸುಮಾರು 4 ಎಕ್ರೆ ಹಡಿಲು ಬಿದ್ದ ಗದ್ದೆಯನ್ನು ಈ ವರ್ಷ ನಾಟಿ ಮಾಡುತ್ತಿದೆ. ಕೃಷಿ ಬಿಟ್ಟ ರೈತರನ್ನು ಕೃಷಿ ಮಾಡುವಂತೆ ಪ್ರೋತ್ಸಾಹಿಸಿವುದು ಮತ್ತು ಯುವ ಜನರಲ್ಲಿ ಕೃಷಿ ಬಗ್ಗೆ ಅರಿವು ಮಾಡಿಸುವುದು ಮುಖ್ಯ ಉದ್ದೇಶ. NATION FIRST ತಂಡವು ಮೆ॥ ಪ್ರಕಾಶ್ ರಾವ್ ರವರ ಮಾರ್ಗದರ್ಶನ ಮತ್ತು ಸೂರಜ್ ಕಿದಿಯೂರು ರವರ ನೇತೃತ್ವದಲ್ಲಿ ಸಾಗುತ್ತಿದೆ.