ಕೋವಿಡ್ ಕಾಲದ ಊರಿನ ಕಥೆಯಿದು..! ಮನೆಯೇ ಮಂತ್ರಾಲಯ!


Team Udayavani, Jun 27, 2020, 11:30 AM IST

ಕೋವಿಡ್ ಕಾಲದ ಊರಿನ ಕಥೆಯಿದು..! ಮನೆಯೇ ಮಂತ್ರಾಲಯ!

ಸಾಂದರ್ಭಿಕ ಚಿತ್ರ

ನಮಗೆಲ್ಲರಿಗೂ ಮನೆಯೆಂಬುದು ಅದೆಷ್ಟೋ ಸಂಗತಿಗಳ, ಸಂತೋಷಗಳ ನೆನಪಿನ ಬುತ್ತಿಯ ಆಗರ. ಮನೆ ಎಂದರೆ ಹೀಗೆಯೇ ಇರಬೇಕೆಂದೇನಿಲ್ಲ. ಆದರೂ ಇರುವ ಹಾಗೆಯೇ ಇದ್ದರೆ ಚೆನ್ನ ಎಂಬುದು ನನ್ನ ಅಭಿಪ್ರಾಯ.  ಹಳ್ಳಿಗಳಲ್ಲಾದರೆ ಮನೆಯ ಹೊರಗಡೆ ಅಂಗಳ, ಜಗಲಿ, ನಡುಮನೆ, ಚೌಕಿ, ಅಡುಗೆ ಮನೆ, ಬಚ್ಚಲು ಮನೆ, ಹಿತ್ತಲು ಹಾಗೆ ಮೇಲು ಮಹಡಿಯೂ ಕಾಣಸಿಗುತ್ತವೆ. ಆದರೆ ಪೇಟೆಗಳಲ್ಲಿ ಜಾಗ ಅಭಾವದ ಕಾರಣ ಒಂದು ಹಾಲ್‌, ಕಿಚನ್‌ , ಬಾತ್‌ ರೂಮ್‌ಗೆ ಮನೆ ಮುಕ್ತಾಯವಾಗಿರುತ್ತದೆ. ಮನೆಯು ನಮಗೆ ಪ್ರತಿದಿನವೂ ಹೊಸತನದ ಅನುಭವ ನೀಡುತ್ತದೆ. ಬಹಳಷ್ಟು ಜನ, ಯಾವುದೋ ಕಾರಣಗಳಿಂದ ವಿದ್ಯಾಭ್ಯಾಸ, ಉದ್ಯೋಗ ಅಥವಾ ಬೇರೆ ಕೆಲಸಕ್ಕಾಗಿಯೂ ಮನೆ ಬಿಟ್ಟು ಹೊರಗಡೆ ಸಿಟಿಯಲ್ಲಿ ಬಾಡಿಗೆ ಮನೆ ಪಡೆದು ಅಥವಾ ಪಿಜಿಯಲ್ಲಿ ವಾಸಿಸಿರುತ್ತಾರೆ.

ಹುಟ್ಟಿ ಬೆಳೆದ ಮನೆಗೂ ಸಿಟಿ ಮನೆಗೂ ಏನೂ ವ್ಯತ್ಯಾಸವಿಲ್ಲ. ಎರಡೂ ಸಹ ಇಟ್ಟಿಗೆ, ಸಿಮೆಂಟ್‌, ಮರಳನಿಂದಲೇ ನಿರ್ಮಿಸಲಾಗಿದೆ. ಬಹುಶಃ ಹಳ್ಳಿಯದು ಹಳೆಯ ಕಾಲದ ಮನೆ ಎಂದಷ್ಟೇ ಭಾವಿಸಿದರೆ ತಪ್ಪಾಗುತ್ತದೆ. ನಾವು ಹುಟ್ಟಿ ಬೆಳೆದ ಮನೆಯಲ್ಲಿ ನಮ್ಮ ನೆನಪುಗಳೇ ಕೂಡಿವೆ. ಪ್ರತಿ ಜಾಗದಲ್ಲೂ ನಮ್ಮ ನೆರಳಿದೆ. ಹೆತ್ತ ತಾಯಿಯ ಪ್ರೀತಿಯಿದೆ, ಅಪ್ಪನ ಮಮಕಾರವಿದೆ, ಅಜ್ಜನ ಬುದ್ಧಿ ಮಾತಿದೆ, ಅಜ್ಜಿಯ ಆಶೀರ್ವಾದವಿದೆ, ಅಕ್ಕನ ಅಕ್ಕರೆಯಿದೆ, ಅಣ್ಣನ ಮುದ್ದಾಟವಿದೆ, ತಮ್ಮ-ತಂಗಿಯರ ಹೊಡೆದಾಟವಿದೆ.

ಹೀಗೆ ಮನೆಯೂ ತುಂಬಿ ಮನವೂ ತುಂಬಿದ್ದ ನೆನಪಿನ ಬುತ್ತಿಯಿದೆ. ಅಂಗಳದಲ್ಲಿ ಚಿಣ್ಣಿದಾಂಡು ಗೋಲಿಯ ಗುರುತಿದೆ. ಹಿತ್ತಲಿನಲ್ಲಿ ಪೇರಳೆ, ಹಲಸು, ಮಾವಿನ ಸಿಹಿಯಿದೆ, ಮುಂದುಗಡೆ ದಾಸವಾಳ ಮಲ್ಲಿಗೆ ಹೂವಿನ ಗಂಧವಿದೆ, ಮನೆಯ ಜಗಲಿಯಲ್ಲಿ ಪಗಡೆ ಚೆನ್ನೆಮಣೆಗಳ ಆಟವಿದೆ, ಕೊಟ್ಟಿಗೆಯಲ್ಲಿ ಗೌರಿ, ಗಂಗೆಯರ(ಹಸುಗಳ) ಕರುಗಳಿವೆ.  ಅಡುಗೆ ಮನೆಯಲ್ಲಿ ಅಮ್ಮನ ಕೈ ರುಚಿ ಯಿದೆ, ಮೆತ್ತಿಯ ಜಾಡಿಯಲ್ಲಿ ಮಾವಿನ ಉಪ್ಪಿನಕಾಯಿ ಇದೆ, ತೋಟದಲ್ಲಿ ಅಜ್ಜ- ಅಪ್ಪಂದಿರ ಬೆವರಿದೆ. ಹೀಗೆ ಮನೆಯನ್ನು ಹತ್ತು ಹಲವು ರೀತಿಯಲ್ಲಿ ವರ್ಣಿಸಿದರೂ ಸಾಲದು. ಇದೊಂದು ಸುಖ-ದುಃಖ ನೋವು

ನಲಿವುಗಳ ಸಮ್ಮಿಶ್ರವಾದ ಒಂದು ಸಮೂಹವಿರುವ ಜಾಗವಾಗಿದೆ. ನಾನು ಸಹ ವಿದ್ಯಾ ಭ್ಯಾಸಕ್ಕಾಗಿ ಮನೆಯಿಂದ ಹೊರಗಡೆ ಇರುವೆ ಹಾಗಾಗಿ ಮನೆಗೆ
ಹೋದಾಗ ಆಗುವ ಸಂತೋಷಕ್ಕೆ ಸರಿ ಸಾಟಿ ಇಲ್ಲವೆನಿಸುತ್ತದೆ.


ವಿಜೇತ್‌ ಮಳಲಗದ್ದೆ ಶಿವಮೊಗ್ಗ

ಟಾಪ್ ನ್ಯೂಸ್

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.