ಟೂ ಮಾಸ್ಟರ್ಸ್,ಟ್ರೂ ಮಾಸ್ಟರ್ಸ್:ಇಕೊಸೊಫಿಕಲ್ ಎಸ್ಥಟಿಕ್ಸ್ ಮತ್ತು ಪೀಸ್ ಸ್ಟಡೀಸ್ ಆರಂಭ:ಮಾಹೆ

ನವೀನ ಸ್ನಾತಕೋತ್ತರ ಪದವಿ - ಎಂ.ಎ ಇನ್ ಆರ್ಟ್ ಅಂಡ್ ಪೀಸ್ ಸ್ಟಡೀಸ್ ಅನ್ನು ಈ ಶೈಕ್ಷಣಿಕ ವರ್ಷದಿಂದ ಪ್ರಾರಂಭ

Team Udayavani, Jun 27, 2020, 11:20 AM IST

ಮಾಹೆ ಟೂ ಮಾಸ್ಟರ್ಸ್, ಟ್ರೂ ಮಾಸ್ಟರ್ಸ್:ಇಕೊಸೊಫಿಕಲ್ ಎಸ್ಥಟಿಕ್ಸ್ ಮತ್ತು ಪೀಸ್ ಸ್ಟಡೀಸ್ ಆರಂಭ

ಮಣಿಪಾಲ್: ಅನೇಕ ಹೊಸ ಕಲಿಕಾ ವಿಷಯಗಳ ಜೊತೆಗೆ ಹೊಸಕಾಲದ ಎರಡು ಸಮಕಾಲೀನ ಸ್ನಾತಕೋತ್ತರ ಕಾರ್ಯಕ್ರಮಗಳನ್ನು ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, MAHE ಪ್ರಾರಂಭಿಸುತ್ತಿದೆ. ಕಳೆದ ವರ್ಷ ಪ್ರಾರಂಭವಾದ ಇಕೊಸೊಫಿಕಲ್ ಎಸ್ಥಟಿಕ್ಸ್ ಎಂ.ಎ ಜೊತೆಗೆ, ಮತ್ತೊಂದು ನವೀನ ಸ್ನಾತಕೋತ್ತರ ಪದವಿ – ಎಂ.ಎ ಇನ್ ಆರ್ಟ್ ಅಂಡ್ ಪೀಸ್ ಸ್ಟಡೀಸ್ ಅನ್ನು ಈ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಗುತ್ತಿದೆ.

ಎರಡೂ ಪದವಿಗಳಲ್ಲಿಯೂ ಕಲೆ ಮತ್ತು ತತ್ವಶಾಸ್ತ್ರವು ಸಾಮಾನ್ಯ ಎಳೆಯಾಗಿದ್ದರೂ ಇಕೊಸೊಫಿಕಲ್ ಎಸ್ಥಟಿಕ್ಸ್ ಪ್ರಾಥಮಿಕವಾಗಿ ಸಮಕಾಲೀನ ಪರಿಸರದ ಬಿಕ್ಕಟ್ಟುಗಳು ಮತ್ತು ಕಲಾ ಪ್ರಕಾರಗಳ ತಾತ್ವಿಕ ರಸಗ್ರಹಣದ ಕುರಿತ ಅಧ್ಯಯನವಾಗಿದೆ. ವ್ಯವಹರಿಸುತ್ತದೆ, ಆರ್ಟ್ ಅಂಡ್ ಪೀಸ್ ಸ್ಟಡೀಸ್ ಸಾಮಾಜಿಕ ಮತ್ತು ಅಂತರರಾಷ್ಟ್ರೀಯ ಬಿಕ್ಕಟ್ಟುಗಳ ಕುರಿತು ಹಾಗೂ ಕಲೆಯನ್ನು ಶಾಂತಿಯ ಮಾಧ್ಯಮವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗೆಗಿನ ಕಲಿಕೆಯಾಗಿದೆ.

ಈ ಎರಡೂ ಪದವಿ ಕಾರ್ಯಕ್ರಮಗಳು ವಿಭಿನ್ನ ಸಮಕಾಲೀನ ಬಿಕ್ಕಟ್ಟುಗಳ ‘ಮೂಲ’ ಮತ್ತು ಅವುಗಳ ಒಳ, ಹೊರ ಮತ್ತು ಮುಂದಣ ದಾರಿಗಳನ್ನು ಅನ್ವೇಷಿಸುತ್ತವೆ. ಈ ಆಧಾರದ ಮೇಲೆ, ಎರಡೂ ಸ್ನಾತಕ್ಕೋತ್ತರ ಪದವಿಗಳು ವಿದ್ಯಾರ್ಥಿಗಳನ್ನು ಬರವಣಿಗೆ – ಪತ್ರಿಕೋದ್ಯಮ, ಮಾಧ್ಯಮ ಮತ್ತು ಸಂವಹನದ ಬದುಕಿಗೆ ಸಿದ್ಧಗೊಳಿಸುತ್ತದೆ.

ಇಕೊಸೊಫಿಕಲ್ ಎಸ್ಥಟಿಕ್ಸ್ ಹೊಸ ಪಠ್ಯಕ್ರಮದಲ್ಲಿ ಅನುವಾದ ಅಧ್ಯಯನ ಮತ್ತು ಯಕ್ಷಗಾನ ಅಧ್ಯಯನಗಳಂತಹ ಹೊಸ ವಿಷಯಗಳನ್ನು ಪರಿಚಯಿಸಲಾಗಿದೆಯಾದರೆ ಕೆಲವು ಸಾಮಾನ್ಯ ವಿಷಯಗಳ ಜೊತೆಗೆ, ಪೀಸ್ ಸ್ಟಡೀಸ್ ಸೊಸೈಟಿ ಮತ್ತು ಪಾಲಿಟಿ, ಅಭಿವೃದ್ಧಿ ಅಧ್ಯಯನ, ಜೆಂಡರ್ ಸ್ಟಡೀಸ್ ಮತ್ತು ಗಾಂಧಿ ಅಧ್ಯಯನಗಳಂತಹ ವಿಷಯಗಳನ್ನು ಒಳಗೊಂಡಿದೆ.

ಇಕೊಸೊಫಿಕಲ್ ಎಸ್ಥಟಿಕ್ಸ್ ಮಾನವಿಕ ಶಾಸ್ತ್ರದ ಮೇಲೆ ಹೆಚ್ಚು ಕೇಂದ್ರಿತವಾಗಿದೆ ಮತ್ತು ಪೀಸ್ ಸ್ಟಡೀಸ್ ಸಾಮಾಜಿಕ ಶಾಸ್ತ್ರದ ಮೇಲೆ ಹೆಚ್ಚು ಗಮನ ಹರಿಸುತ್ತವೆ. ಯಾವುದೇ ವಿಷಯದಲ್ಲಿ ಪದವಿ ಹೊಂದಿದವರೂ ಈ ಸ್ನಾತಕ್ಕೋತ್ತರ ಪದವಿಗೆ ಅರ್ಹರು.

ಪತ್ರಿಕೋದ್ಯಮ, ಮಾಧ್ಯಮ ಮತ್ತು ಸಂವಹನ, ಸಾಮಾಜಿಕ-ಸಾಂಸ್ಕೃತಿಕ, ರಾಜಕೀಯ ಮತ್ತು ಪರಿಸರ ವಲಯ, ಶೈಕ್ಷಣಿಕ ಮತ್ತು ಸಂಶೋಧನೆ, ನೀತಿ ಸಂಶೋಧನಾ ಸಂಸ್ಥೆಗಳು, ಅಂತರರಾಷ್ಟ್ರೀಯ ಸಂಬಂಧ ಸಂಸ್ಥೆಗಳು, ಪ್ರಕಾಶನ ಸೇರಿದಂತೆ ಹಲವು ವೃತ್ತಿಪರ ಸಾಧ್ಯತೆಗಳನ್ನು ಈ ಕ್ಷೇತ್ರ ಹೊಂದಿದೆ.

‘ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್’ (ಜಿ.ಸಿ.ಪಿ.ಎ.ಎಸ್) ಸಮಕಾಲೀನ ಬಿಕ್ಕಟ್ಟನ್ನು ನಿಭಾಯಿಸಬಲ್ಲ ಪರ್ಯಾಯ ಜ್ಞಾನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಅಂತರಶಿಕ್ಷಣ ಬೋಧನೆ ಮತ್ತು ಸಂಶೋಧನೆಯಲ್ಲಿ ತೊಡಗಿಕೊಂಡಿದೆ. ಕೇಂದ್ರವು ಸೌಂದರ್ಯಶಾಸ್ತ್ರ, ತತ್ತ್ವಶಾಸ್ತ್ರ, ಪರಿಸರ, ಪತ್ರಿಕೋದ್ಯಮ, ಜೆಂಡರ್ ಸ್ಟಡೀಸ್, ಗಾಂಧಿ ಮತ್ತು ಶಾಂತಿ ಅಧ್ಯಯನ, ಅಭಿವೃದ್ಧಿ ಅಧ್ಯಯನವನ್ನು ನಡೆಸುತ್ತಿದೆ.

ಇದು ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯವು ಶ್ರೇಷ್ಠ ಸಂಸ್ಥೆ ಎಂದು ಗುರುತಿಸಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (MAHE) ನ ವಿಭಾಗವಾಗಿದೆ.ಹೆಚ್ಚಿನ ವಿವರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.: https://manipal.edu/gandhian-centre.html

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.