ಮಳೆ ರಭಸಕ್ಕೆ ಹಳ್ಳದಲ್ಲಿ ಕೊಚ್ಚಿ ಹೋದ ರೈತ
Team Udayavani, Jun 29, 2020, 8:43 PM IST
ಧಾರವಾಡ: ಆಕಳು ಮೇಯಿಸಲು ಹೋಗಿದ್ದ ರೈತರೊಬ್ಬರು ಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ದುರ್ಘಟನೆ ಸಂಭವಿಸಿದೆ.
ಮಳೆಯ ಕಾರಣದಿಂದ ಹಳ್ಳದಲ್ಲಿ ಏಕಾಏಕಿ ಭಾರೀ ಪ್ರಮಾಣದ ನೀರು ಹರಿದುಬಂದು ಉಂಟಾದ ಪ್ರವಾಹದಲ್ಲಿ ಮಡಿವಾಳಪ್ಪ ಜಕ್ಕಣ್ಣನವರ (40) ಎಂಬ ಹೆಸರಿನ ರೈತ ಕೊಚ್ಚಿಹೋಗಿದ್ದಾರೆ.
ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಈ ದುರ್ಘಟನೆ ನಡೆಸಿದೆ. ಆಕಳು ಮೇಯಿಸಲು ಹೋಗಿದ್ದ ಮಡಿವಾಳಪ್ಪ ಅವರು ಸೋಮವಾರ ಸಂಜೆಯಾಗುತ್ತಲೇ ತಮ್ಮ ಆಕಳುಗಳ ಜೊತೆಯಲ್ಲಿ ಮನೆಯತ್ತ ಹೆಜ್ಜೆ ಹಾಕಿದ್ದಾರೆ.
ಈ ವೇಳೆ ಜೋರಾಗಿ ಮಳೆ ಸುರಿಯತೊಡಗಿದೆ ಈ ಸಂದರ್ಭದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಹಸುಗಳನ್ನು ಹಾರೋಬೆಳವಡಿಯಿಂದ ಆಯಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯೆ ಇರುವ ಸೇತುವೆ ಮೇಲೆ ಕಟ್ಟಿ ಹಾಕಿ ತಾವು ಸೇತುವೆಯ ಕೆಳಗಡೆ ಕುಳಿತಿದ್ದರು.
ಈ ಸಂದರ್ಭದಲ್ಲಿ ಸೇತುವೆಗೆ ಏಕಾಏಕಿ ತುಪ್ಪರಿ ಹಳ್ಳಕ್ಕೆ ಸೇರುವ ಭಂಡರಳ್ಳದಲ್ಲಿ ನೀರು ತುಂಬಿ ಬಂದಿದೆ. ಇದರಿಂದ ಗಾಬರಿಯಾದ ಮಡಿವಾಳಪ್ಪ ಸೇತುವೆ ಕೆಳಗಡೆ ಹೊಂದಿಕೊಂಡಿದ್ದ ಕಬ್ಬಿಣದ ಶೇಳೆ ಹಿಡಿದು ನಿಂತಿದ್ದಾರೆ. ಕ್ಷಣಾರ್ಧದಲ್ಲಿ ಅವರ ಕುತ್ತಿಗೆವರೆಗೂ ನೀರು ಹರಿದಿದ್ದು, ಆ ಬಳಿಕ ಹೆದರಿ ಕಬ್ಬಿಣದ ಶೇಳೆ ಕೈಬಿಟ್ಟ ಪರಿಣಾಮ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ.
ಸುದ್ದಿ ತಿಳಿದು ಶಾಸಕ ಅಮೃತ ದೇಸಾಯಿ ಭೇಟಿ ನೀಡಿದ್ದು, ಇದರ ಜೊತೆಗೆ ನವಲಗುಂದ ಹಾಗೂ ಧಾರವಾಡ ತಹಶೀಲ್ದಾರರು ಭೇಟಿ ನೀಡಿದ್ದಾರೆ. ಅಣ್ಣ ಹಾಗೂ ತಮ್ಮನಿಗೆ ಮದುವೆ ಆಗಿದ್ದು, ಆದರೆ ಮಡಿವಾಳಪ್ಪನಿಗೆ ಮದುವೆಯಾಗಿಲ್ಲ. ತಂದೆ-ತಾಯಿ ಇದ್ದು ಇವರದ್ದು ಬಡ ಕುಟುಂಬವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ
Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ