ಕೋವಿಡ್ ಯೋಧರಿಗೆ ಸನ್ಮಾನ
Team Udayavani, Jul 2, 2020, 2:55 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಯಾದಗಿರಿ: ಮಹಾಮಾರಿ ಕೋವಿಡ್ ಹರಡುವಿಕೆ ತಡೆಗಟ್ಟುವಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯರ ಸೇವೆ ಪರಿಗಣಿಸಿ ಮೌನೇಶ್ವರ ದೇವಸ್ಥಾನ ಸಮಿತಿಯ ವತಿಯಿಂದ ಬುಧವಾರ ವೈದ್ಯರ ದಿನಾಚರಣೆ ಅಂಗವಾಗಿ ಸಮಸ್ತ ವೈದ್ಯರ ಪರವಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್. ಪಾಟೀಲ ಮತ್ತು ಡಾ| ಭಗವಂತ ಅವರನ್ನು ಸನ್ಮಾನಿಸಲಾಯಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ರಾಜು ಹೆಂದೆ, ಉಭಯ ಕೋವಿಡ್ ಸೇನಾನಿ ವೈ„ದ್ಯರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ದೇವಸ್ಥಾನ ಸಮಿತಿ ಸದಸ್ಯರುಗಳಾದ ಅಯ್ಯಣ್ಣ ಹುಂಡೇಕಾರ್, ಚನ್ನಪ್ಪಗೌಡ ಮೋಸಂಬಿ, ಬಸವಂತ್ರಾಯ ಮಾಲಿಪಾಟೀಲ, ತಿಪ್ಪಣ್ಣ ಹೂಗಾರ, ದೇವರಾಜ ವರ್ಕನಳ್ಳಿ, ಸದಸ್ಯರು ವೈದ್ಯರಿಗೆ ಅಭಿನಂದಿಸಿದರು.