ಬೀದರ್ ನಲ್ಲಿ ಮತ್ತೆ 29 ಮಂದಿಗೆ ಕೋವಿಡ್ ಪಾಸಿಟಿವ್ ಪತ್ತೆ
ಬುಧವಾರ ತಗ್ಗಿದ ಸಾವಿನ ಸರಣಿ; 879ಕ್ಕೇರಿದ ಸೋಂಕಿತರ ಸಂಖ್ಯೆ
Team Udayavani, Jul 8, 2020, 8:55 PM IST
ಬೀದರ್: ಜಿಲ್ಲೆಯಲ್ಲಿ ಸತತ ನಾಲ್ಕು ದಿನ ಮರಣ ಮೃದಂಗ ಬಾರಿಸಿರುವ ಹೆಮ್ಮಾರಿ ಕೋವಿಡ್ ಸೋಂಕು ಬುಧವಾರ ಸ್ವಲ್ಪ ತಗ್ಗಿದ್ದು, 29 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 879ಕ್ಕೆ ಏರಿಕೆಯಾಗಿದೆ.
ಕಳೆದ ಶನಿವಾರದಿಂದ ನಿರಂತರ ನಾಲ್ಕು ದಿನ ಜಿಲ್ಲೆಯಲ್ಲಿ ಕೋವಿಡ್ ಅಟ್ಟಹಾಸದಿಂದ 28 ಮೃತಪಟ್ಟಿದ್ದರು. ಬುಧವಾರ ಸಾವಿನ ಕೇಕೆಗೆ ಬಿಡುವು ನೀಡಿದ್ದರೂ ಆತಂಕ ಮಾತ್ರ ಕಡಿಮೆ ಆಗಿಲ್ಲ. ಕೋವಿಡ್ ಆಸ್ಪತ್ರೆ ಐಸಿಯು ವಾರ್ಡ್ನಲ್ಲಿ ಎರಡೂ¾ರು ಸೋಂಕಿತರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೀದರ್ ನಗರ ಸೇರಿ ತಾಲೂಕಿನಲ್ಲಿ 12 ಕೇಸ್, ಭಾಲ್ಕಿ 11, ಹುಮನಾಬಾದ 5 ಮತ್ತು ಔರಾದ ತಾಲೂಕಿನಲ್ಲಿ 1 ಸೋಂಕಿತ ಸೇರಿ 29 ಪ್ರಕರಣಗಳು ವರದಿಯಾಗಿವೆ.
ಬೀದರ್ ತಾಲೂಕಿನಲ್ಲಿ 7 ವರ್ಷದ ಹೆಣ್ಣು ಪಿ ಬಿಡಿಆರ್858, 8 ವರ್ಷದ ಹೆಣ್ಣು ಪಿ ಬಿಡಿಆರ್860, 36 ವರ್ಷದ ಹೆಣ್ಣು ಪಿ ಬಿಡಿಆರ್861, 24 ವರ್ಷ ಹೆಣ್ಣು ಪಿ ಬಿಡಿಆರ್867, 22 ವರ್ಷದ ಗಂಡು ಪಿ ಬಿಡಿಆರ್870, 28 ವರ್ಷದ ಗಂಡು ಪಿ ಬಿಡಿಆರ್871, 70 ವರ್ಷದ ಗಂಡು ಪಿ ಬಿಡಿಆರ್872, 28 ವರ್ಷದ ಗಂಡು ಪಿ ಬಿಡಿಆರ್873, 29 ವರ್ಷದ ಗಂಡು ಪಿ ಬಿಡಿಆರ್874, ಪಿ 45 ವರ್ಷದ ಗಂಡು ಪಿ 875, 28 ವರ್ಷದ ಹೆಣ್ಣು ಪಿ ಬಿಡಿಆರ್878, 19 ವರ್ಷದ ಗಂಡು ಪಿ ಬಿಡಿಆರ್879. ಭಾಲ್ಕಿ ತಾಲೂಕಿನಲ್ಲಿ 39 ವರ್ಷದ ಹೆಣ್ಣು ಪಿ ಬಿಡಿಆರ್852, 35 ವರ್ಷದ ಹೆಣ್ಣು ಪಿ ಬಿಡಿಆರ್853, 45 ವರ್ಷದ ಗಂಡು ಪಿ ಬಿಡಿಆರ್856, 10 ವರ್ಷದ ಗಂಡು ಪಿ ಬಿಡಿಆರ್862, 48 ವರ್ಷದ ಹೆಣ್ಣು ಪಿ ಬಿಡಿಆರ್863, 46 ವರ್ಷದ ಗಂಡು ಪಿ ಬಿಡಿಆರ್864, 22 ವರ್ಷದ ಗಂಡು ಪಿ ಬಿಡಿಆರ್865, 47 ವರ್ಷದ ಗಂಡು ಪಿ ಬಿಡಿಆರ್866, 21 ವರ್ಷದ ಹೆಣ್ಣು ಪಿ ಬಿಡಿಆರ್868, 75 ವರ್ಷದ ಹೆಣ್ಣು ಪಿ ಬಿಡಿಆರ್869, 4 ವರ್ಷದ ಗಂಡು ಪಿ ಬಿಡಿಆರ್876. ಹುಮನಾಬಾದ ತಾಲೂಕಿನಲ್ಲಿ 46 ವರ್ಷದ ಹೆಣ್ಣು ಪಿ ಬಿಡಿಆರ್851, 35 ವರ್ಷದ ಗಂಡು ಪಿ ಬಿಡಿಆರ್854, 45 ವರ್ಷದ ಗಂಡು ಹೆಣ್ಣು ಪಿ ಬಿಡಿಆರ್855, 68 ವರ್ಷದ ಹೆಣ್ಣು ಪಿ ಬಿಡಿಆರ್857, 51 ವರ್ಷದ ಹೆಣ್ಣು ಪಿ ಬಿಡಿಆರ್877 ಮತ್ತು ಔರಾದ ತಾಲೂಕಿನಲ್ಲಿ 45 ವರ್ಷದ ಹೆಣ್ಣು ಪಿ 859 ರೋಗಿಗಳಿಗೆ ಸೋಂಕು ಕಾಣಿಸಿಕೊಂಡಿದೆ..
ಜಿಲ್ಲೆಯಲ್ಲಿ ಈವರೆಗೆ 879 ಸೋಂಕಿತರ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 562 ಜನ ಡಿಸ್ಚಾರ್ಜ್ ಆಗಿದ್ದರೆ, 268 ಸಕ್ರಿಯ ಪ್ರಕರಣಗಳಿವೆ. 3171 ಜನರ ಗಂಟಲು ದ್ರವ ಪರೀಕ್ಷಾ ವರದಿ ಬರುವುದು ಬಾಕಿ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
MUST WATCH
ಹೊಸ ಸೇರ್ಪಡೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು
ಈ ಪೆನ್ಡ್ರೈವ್ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್