ಕುಡುಕರು, ಅಲೆಮಾರಿಗಳಿಂದಲೇ ಪರಿಸರ ಸ್ವಚ್ಛಗೊಳಿಸಿದ ಪೊಲೀಸರು !
Team Udayavani, Jul 10, 2020, 5:10 AM IST
ಕೂಳೂರು: ಸ್ವಚ್ಛ- ಸುಂದರವಾಗಿದ್ದ ಕೂಳೂರಿನ ಮೇಲ್ಸೇ ತುವೆಯ ಕೆಳಭಾಗವನ್ನು ಅಲೆಮಾರಿಗಳು ಹಾಗೂ ಕುಡುಕರು ಆಶ್ರಯತಾಣವಾಗಿಸಿ ಗಬ್ಬೆದ್ದು ನಾರುವಂತೆ ಮಾಡಿದ್ದು, ಕಾವೂರು ಪೊಲೀಸರು ಅವರಿಂದಲೇ ಸ್ವಚ್ಛಗೊಳಿಸಿದ್ದಾರೆ.
ಕೆಲವರು ಇಲ್ಲಿ ನಿತ್ಯವೂ ಮದ್ಯಪಾನ ಮಾಡಿ ಪ್ಲಾಸ್ಟಿಕ್ ತ್ಯಾಜ್ಯ, ಕಸಕಡ್ಡಿಗಳನ್ನು ಎಸೆದು ಪರಿಸರವನ್ನು ಗಬ್ಬೆದ್ದು ನಾರು ವಂತೆ ಮಾಡುತ್ತಿದ್ದರು.
ಕಾವೂರು ಪೊಲೀಸ್ ಠಾಣೆಯ ಶಿವಪ್ಪ ಗೌಡ ಎಸ್. ಅವರು ಸಹ ಸಿಬಂದಿಯೊಂದಿಗೆ ದಾಳಿ ನಡೆಸಿದ್ದು, ಈ ಸಂದರ್ಭ ಕೂಳೂರಿನ ಮೇಲ್ಸೇತುವೆ ಕೆಳಭಾಗದಲ್ಲಿ ಮದ್ಯ ಸೇವನೆಯಲ್ಲಿ ನಿರತರಾಗಿದ್ದವರನ್ನು, ಅಲೆಮಾರಿಗಳನ್ನು ತೆರವುಗೊಳಿಸಿ, ಕುಡುಕರಿಂದಲೇ ಅಲ್ಲಿನ ಪರಿಸರವನ್ನು ಸ್ವಚ್ಛಗೊಳಿಸಿ ಎಚ್ಚರಿಕೆಯನ್ನು ನೀಡಿದರು. ಇದೇ ಸಂದರ್ಭ ಅಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಪರಿಸರವನ್ನು ಸ್ವತ್ಛತೆಯ ಮಹತ್ವದ ಕುರಿತು ಮಾಹಿತಿ ನೀಡಿ ವಿವರಿಸಿದರು. ಶಿವಪ್ಪ ಗೌಡ ನೇತೃತ್ವದ ತಂಡದ ಕಾರ್ಯವು ಕೂಳೂರಿನ ಜನರ ಮೆಚ್ಚುಗೆಗೆ ಪ್ರಶಂಸೆಗೆ ಪಾತ್ರವಾಗಿದೆ.
ಈ ಸಂದರ್ಭ ಕಾರ್ಯಾಚರಣೆ ಯಲ್ಲಿ ಪೊಲೀಸರೊಂದಿಗೆ ಸ್ಥಳೀಯ ಪ್ರಮುಖರಾದ ರಮೇಶ್ ಶೆಟ್ಟಿ ವಿವೇಕ ನಗರ, ಸುರೇಶ್ ಕುಲಾಲ್, ರಾಜೇಶ್ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ