ಅಗಲಿದ ತಹಶೀಲ್ದಾರ್ ಚಂದ್ರಮೌಳೇಶ್ವರ್ಗೆ ಶ್ರದ್ಧಾಂಜಲಿ
Team Udayavani, Jul 11, 2020, 6:56 AM IST
ಬಂಗಾರಪೇಟೆ: ಪಟ್ಟಣದ ತಾಪಂ ಕಚೇರಿ ಮುಂದೆ ತಾಲೂಕಿನ 21 ಗ್ರಾಪಂ ಪಿಡಿಒ ಹಾಗೂ ಸಿಬ್ಬಂದಿ ಅಗಲಿದ ತಹಶೀಲ್ದಾರ್ ಚಂದ್ರಮೌಳೇಶ್ವರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡಿದ್ದ ತಾಪಂ ಇಒ ಎನ್.ವೆಂಕಟೇಶಪ್ಪ, ಮೃತ ಚಂದ್ರಮೌಳೇಶ್ವರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿಗೆ ರಾಜಕೀಯ ವ್ಯಕ್ತಿಗಳು, ಇತರೆ ಮೂಲಗಳಿಂದ ಒತ್ತಡ ಬರುವುದು ಸಹಜ. ಇವೆಲ್ಲದರ ನಡುವೆ ಚಂದ್ರಮೌಳೇಶ್ವರ್ ಅವರು, ತಾಲೂಕಿನಲ್ಲಿ ಉತ್ತಮ ಕೆಲಸ ಮಾಡಿ, ಎಲ್ಲರ ಜೊತೆಯಲ್ಲಿ ಸಹಬಾಳ್ವೆಯಿಂದ ಕೆಲಸ ಮಾಡುತ್ತಿದ್ದರು. ಅವರನ್ನು ಕೊಲೆ ಮಾಡಿರುವುದು ನಿಜಕ್ಕೂ ತಲೆತಗ್ಗಿಸುವಂತಹ ಕೆಲಸ ಎಂದು ಹೇಳಿದರು.
ತಾಲೂಕಿನಲ್ಲಿ ದೊಡ್ಡ ಹುದ್ದೆಯಲ್ಲಿದ್ದರೂ ಸಾಮಾನ್ಯ ವ್ಯಕ್ತಿಯಂತೆ ಕೊರೊನಾ ನಿಯಂತ್ರಣಕ್ಕೆ 4 ತಿಂಗಳಿನಿಂದ ಹಗಲಿರುಳು ಶ್ರಮಿಸಿದ್ದರು. ಸರ್ಕಾರ ನೀಡುವ ಆದೇಶ ಗಳನ್ನು ಪಾಲಿಸಲು ಶ್ರಮಿಸಿದ್ದರು. ಅವರು ಪ್ರಾಮಾಣಿಕ ಸೇವಿಯಿಂದ ತಾಲೂಕು ಅಧಿಕಾರ ವರ್ಗದಲ್ಲಿ ಶಾಶ್ವತವಾಗಿ ಉಳಿದ್ದಾರೆ ಎಂದು ಸಂತಾಪ ಸೂಚಿಸಿದರು.
ತಾಪಂ ಸಹಾಯಕ ನಿರ್ದೇಶಕ ಬಿ.ಎಂ. ಮಂಜುನಾಥ್, ಪಿಡಿಒಗಳಾದ ಸೂಲಿಕುಂಟೆ ವಿ. ಶಂಕರ್, ಕಾರಹಳ್ಳಿ ಕೆ.ಆರ್.ಸುರೇಶಬಾಬು, ಚಿಕ್ಕಅಂಕಂ ಡಹಳ್ಳಿ ವಿ.ಚಿತ್ರಾ, ಕೇತಗಾನಹಳ್ಳಿ ಜಿ.ಸರಸ್ವತಿ, ಕಾಮಸಮುದ್ರ ಸಿ.ಎಂ.ವಾಣಿ, ಹುಲಿಬೆಲೆ ಶ್ರೀನಿವಾ ಸರೆಡ್ಡಿ, ಮಾವಹಳ್ಳಿ ರಾಮಮೂರ್ತಿ, ಬಲಮಂದೆ ಮಧುಚಂದ್ರ, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್