ಕುಂದಾಪುರ: 8 ಮಂದಿಗೆ ಪಾಸಿಟಿವ್
Team Udayavani, Jul 24, 2020, 8:14 AM IST
ಸಾಂದರ್ಭಿಕ ಚಿತ್ರ
ಕುಂದಾಪುರ: ವಂಡ್ಸೆ ಗ್ರಾಮದ ಒಂದೇ ಮನೆಯ ಮೂವರ ಸಹಿತ ಆಜ್ರಿ, ಕುಂದಾಪುರ ಪುರಸಭೆ ವ್ಯಾಪ್ತಿಯ ತಲಾ ಇಬ್ಬರು, ಗಂಗೊಳ್ಳಿಯ ಒಬ್ಬರಿಗೆ ಕೋವಿಡ್ ಸೋಂಕು ತಗಲಿದ್ದು, ಕುಂದಾಪುರ ತಾಲೂಕಿನಲ್ಲಿ ಗುರುವಾರ ಒಟ್ಟು 8 ಮಂದಿಗೆ ಪಾಸಿಟಿವ್ ದೃಢವಾಗಿದೆ.
ಕೋಟೇಶ್ವರ: ವೈದ್ಯ, ದಾದಿಗೆ ಪಾಸಿಟಿವ್
ಕೋಟೇಶ್ವರ: ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ದಾದಿಗೆ ಕೊರೊನಾ ತಗಲಿದೆ. ಆರೋಗ್ಯ ಕೇಂದ್ರವನ್ನು 2 ದಿನಗಳ ಕಾಲ ಸೀಲ್ಡೌನ್ ಮಾಡಲಾ ಗಿದೆ. ಬೀಜಾಡಿಯಲ್ಲಿ 2 ಪ್ರತ್ಯೇಕ ಪ್ರಕರಣಗಳು ಪತ್ತೆಯಾಗಿವೆ.
ತಾಯಿ, ಮಗಳಿಗೆ ಸೋಂಕು
ಬಸ್ರೂರು: ಬಸ್ರೂರು ಗ್ರಾ.ಪಂ. ವ್ಯಾಪ್ತಿಯ ಮಾರ್ಗೋಳಿಯ ತಾಯಿ, ಮಗಳನ್ನು ಕೋವಿಡ್ ಬಾಧಿಸಿದೆ. ಗ್ರಾ.ಪಂ. ಪ್ರವೇಶ ನಿರ್ಬಂಧ ಸಿದ್ದಾಪುರ ಗ್ರಾ.ಪಂ.ನ ಆಡಳಿತ ಅಧಿಕಾರಿಯೊಬ್ಬ ರಿಗೆ ಗುರುವಾರ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆ ಯಲ್ಲಿ ಜು. 27ರ ತನಕ ಗ್ರಾ.ಪಂ.ಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಶಂಕರನಾರಾಯಣ: 7 ಮಂದಿಗೆ ಪಾಸಿಟಿವ್
ಸಿದ್ದಾಪುರ: ಹಾಲಾಡಿಯ ಮೀನು ಮಾರುವ ಮಹಿಳೆ 13 ದಿನಗಳ ಹಿಂದೆ ಕೋವಿಡ್ ಬಾಧಿಸಿ ಗುಣಮುಖರಾಗಿದ್ದು, ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮನೆಯ 6 ಮಂದಿಗೆ ಬುಧವಾರ ಪಾಸಿಟಿವ್ ದೃಢಪಟ್ಟಿದೆ. 13 ದಿನಗಳ ಹಿಂದೆ ಬೆಂಗಳೂರಿನಿಂದ ಬಂದ ಮೂವರು ಯುವಕರು ಶಂಕರನಾರಾಯಣ ಗ್ರಾಮದ ಅಬ್ಯಾಡಿಗೆ ಬಂದು ಮನೆಯಲ್ಲಿ ಕ್ವಾರಂಟೈನ್ ಇದ್ದು, ಅವರಲ್ಲಿ ಓರ್ವನಿಗೆ ಬುಧವಾರ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್ ಕರೆ
Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ
Malpe ಬೀಚ್: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ
MUST WATCH
ಹೊಸ ಸೇರ್ಪಡೆ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ
ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ
ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್