ಹೊಳೆ ಗಂಗವ್ವನಿಗೆ ಪೂಜೆ
Team Udayavani, Jul 26, 2020, 9:19 AM IST
ರಾಣೆಬೆನ್ನೂರು: ಬಹು ಸಂಸ್ಕೃತಿ ರಾಷ್ಟ್ರವಾದ ಭಾರತದಲ್ಲಿ ಹಬ್ಬಗಳು ಸಾಲು ಸಾಲಾಗೇ ಬರುತ್ತವೆ. ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವಿಶೇಷತೆ ಇದೆ. ನಾಗರ ಪಂಚಮಿ ಹಬ್ಬ ಅಣ್ಣ-ತಂಗಿಯರ ಹಬ್ಬ. ತಂಗಿ ತವರು ಮನೆಗೆ ಬಂದು ಅಣ್ಣನನ್ನು ಹರಸುವ ಹಬ್ಬ. ಯಾವ ಹಬ್ಬಕ್ಕೂ ಕರೆಸದಿದ್ದರೂ ನಾಗರ ಪಂಚಮಿಗೆ ತವರು ಮನೆಗೆ ಕರೆಸಿ ಕೈಲಾದ ಉಡುಗೊರೆ ನೀಡುತ್ತಾರೆ.
ಆದರೆ ಕೋವಿಡ್ ಭಯದಿಂದ ಈ ಬಾರಿಯ ಪಂಚಮಿಯನ್ನು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಆಚರಿಸಿಕೊಂಡಿದ್ದು ಕಂಡುಬಂದಿತು. ನಾಗರ ಪಂಚಮಿ ಹಬ್ಬ ಬಂತೆಂದರೆ ಸಾಕು ಮಹಿಳೆಯರಿಗೆ ಎಲ್ಲಿಲ್ಲದ ಸಡಗರ-ಸಂಭ್ರಮ. ಆದರೆ ಶನಿವಾರ ಪಂಚಮಿ ಹಬ್ಬದಲ್ಲಿ ಈ ಸಂಭ್ರಮ ಕಾಣಲಿಲ್ಲ.
ಹೊಳೆ ಪೂಜೆ: ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಪಂಚಮಿ ಹಬ್ಬದ ಮೂರನೆಯ ದಿನವಾದ ಶನಿವಾರ ಹೊಳೆ ಗಂಗವ್ವನ ಪೂಜೆ ಸಲ್ಲಿಸಲಾಯಿತು. ಇನ್ನು ಕೆಲವು ಗ್ರಾಮಗಳಲ್ಲಿ ಬೋರ್ವೆಲ್ ಗಳಿಗೆ ಹಸಿರು ಸೀರೆ ಉಡಿಸಿ, ಹಂಗನೂಲು ಹಾಕಿ, ಹೋಳಿಗೆ ಎಡೆ ಹಿಡಿದು ವಿಶೇಷ ಪೂಜೆ ಸಲ್ಲಿಸಿದರು. ದೇವರಿಗೆ ಏರಿಸಿದ ಸೀರೆಯನ್ನು ತವರು ಮನೆಗೆ ಬಂದ ಮಗಳು ಉಟ್ಟುಕೊಂಡು, ಉಡಕ್ಕಿ ಹಾಕಿಸಿಕೊಂಡು ತವರು ಮನೆಗೆ ಹರಿಸಿ ಗಂಡನ ಮನೆಗೆ ಹೋಗುವ ವಾಡಿಕೆ ಇದೆ. ಅದು ಈ ಹಬ್ಬದಲ್ಲಿ ನಡೆಯದೆ ಸೊಸೆಯಂದಿರೇ ಹೊಳೆ, ಬೋರ್ವೆಲ್, ನಳಗಳ ನೀರಿನಲ್ಲಿ ಪೂಜೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
ಹಾವೇರಿ: ಕಾಂಗ್ರೆಸ್ ಗ್ಯಾರಂಟಿಗೆ ಬೆಲೆ ಇಲ್ಲ- ಬಸವರಾಜ ಬೊಮ್ಮಾಯಿ
ರಾಣಿಬೆನ್ನೂರ: ಸನ್ಮಾರ್ಗ ತೋರುತ್ತಿವೆ ಮಠ-ಮಾನ್ಯಗಳು: ಹರಳಯ್ಯ ಶ್ರೀ
MUST WATCH
ಹೊಸ ಸೇರ್ಪಡೆ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ