ಯುವ ಕವಿಗಳ ಕಾವ್ಯ ಮಲ್ಲಿಗೆ


Team Udayavani, Jul 27, 2020, 10:00 AM IST

Poems

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕವಿತೆಗಳು ಎಂಬುದು ಆ ಕ್ಷಣದ ಇತಿಹಾಸ. ಕಡೆಯ ವಾಕ್ಯದಲ್ಲಿ ಪೂರ್ಣವಿರಾಮ ಹಾಕಿದ ಬಳಿಕ ಅದು ಹಳೆದಯದು ಎಂಬ ಹಣೆಪಟ್ಟಿಯೊಂದಿಗೆ ಗುರುತಿಸಿಕೊಳ್ಳುತ್ತದೆ.

ತಮ್ಮ ಮನದಲ್ಲಿ ಆ ಕ್ಷಣ ಹೊಳೆಯುವ ಭಾವನೆಗಳಿಗೆ ಅಕ್ಷರ ರೂಪ ನೀಡುವುದು ಕವಿಗಳ ಗುಣ. ಇದು ಒಂದು ರೀತಿಯಲ್ಲಿ ಯೋಚಿಸುವುದಾರೆ ಇದು ಅವರ ಮನಸ್ಸಿನ ಕನ್ನಡಿ.

ಯುವಿ ಫ್ಯೂಷನ್‌ ಯುವ ಜನರಿಗಾಗಿ ಮೀಸಲಾಗಿರುವ ಸಂಚಿಕೆಯಾಗಿದೆ. ಈ ಬಾರಿ ಆಯ್ದ ಕವನಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

 

ಒಲವು
ಒಲವ ಮರೆತ ದನಿಯಲ್ಲಿ
ಹೇಳಲಾಗದ ಸತ್ಯವಿದೆ
ಬತ್ತಿಹೋದ ಕಂಗಳಲಿ
ಬಣ್ಣಿಸಲಾಗದ ಕನಸಿದೆ
ಮಮತೆ ಎಂಬ ಉಸಿರಿನಲ್ಲೂ
ತಾಯಿ ಎಂಬ ಹೆಸರಿದೆ
ಮಲಗಲೊಂದು ಮಡಿಲು ಎಂಬ
ಊಹಿಸಲಾಗದ ಸ್ವರ್ಗವಿದೆ
ಕಪ್ಪು ವರ್ಣದ ಕೋಗಿಲೆಯಲ್ಲಿ
ಸುಂದರವಾದ ಕಂಠವಿದೆ
ಒಣಗಿ ನಿಂತ ಮರದೆದೆಯಲ್ಲಿ
ನೀರಿಗಾಗಿ ತವಕವಿದೆ
ಅರಳಿರುವ ಹೂವು ಉದುರಿ
ಬಿಸಿಲಿನ ಬೇಗೆಗೆ ಬಾಡಿದೆ
ದೇವರ ಮುಡಿಗೆ ಸೇರುವೆ ಎಂಬ
ನಂಬಿಕೆಯೊಂದು ಕಳಚಿದೆ
ಮೌನ ಮುರಿದ ಮನಸ್ಸೇ
ಮಾತಿಗೆಂದು ಕಾದಿದೆ
ಹೃದಯದೊಳಗಿನ ಮಾತುಗಳೆಲ್ಲಾ
ಮೌನವನ್ನೇ ತಾಳಿವೆ.

 ರವಿ ಶಿವರಾಯಗೊಳ,ಯುವ ಕೃಷಿಕ, ಸಾಂಗ್ಲಿ, ಮಹಾರಾಷ್ಟ್ರ

 

ಮುಳುಗದ ನಕ್ಷತ್ರ
ಮೂಡಣದಿ ಬೆಳಗುವನು
ಪಡುವಣದಿ ಮುಳುಗುವನು
ದಿನವೂ ಬಿಡದೆ ಬರುವನು
ಜಗಕೆ ಬೆಳಕ ತರುವನು |

ಬೆಳ್ಳಿ ರಥದಲಿ ಬರುವನು
ಸಪ್ತಾಶ್ವಗಳ ಹಿಡಿದವನು
ದಿನಗಳ ದಿನಮಣಿ ಇವನು
ಕಾಲದ ಲೀಲಾಕರ್ತನಿವನು |

ಅಂಧಕಾರವ ಓಡಿಸುವನು
ಜಡತೆಯನು ನೀಗುವನು
ಚೈತನ್ಯವ ತುಂಬುವನು
ಜೀವಿಗಳ ಜೀವ ಇವನು |

ಮುಳುಗದ ನಕ್ಷತ್ರನಿವನು
ಸೌರಮಂಡಲದ ಒಡೆಯನಿವನು
ಕೆಂಡ ಕಾರುವ ಬೆಂಕಿಯಿವನು
ಲೋಕಕೆ ಶಕ್ತಿಯ ಮೂಲ ಇವನು|

ಶ್ರೀಧರಯ್ಯ ಉಬ್ಬಲಗಂಡಿ, ಬೆಂಗಳೂರು

ಕನಸು ಕಂಗಳ ಚೆಲುವೆ…
ಧೋ ಎಂದು ಮಳೆ ಸುರಿಯೆ
ಕನಸು ಕಂಗಳ ಚೆಲುವೆ…
ಅದೇನೋ ಲವಲವಿಕೆ ಅದೇನೋ ಖುಷಿ
ಎದ್ದು ನಡೆದೇ ಬಿಟ್ಟಳಾಕೆ ಮನೆಯಂಗಳಕೆ
ಬಿಡಿಸಿಟ್ಟ ಛತ್ರಿಯ ಹಿಡ್ಕೊಂಡು, ಬೀಳುತ್ತಿಹ ಮಳೇಲಿ
ಅತ್ತಿಂದಿತ್ತ ಇತ್ತಿಂದತ್ತ ನಾಲ್ಕು ಹೆಜ್ಜೆ ನಡೆದೇ ಬಿಟ್ಟಳಾಕೆ
ಧೋ ಎಂದು ಮಳೆ ಸುರಿಯೇ…
ನಡೆದು ಬಂದ ಹಾದಿಯ ಕಹಿಯನ್ನೆಲ್ಲ ಮರೆತು, ಮೈಮರೆತು
ಕನಸಿನ ಹಾದಿಯಲಿ ನಡೆಯುವ ಹೆಜ್ಜೆಗೆ ಗೆಜ್ಜೆ ಕಟ್ಟಿದಳಾಕೆ

ಧೋ ಎಂದು ಮಳೆ ಸುರಿಯೇ…
ಕೇಳಿಕೊಂಡಳಾಕೆ… “ಮಳೆಯೇ, ಮನುಕುಲದ ಯಾತನೆಗೆ ನೀನಾಗುವೆಯಾ ಸಂಜೀವಿನಿ’…
ಹೇಳಿಕೊಂಡಳಾಕೆ..”ಇನ್ನೇನು ಬೇಕಾಗಿಲ್ಲ, ಸಾಕಾಗಿದೆ
ಉಂಡು -ತಿಂದು- ಮಲಗಿ
ದಿನ ಬೆಳಗಾದರೆ ಸಾವು ನೋವಿನ ಸುದ್ದಿ ಕೇಳಿ

ಧೋ ಎಂದು ಮಳೆ ಸುರಿಯೇ…
ಹಂಚಿಕೊಂಡಳಾಕೆ ಮನದ ದುಗುಡವನ್ನೆಲ್ಲ…
ಹಾರೈಸಿದಳಾಕೆ….ಬದುಕು ಮೊದಲಿನಂತಾಗಲಿ
ಇದೆ ಮನದಿ ಧೈರ್ಯ , ಆತ್ಮಸ್ಥೈರ್ಯ…
ಆಶಾಭಾವ, ಜತೆಗೆ ಒಂದಿಷ್ಟು ಮಾಡಲೇಬೇಕಾದ ಕರ್ತವ್ಯಗಳು…
ಕನಸು ಕಂಗಳಾ ಚೆಲುವೆ, ಮಳೆ ನಿಲ್ಲೋ ಮೊದಲೇ ಕಣ್ಣಲ್ಲೇ ಕೇಳಿದಳಾಕೆ…
ಭರವಸೆಯ ಮಳೆ ನೀನಾಗುವೆಯಾ?


ಮಲ್ಲಿಕಾ ಕೆ., ಮಂಗಳೂರು

 

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.