ಲಂಡನ್ನಲ್ಲಿ ಚೆನ್ನೈ ಮೂಲದ ಯುವತಿ ಅಪಹರಣ: ಝಕೀರ್ಗೆ ಲಿಂಕ್?
Team Udayavani, Aug 26, 2020, 6:46 AM IST
ವಿವಾದಿತ ಇಸ್ಲಾಮಿಕ್ ವಿದ್ವಾಂಸ ಝಕೀರ್ ನಾಯ್ಕ್.
ಚೆನ್ನೈ: ಲಂಡನ್ನಲ್ಲಿ ಚೆನ್ನೈ ಮೂಲದ ಯುವತಿಯನ್ನು ಬಾಂಗ್ಲಾದೇಶದ ದುಷ್ಕರ್ಮಿಗಳು ಅಪಹರಣ ಮಾಡಿದ ಪ್ರಕರಣಕ್ಕೂ, ವಿವಾದಿತ ಇಸ್ಲಾಮಿಕ್ ವಿದ್ವಾಂಸ ಝಕೀರ್ ನಾಯ್ಕ್ ಗೂ ಸಂಬಂಧವಿದೆಯೇ?
ಈ ಅಪಹರಣದಲ್ಲಿ ಝಕೀರ್ ನಾಯ್ಕ ಜತೆ ನಂಟು ಹೊಂದಿರುವ ಬಾಂಗ್ಲಾದ ಸಂಘಟಿತ ಗ್ಯಾಂಗ್ವೊಂದರ ಪಾತ್ರವಿದೆ ಎಂಬ ಅನುಮಾನದ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ಆರಂಭಿಸಿದೆ.
ಕಳೆದ ಮೇ ತಿಂಗಳಲ್ಲಿ ಚೆನ್ನೈ ಮೂಲದ ಉದ್ಯಮಿಯು ಲಂಡನ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ತಮ್ಮ ಪುತ್ರಿಯನ್ನು ಬಾಂಗ್ಲಾದೇಶೀಯರು ಅಪಹರಿಸಿದ್ದಾರೆ ಎಂದು ದೂರು ನೀಡಿದ್ದರು.
ಅಲ್ಲದೆ, ತಮ್ಮ ಪುತ್ರಿಯನ್ನು ತೀವ್ರಗಾಮಿತ್ವದ ಕಡೆಗೆ ಆಕರ್ಷಿತಳಾಗುವಂತೆ ಮಾಡಿ, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಒತ್ತಾಯ ಪೂರ್ವಕವಾಗಿ ಮತಾಂತರಿಸಲಾಗಿದೆ ಎಂದೂ ಅವರು ದೂರಿನಲ್ಲಿ ತಿಳಿಸಿದ್ದರು. ಹೀಗಾಗಿ ಆರಂಭದಲ್ಲಿ ಚೆನ್ನೈ ಕ್ರೈಂ ಬ್ರಾಂಚ್ ಪ್ರಕರಣ ದಾಖಲಿಸಿಕೊಂಡಿತ್ತು.
ಬಳಿಕ ಕೇಂದ್ರ ಗೃಹ ಸಚಿವಾಲಯದ ಆದೇಶದ ಮೇರೆಗೆ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲಾಗಿತ್ತು.
ಬಾಂಗ್ಲಾದ ಮಾಜಿ ಸಂಸದ ಸರ್ದಾರ್ ಶೇಖಾವತ್ ಹುಸೇನ್ ಬೊಕುಲ್ ಅವರ ಪುತ್ರ ನಾದ ನಫೀಸ್ನನ್ನು ಪ್ರಮುಖ ಆರೋಪಿ ಎಂದು ಎಫ್ಐಆರ್ನಲ್ಲಿ ಹೆಸರಿಸಲಾಗಿತ್ತು.
ಜತೆಗೆ, ಆರೋಪಿಗಳ ಪೈಕಿ ಝಕೀರ್ ನಾಯ್ಕ್ ಹೆಸರೂ ಇತ್ತು. ಇವರು ಪರಸ್ಪರ ನಂಟು ಹೊಂದಿದ್ದಾರೆಂಬ ಶಂಕೆಯ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ‘ಝೀ ನ್ಯೂಸ್’ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Helicopter Crash: ಹೆಲಿಕಾಪ್ಟರ್ ಪತನ… ಕೂದಲೆಳೆಯ ಅಂತರದಲ್ಲಿ ಪಾರಾದ ಶಿವಸೇನಾ ಉಪನಾಯಕಿ
Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು
Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ
Lok Sabha Election: ರಾಯ್ಬರೇಲಿಯಿಂದ ರಾಹುಲ್, ಅಮೇಥಿಯಿಂದ ಕೆ.ಎಲ್. ಶರ್ಮ ಕಣಕ್ಕೆ
CBI ಏಜೆನ್ಸಿ ನಮ್ಮ ನಿಯಂತ್ರಣದಲ್ಲಿಲ್ಲ: ಸುಪ್ರೀಂಗೆ ಕೇಂದ್ರ ಮಾಹಿತಿ
MUST WATCH
ಹೊಸ ಸೇರ್ಪಡೆ
Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್; ಭಾರೀ ನಷ್ಟ
Pendrive Case; ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್ ಪಡೆದ ರೇವಣ್ಣ
Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ
Bengaluru: ವಿವಾಹಕ್ಕೆ ಒಪ್ಪದ ಮಹಿಳೆ ಮನೆಗೆ ಬೆಂಕಿ ಹಚ್ಚಿದ
Lok Sabha Polls: ಕಾಗೆ ಮಾತು ಕಾಂಗ್ರೆಸ್ನ ಮನಸ್ಥಿತಿ: ಬಿ.ವೈ.ರಾಘವೇಂದ್ರ