ನಕ್ಷತ್ರಪುಂಜದಿಂದ ಹೊಮ್ಮಿದ ಬೆಳಕು : ಆ್ಯಸ್ಟ್ರೋಸ್ಯಾಟ್‌ನಿಂದ ಅಪರೂಪದ ಆವಿಷ್ಕಾರ


Team Udayavani, Aug 26, 2020, 7:00 AM IST

ನಕ್ಷತ್ರಪುಂಜದಿಂದ ಹೊಮ್ಮಿದ ಬೆಳಕು : ಆ್ಯಸ್ಟ್ರೋಸ್ಯಾಟ್‌ನಿಂದ ಅಪರೂಪದ ಆವಿಷ್ಕಾರ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಭಾರತದ ಮೊದಲ ಬಹು-ತರಂಗಾಂತರ ಉಪಗ್ರಹವಾದ ಆ್ಯಸ್ಟ್ರೋಸ್ಯಾಟ್‌, ಭೂಮಿಯಿಂದ 9.3 ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ತಾರಾಪುಂಜವೊಂದರಲ್ಲಿ ಅತಿನೇರಳೆ ಕಿರಣಗಳು ಹೊರಹೊಮ್ಮುತ್ತಿರುವುದನ್ನು ಪತ್ತೆಹಚ್ಚಿದೆ. ಈ ಮೂಲಕ ಚೆನ್ನೈಯ ಇಂಟರ್‌-ಯುನಿವರ್ಸಿಟಿ ಸೆಂಟರ್‌ ಫಾರ್‌ ಆಸ್ಟ್ರಾನಮಿ ಆ್ಯಂಡ್‌ ಆ್ಯಸ್ಟ್ರೋಫಿಸಿಕ್ಸ್‌ (ಐಯುಸಿಎಎ) ಹೊಸ ಮೈಲುಗಲ್ಲು ಸಾಧಿಸಿದೆ.

ಬೆಳಕಿನ ಪುಂಜ
ಎಯುಡಿಎಫ್ಎಸ್‌01 ಎಂಬ ನಕ್ಷತ್ರಪುಂಜದಿಂದ ಭಾರೀ ಪ್ರಮಾಣದಲ್ಲಿ ಅತಿನೇರಳೆ ಕಿರಣಗಳು ಹೊರಹೊಮ್ಮುತ್ತಿರುವುದನ್ನು ಈ ಉಪಗ್ರಹ ಪತ್ತೆಹಚ್ಚಿದೆ. ಈ ನಕ್ಷತ್ರಪುಂಜವು ಭೂಮಿಯಿಂದ 9.3 ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಐಯುಸಿಎಎ ಸಂಸ್ಥೆಯ ಸಹಾಯಕ ಪ್ರೊಫೆಸರ್‌ ಡಾ| ಕನಕ್‌ ಸಾಹಾ ನೇತೃತ್ವದ ತಂಡವು ಈ ಸಾಧನೆ ಮಾಡಿದ್ದು, ತಂಡದಲ್ಲಿ ಭಾರತ, ಫ್ರಾನ್ಸ್‌, ಸ್ವಿಜರ್ಲೆಂಡ್‌, ಯುಎಸ್‌ಎ, ಜಪಾನ್‌ ಮತ್ತು ನೆದರ್ಲೆಂಡ್‌ನ‌ ವಿಜ್ಞಾನಿಗಳಿದ್ದಾರೆ.

2 ವರ್ಷ ಬೇಕಾಯಿತು
2016ರ ಅಕ್ಟೋಬರ್‌ ತಿಂಗಳಲ್ಲೇ ವಿಜ್ಞಾನಿಗಳ ತಂಡವು ಇದನ್ನು ಪತ್ತೆ ಹಚ್ಚಿತಾದರೂ ಈ ಕಿರಣಗಳು ಹೊರಬರುತ್ತಿರುವುದು ಅದೇ ನಕ್ಷತ್ರಪುಂಜದಿಂದ ಎಂಬುದನ್ನು ಸಾಬೀತುಪಡಿಸಲು 2 ವರ್ಷಗಳು ಹಿಡಿದವು. ಭೂಮಿಯ ವಾತಾವರಣವು ಅತಿನೇರಳೆ ವಿಕಿರಣಗಳನ್ನು ಹೀರಿಕೊಳ್ಳುವ ಕಾರಣ, ಬಾಹ್ಯಾಕಾಶದಿಂದಲೇ ಅದನ್ನು ಅವಲೋಕಿಸುವ ಅಗತ್ಯವಿತ್ತು. ಅಲ್ಲದೆ, ಈ ಹಿಂದೆ ನಾಸಾದ ಹಬಲ್‌ ಟೆಲಿಸ್ಕೋಪ್‌ ಕೂಡ ಇದೇ ತಾರಾಪುಂಜದಿಂದ ವಿಕಿರಣ ಹೊರಸೂಸುತ್ತದೆಯೇ ಎಂಬುದನ್ನು ತಿಳಿಯಲು ಪ್ರಯತ್ನಿಸಿ, ವಿಫ‌ಲವಾಗಿತ್ತು.
ಹೀಗಾಗಿ, ಆ್ಯಸ್ಟ್ರೋಸ್ಯಾಟ್‌ ಇಂಥದ್ದೊಂದು ಸಾಧನೆ ಮಾಡಿದೆ ಎಂಬುದನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಲು ಸ್ವಲ್ಪ ಸಮಯ ತಗಲಿತು ಎಂದು ಸಾಹಾ ಹೇಳಿದ್ದಾರೆ.

– ಆ್ಯಸ್ಟ್ರೋಸ್ಯಾಟ್‌ ಭಾರತದ ಮೊದಲ ಬಹು-ತರಂಗಾಂತರ ಉಪಗ್ರಹ

– ಇದರಲ್ಲಿ 5 ವಿಶಿಷ್ಟವಾದ ಎಕ್ಸ್‌ರೇ ಮತ್ತು ಅಲ್ಟ್ರಾವಯಲೆಟ್‌ ದೂರದರ್ಶಕಗಳಿವೆ

– ತಾರಾಪುಂಜದಿಂದ ಹೊರಸೂಸುವ ಅತಿನೇರಳೆ ಕಿರಣಗಳನ್ನು ಇದು ಪತ್ತೆಹಚ್ಚಿದೆ

– ಭೂಮಿಯಿಂದ 9.3 ಶತಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ ಈ ನಕ್ಷತ್ರಪುಂಜ

– 2016ರ ಅಕ್ಟೋಬರ್‌ನಲ್ಲಿ ನಡೆದಿತ್ತು ಬೆಳವಣಿಗೆ. 28 ಗಂಟೆಗಳಿಗೂ ಹೆಚ್ಚು ಕಾಲ ಅತಿನೇರಳೆ ಕಿರಣ ಹೊರಸೂಸುತ್ತಿದ್ದ ತಾರಾಪುಂಜ.

ಈ ಬ್ರಹ್ಮಾಂಡದ ಕಗ್ಗತ್ತಲ ಯುಗ ಅಂತ್ಯವಾದದ್ದು ಯಾವಾಗ ಮತ್ತು ಅಲ್ಲಿ ಬೆಳಕಿನ ಕಿರಣ ಮೂಡಿದ್ದು ಯಾವಾಗ ಎಂಬುದರ ಸುಳಿವು ನೀಡುವಲ್ಲಿ ಈ ಆವಿಷ್ಕಾರವು ನೆರವಾಗಲಿದೆ. ಬೆಳಕಿನ ಆರಂಭಿಕ ಮೂಲವನ್ನು ಪತ್ತೆಹಚ್ಚುವುದು ಕಷ್ಟವಾದರೂ ಇಂಥದ್ದೊಂದು ಮಹತ್ವದ ಸಾಧನೆ ಮಾಡಿದವರನ್ನು ಅಭಿನಂದಿಸುತ್ತೇನೆ.
– ಡಾ| ಸೋಮಕ್‌ ರಾಯ್‌ ಚೌಧರಿ, ಐಯುಸಿಎಎ ನಿರ್ದೇಶಕ

ಟಾಪ್ ನ್ಯೂಸ್

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

1-eeqwew

Ban; ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.