22 ವರ್ಷಗಳ ವೃತ್ತಿಪರ ಆಟಕ್ಕೆ ತೆರೆ; ಟೆನಿಸ್‌ಗೆ ಗುಡ್‌ಬೈ ಹೇಳಿದ ಬ್ರಿಯಾನ್‌ ಸಹೋದರರು !

ಜತೆಯಾಗಿ 16 ಗ್ರಾನ್‌ಸ್ಲಾಮ್‌ ಸಹಿತ 119 ಪ್ರಶಸ್ತಿ ಗೆದ್ದ ಸಾಧನೆ

Team Udayavani, Aug 27, 2020, 7:32 PM IST

ಟೆನಿಸ್‌ಗೆ ಗುಡ್‌ಬೈ ಹೇಳಿದ ಬ್ರಿಯಾನ್‌ ಸೋದರರು; 22 ವರ್ಷಗಳ ವೃತ್ತಿಪರ ಆಟಕ್ಕೆ ತೆರೆ

ಕ್ಯಾಲಿಫೋರ್ನಿಯಾ (ಯುಎಸ್‌ಎ): ಜಾಗತಿಕ ಟೆನಿಸ್‌ ಇತಿಹಾಸದ ಸರ್ವಶ್ರೇಷ್ಠ ಜೋಡಿಯೆನಿಸಿದ ಅಮೆರಿಕದ ಬ್ರಿಯಾನ್‌  ಸಹೋದರರಾದ ಬಾಬ್‌ ಮತ್ತು ಮೈಕ್‌ ತಮ್ಮ 22 ವರ್ಷಗಳ ವೃತ್ತಿಪರ ಆಟಕ್ಕೆ ಗುಡ್‌ಬೈ ಹೇಳಿದ್ದಾರೆ. ಅವಳಿ ಸೋದರರ ಈ ವಿದಾಯದ ಸುದ್ದಿಯನ್ನು “ನ್ಯೂಯಾರ್ಕ್‌ ಟೈಮ್ಸ್‌’ ವರದಿ ಮಾಡಿದೆ. “ಆಟ ಮುಂದುವರಿಸುವುದನ್ನು ನಾವಿನ್ನೂ ಬಯಸುತ್ತೇವೆ. ನಮ್ಮಲ್ಲಿ ಇನ್ನೂ ಉತ್ತಮ ಆಟ ಉಳಿದುಕೊಂಡಿದೆ. ಆದರೆ ನಮ್ಮ ದೇಹ ಸ್ಪಂದಿಸದು. ಹೀಗಾಗಿ ಟೆನಿಸ್‌ನಿಂದ ದೂರ ಉಳಿಯುವ ಕಠಿನ ತೀರ್ಮಾನಕ್ಕೆ ಬಂದಿದ್ದೇವೆ’ ಎಂಬುದಾಗಿ ಬ್ರಿಯಾನ್‌ ಸೋದರರು ಹೇಳಿದ್ದಾರೆ.

ಒಲಿಂಪಿಕ್ಸ್‌ ಸ್ವರ್ಣ ಸಾಧಕರು
42 ವರ್ಷದ ಅವಳಿ ಸೋದರರು ಪುರುಷರ ಡಬಲ್ಸ್‌ನಲ್ಲಿ ಒಟ್ಟು 119 ಪ್ರಶಸ್ತಿಗಳನ್ನು ಜಯಿಸಿದ್ದು ಸಾರ್ವಕಾಲಿಕ ದಾಖಲೆಯಾಗಿದೆ. ಇದರಲ್ಲಿ 16 ಗ್ರಾನ್‌ಸ್ಲಾಮ್‌, 39 ಎಟಿಪಿ ಮಾಸ್ಟರ್ 1000 ಮತ್ತು 4 ಎಟಿಪಿ ಫೈನಲ್ಸ್‌ ಪ್ರಶಸ್ತಿಗಳು ಸೇರಿವೆ. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದು ಇವರ ಮಹಾನ್‌ ಸಾಧನೆಯಾಗಿದೆ. ರಾಬರ್ಟ್‌ ಚಾರ್ಲ್ಸ್‌ ಬಾಬ್‌ ಬ್ರಿಯಾನ್‌ ಮತ್ತು ಮೈಕಲ್‌ ಕಾರ್ಲ್ ಮೈಕ್‌ ಬ್ರಿಯಾನ್‌ ಎಂಬುದು ಇವರ ಪೂರ್ತಿ ಹೆಸರು. 1978ರ ಎಪ್ರಿಲ್‌ 29ರಂದು ಇವರ ಜನನವಾಗಿತ್ತು. ಇವರಲ್ಲಿ ಮೈಕ್‌ ಬ್ರಿಯಾನ್‌ ಎರಡು ನಿಮಿಷ ದೊಡ್ಡವರು. ಇವರಿಬ್ಬರಲ್ಲಿ ಮೈಕ್‌ ಬ್ರಿಯಾನ್‌ 2018ರಲ್ಲಿ ಹೆಚ್ಚುವರಿಯಾಗಿ 2 ಗ್ರಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಆಗ ಜಾಕ್‌ ಸಾಕ್‌ ಇವರ ಜೋಡಿಯಾಗಿದ್ದರು. ಅಂದು ಬಾಬ್‌ ಬ್ರಿಯಾನ್‌ ಗಾಯಾಳಾಗಿ ವಿಶ್ರಾಂತಿಯಲ್ಲಿದ್ದರು.

ಗೆಲುವಿನೊಂದಿಗೆ ವಿದಾಯ
ಬ್ರಿಯಾನ್‌ ಸೋದರರು ಗೆಲುವಿನೊಂದಿಗೇ ಟೆನಿಸ್‌ ಬದುಕಿಗೆ ವಿದಾಯ ಹೇಳಿರುವುದು ವಿಶೇಷ. ಫೆಬ್ರವರಿಯಲ್ಲಿ ನಡೆದ “ಡೆಲ್ರೆ ಬೀಚ್‌ ಓಪನ್‌’ ಟೆನಿಸ್‌ ಕೂಟದಲ್ಲಿ ಇವರು ಚಾಂಪಿಯನ್‌ ಆಗಿದ್ದರು. ಬಳಿಕ ಕೊರೊನಾದಿಂದಾಗಿ ಕ್ರೀಡಾ ಜಗತ್ತು ಸ್ತಬ್ಧಗೊಂಡಿತ್ತು.

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.