ಬಿಸಿಯೂಟ ಆಹಾರ ವಿತರಣೆಗೆ ಶಾಲೆ ಆರಂಭದ ಗೊಂದಲ

ಜಿಲ್ಲೆಯಲ್ಲಿ 1,409 ಶಾಲೆ; ನೇರ ಮಕ್ಕಳ ಮನೆಗೆ ವಿತರಣೆ

Team Udayavani, Aug 28, 2020, 6:40 AM IST

ಬಿಸಿಯೂಟ ಆಹಾರ ವಿತರಣೆಗೆ ಶಾಲೆ ಆರಂಭದ ಗೊಂದಲ

ಬೆಳ್ತಂಗಡಿ: ಸರಕಾರಿ ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಗೂ ಪೌಷ್ಠಿಕಾಂಶ ವೃದ್ಧಿಸುವ ಸಲುವಾಗಿ ಅಕ್ಷರ ದಾಸೋಹ ಯೋಜನೆಯಡಿ ಮಧ್ಯಾಹ್ನದ ಬಿಸಿಯೂಟದ ಕಿಟ್‌ ಕೋವಿಡ್‌ ಕಾರಣದಿಂದಾಗಿ ಪ್ರಸಕ್ತ ಮಕ್ಕಳ ಮನೆ ಮನೆಗೆ ತಲುಪಿಸುವ ಕೆಲಸ ಇಲಾಖೆಯಿಂದ ನಡೆಯುತ್ತಿದೆ. ಶಾಲೆ ಪುನರಾರಂಭವಾಗುವಲ್ಲಿ ಸರಕಾರ ಸ್ಪಷ್ಟ ನಿರ್ದೇಶನ ಬಳಿಕ ಜೂನ್‌-ಆಗಸ್ಟ್‌ ತಿಂಗಳ ಆಹಾರ ವಿತರಣೆ ನಡೆಯಲಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌ನಿಂದ ಮಕ್ಕಳು ಶಾಲೆಗೇ ಬಾರದಿರುವ ಸನ್ನಿವೇಶವಿರುವುದರಿಂದ ಮಕ್ಕಳು ಪೌಷ್ಠಿಕತೆಯಿಂದ ಹಿಂದುಳಿ ಯಬಾರದು ಎಂಬ ಉದ್ದೇಶದಿಂದ ಪ್ರತಿ ಶಾಲೆಗಳಿಗೆ ಆಹಾರ ಕಿಟ್‌ ತಲುಪಿಸಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ 1,409 ಸರಕಾರಿ ಅನುದಾನಿತ, ಹಿ.ಪ್ರಾ., ಪ್ರೌಢಶಾಲೆಗಳ 1 ಲಕ್ಷದ 52 ಸಾವಿರ ಮಕ್ಕಳು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 55,113 ಶಾಲೆಗಳು ಅಕ್ಷರ ದಾಸೋಹದಡಿ ಬರುತ್ತವೆ.

ಎಪ್ರಿಲ್‌-ಮೇ ತಿಂಗಳ ಆಹಾರ ಧಾನ್ಯವನ್ನು ಮಕ್ಕಳ ಮನೆಗಳಿಗೆ ಹೆತ್ತವರ ಮೂಲಕ ಕೆಲವೆಡೆ ವಿದ್ಯಾಗಮಕ್ಕೆ ತೆರಳುವ ಶಿಕ್ಷಕರೇ ವಿತರಿಸಿದ್ದಾರೆ. ಪ್ರಸಕ್ತ ಜೂನ್‌- ಆಗಸ್ಟ್‌ ತಿಂಗಳ ಆಹಾರ ವಿತರಣೆಯಾಗಲು ಬಾಕಿ ಉಳಿದಿವೆ. ಶಾಲೆ ಆರಂಭಿಸುವಲ್ಲಿ ಸರಕಾರದ ಮಾರ್ಗಸೂಚಿಗೆ ಕಾಯುತ್ತಿದ್ದು, ಶಾಲೆ ಆರಂಭ ವಿಳಂಬವಾದಲ್ಲಿ ಮತ್ತೆ ಮಕ್ಕಳ ಮನೆಗೆ ಆಹಾರ ಧಾನ್ಯ ತಲುಪಲಿದೆ.

1ರಿಂದ 5ನೇ ತರಗತಿವರೆಗೆ ಪ್ರತಿ ಮಗುವಿಗೆ ಪ್ರತಿ ದಿನದ ಲೆಕ್ಕಾಚಾರದಂತೆ 500 ಗ್ರಾಂ. ಹಾಲಿನ ಹುಡಿ, 500 ಗ್ರಾಂ. ತೊಗರಿಬೇಳೆ, 100 ಗ್ರಾಂ. ಅಕ್ಕಿ ನೀಡಲಾಗುತ್ತಿದೆ. 6ರಿಂದ 10ನೇ ತರಗತಿವರೆಗೆ 500 ಗ್ರಾಂ. ಹಾಲಿನ ಹುಡಿ, 600 ಗ್ರಾಂ. ತೊಗರಿಬೇಳೆ, 150 ಗ್ರಾಂ. ಅಕ್ಕಿ ಪ್ರತಿ ಮಗುವಿಗೆ ವಿತರಿಸಲಾಗುತ್ತದೆ.

ಎಪ್ರಿಲ್‌, ಮೇ ತಿಂಗಳಲ್ಲಿ ದ.ಕ. ಜಿಲ್ಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಅಕ್ಕಿ 5,475 ಕ್ವಿಂಟಲ್‌, ಹಾಲಿನ ಹುಡಿ 67,298 ಕೆ.ಜಿ., ತೊಗರಿ ಬೇಳೆ 5,166 ಕ್ವಿಂಟಲ್‌ ವಿತರಿಸಲಾಗಿದೆ. 6ರಿಂದ 10ನೇ ತರಗತಿಗೆ ವಿತರಿಸಬೇಕಾಗಿದ್ದ ಎಣ್ಣೆ ಸರಬರಾಜು ಆಗದೇ ಇರುವುದರಿಂದ ವಿತರಣೆಯಾಗಿಲ್ಲ. ಉಳಿದಂತೆ ಪ್ರತಿ ಶಾಲೆಗಳಲ್ಲಿ ಅಕ್ಷರದಾಸೋಹ ಸಿಬಂದಿ ಸೇರಿ ವಿತರಣೆಗೆ ಮುಂದಾಗಿದ್ದಾರೆ.

ಅಕ್ಷರ ದಾಸೋಹ ನೌಕರರು ಅತಂತ್ರ
ಸದ್ಯದ ಮಟ್ಟಿಗೆ ಶಾಲೆಗಳು ಎಪ್ರಿಲ್‌ನಿಂದ ಆಗಸ್ಟ್‌ವರೆಗೆ ತೆರೆಯದೇ ಇರುವುದರಿಂದ ಅಕ್ಷರ ದಾಸೋಹ ಅಡುಗೆ ನೌಕರರು ಅತಂತ್ರ ಪರಿಸ್ಥಿತಿ ಎದುರಿಸಿದ್ದಾರೆ. ಶಾಲೆ ಆರಂಭವಾದಾಗ ಮತ್ತೆ ಅವರನ್ನು ಮರಳಿ ಕರೆಯುವುದಾಗಿ ಸರಕಾರ ಭರವಸೆ ನೀಡಿದ್ದರಿಂದ ಮತ್ತೆ ಮಕ್ಕಳಂತೆಯೇ ಶಾಲೆ ಆರಂಭಕ್ಕೆ ಹಾತೊರೆಯುವಂತಾಗಿದೆ.

ಮಾರ್ಗಸೂಚಿ ಬಂದ ಬಳಿಕ ವಿತರಣೆ
ಕೊರೊನಾ ಸಂಕಷ್ಟದಿಂದ ಶಾಲೆ ತೆರೆಯದಿರುವುದರಿಂದ ಅಕ್ಷರದಾಸೋಹದಡಿ ಶಾಲೆಯಲ್ಲಿ ನೀಡುತ್ತಿದ್ದ ಆಹಾರದ ಪ್ರಮಾಣವನ್ನು ಮಕ್ಕಳ ಮನೆಗೆ ವಿತರಿಸಲಾಗಿದೆ. ಈಗಾಗಲೇ ಎಪ್ರಿಲ್‌, ಮೇ ತಿಂಗಳ ವಿತರಣೆ ನಡೆದಿದ್ದು, ಜೂನ್‌-ಆಗಸ್ಟ್‌ ತಿಂಗಳ ಆಹಾರ ಸರಬರಾಜಾಗಿದ್ದು, ಸರಕಾರದ ಮಾರ್ಗಸೂಚಿ ಬಂದ ಬಳಿಕ ವಿತರಿಸಲಾಗುವುದು.
-ಸುಧಾಕರ್‌, ಶಿಕ್ಷಣಾಧಿಕಾರಿ, ಅಕ್ಷರದಾಸೋಹ ದ.ಕ. ಜಿಲ್ಲೆ

ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.