ಇಂಡೋ-ಬಾಂಗ್ಲಾ ಜಲಸಾರಿಗೆ
Team Udayavani, Sep 6, 2020, 5:00 AM IST
ಅಗರ್ತಲಾ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಒಳನಾಡು ಜಲಸಾರಿಗೆ ಪ್ರಾಯೋಗಿಕವಾಗಿ ಆರಂಭಗೊಂಡಿದೆ. ಬಾಂಗ್ಲಾದೇಶದಿಂದ ಹೊರಟ 50 ಮೆಟ್ರಿಕ್ ಟನ್ ಸಿಮೆಂಟು ಸರಕು ಹೊತ್ತ ದೋಣಿ ತ್ರಿಪುರಾದ ಸೋನಾಮುರ ಬಂದರನ್ನು ತಲುಪಲಿದೆ.
ತ್ರಿಪುರಾಕ್ಕೆ ಆಗಮಿಸುವ ಈ ದೋಣಿಯನ್ನು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ನವದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್ನಲ್ಲಿ ಸ್ವಾಗತಿಸಲಿದ್ದಾರೆ. ಇಲ್ಲಿಯ ತನಕ ಭೂಮಾರ್ಗಗಳ ಮೂಲಕ ಈಶಾನ್ಯ ರಾಜ್ಯ ತ್ರಿಪುರಾಕ್ಕೆ ಸರಕು ಸಂಚಾರ ನಡೆಸಲಾಗುತ್ತಿತ್ತು. ಈ ಸಾಗಾಟ ದುಬಾರಿಯಾದ ಕಾರಣ, ಬಾಂಗ್ಲಾ ಬಂದರುಗಳನ್ನು ಬಳಸಿಕೊಂಡು ಒಳನಾಡು ಜಲಮಾರ್ಗಗಳ ಮೂಲಕ ತ್ರಿಪುರಾಕ್ಕೆ ಸರಕು ಸಾಗಿಸಲು ಕೇಂದ್ರ ಸರ್ಕಾರ ಯೋಜಿಸಿತ್ತು.
ಮೇ ತಿಂಗಳಿನಲ್ಲಿ “ಇಂಡೋ- ಬಾಂಗ್ಲಾ ಪ್ರೊಟೊ ಕಾಲ್’ (ಐಬಿಪಿ) ಮಾರ್ಗಗಳಿಗೆ ಸೋನಾಮುರ (ತ್ರಿಪುರಾ)- ದೌಡ್ಕಂಡಿ (ಬಾಂಗ್ಲಾದೇಶ) ಜಲ ಮಾರ್ಗ ವನ್ನು ಸೇರಿಸುವ ಒಪ್ಪಂದಕ್ಕೂ ಉಭಯ ರಾಷ್ಟ್ರಗಳು ಸಹಿಹಾಕಿದ್ದವು.
ಗೋಮತಿ- ಮೇಘನಾ: ಬಾಂಗ್ಲಾದೇಶ ಅಧಿಕಾರಿಗಳ ಸರ್ವೇ ಪ್ರಕಾರ, ಸೋನಾಮುರಾ- ದೌಡ್ಕಂಡಿ ಪ್ರೊಟೊಕಾಲ್ ಮಾರ್ಗ 90 ಕಿ.ಮೀ.ಗಳಲ್ಲಿ 89.5 ಕಿ.ಮೀ. ಬಾಂಗ್ಲಾದೇಶದಲ್ಲಿಯೇ ಬರುತ್ತದೆ. ತ್ರಿಪುರಾದ ಗೋಮತಿ ನದಿ, ಬಾಂಗ್ಲಾದೇಶದ ಮೇಘನಾ ನದಿ ಮೂಲಕ ಭಾರತದ ರಾಷ್ಟ್ರೀಯ ಜಲಮಾರ್ಗಗಳೊಂದಿಗೆ ಸಂಪರ್ಕ ಬೆಸೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ