ಆನ್ಲೈನ್ ಶಾಪಿಂಗ್ ಕೂಪನ್ ಹೆಸರಲ್ಲಿ 1.73 ಲಕ್ಷ ರೂ. ವಂಚನೆ
Team Udayavani, Sep 13, 2020, 6:50 PM IST
ಸಾಂದರ್ಭಿಕ ಚಿತ್ರ
ಶಿವಮೊಗ್ಗ: ನ್ಯಾಪ್ಟಲ್ ಆನ್ಲೈನ್ ಶಾಪಿಂಗ್ ಕೂಪನ್ ನಲ್ಲಿ ನೀವು 12 ಲಕ್ಷ ರೂ. ಹಣ ಗೆದ್ದಿದ್ದೀರಿ ಎಂಬ ಸಂದೇಶ ಸ್ವೀಕರಿಸಲು ಹೋಗಿ ಮಹಿಳೆಯೊಬ್ಬರು ಬರೋಬ್ಬರಿ 1.73 ಲಕ್ಷ ರೂ. ವಂಚನೆಗೆ ಒಳಗಾದ ಘಟನೆ ನಡೆದಿದೆ.
ಸೆ.4 ರಂದು ನವುಲೆಯ ವೀರಭದ್ರೇಶ್ವರ ಲೇಔಟ್ ನ ಮಹಿಳೆಯೊಬ್ಬರು ಕೊಲ್ಕತ್ತಾದ ವಿಳಾಸವುಳ್ಳ ನ್ಯಾಪ್ ಟಲ್ ಆನ್ ಲೈನ್ ಶಾಪಿಂಗ್ ಪ್ರೈ.ಲಿಮಿಟೆಡ್ ಹೆಸರಿನಲ್ಲಿ 12 ಲಕ್ಷ ರೂ. ಹಣ ಗೆದ್ದೀದ್ದೀರಿ ಎಂಬ ಕೂಪನ್ ಮತ್ತು ಪತ್ರವೊಂದನ್ನು ಕೊರಿಯರ್ ಮೂಲಕ ಪಡೆದಿದ್ದಾರೆ. ಈ ಪತ್ರ ಮತ್ತು ಕೂಪನ್ನಲ್ಲಿದ್ದ 918017216387 ಹಾಗೂ 09163432157 ಮೊಬೈಲ್ ನಂಬರ್ ಗೆ ಫೂನಾಯಿಸಿ ವಿಚಾರಿಸಿದಾಗ ನಿಮ್ಮ ಹುಟ್ಟುಹಬ್ಬಕ್ಕೆ 12 ಲಕ್ಷ ರೂ ಬಹುಮಾನ ಗೆದ್ದೀದ್ದೀರಿ, ನಿಮ್ಮ ಮೊಬೈಲ್ ಸಂಖ್ಯೆಯಿಂದ ಬಹುಮಾನ ಗೆದ್ದಿದ್ದೀರಿ. ಬಹುಮಾನದಹಣವನ್ನ ಹಾಕುತ್ತೇವೆ. ಪತ್ರದಲ್ಲಿರುವ ಮಾಹಿತಿ ಭರ್ತಿ ಮಾಡಿ 09163432157 ಈ ನಂಬರ್ಗೆ ವಾಟ್ಸಪ್ ಮಾಡಿ ಎಂದು ತಿಳಿಸಿದ್ದಾರೆ.
ಈ ಹಣ ನಿಮ್ಮ ಕೈ ಸೇರಬೇಕಿದ್ದರೆ ಸ್ಟೇಟ್ ಗೌವರ್ನಮೆಂಟ್, ಸೆಂಟ್ರಲ್ ಗೌವರ್ನಮೆಂಟ್ ಟ್ಯಾಕ್ಸ್ ತುಂಬಿ ಎನ್ಒಸಿ ಪಡೆಯಬೇಕಾಗಿದೆ. ಅದಕ್ಕೆ ತಗಲುವ ಶುಲ್ಕದ ಹಣವನ್ನ ಎಸ್ಬಿಐ ಬ್ಯಾಂಕ್ ಖಾತೆಯ ರೀಟಾ ರಾಯ್ ಬ್ಯಾಂಕ್ ಖಾತೆಗೆ ಹಣ ತುಂಬಿಸಲು ವಂಚಕರು ಸೂಚಿಸಿದ್ದಾರೆ. ಅದರಂತೆ ಮೊದಲಿಗೆ ಚೆಕ್ ನ ಮೂಲಕ 24 ಸಾವಿರ ರೂ. ಹಣವನ್ನು, ಎರಡನೇ ಹಂತದಲ್ಲಿ 51 ಸಾವಿರ ರೂ. ಹಾಗೂ ಮೂರನೇ ಹಂತದಲ್ಲಿ 1 ಲಕ್ಷದ 2 ಸಾವಿರದ ನಾನೂರು ರೂ. ಹಣ ಚೆಕ್ ಮೂಲಕ ಹಾಕಿರುವ ಮಹಿಳೆ ಬರೋಬ್ಬರಿ 1 ಲಕ್ಷದ 73 ಸಾವಿರದ 400 ರೂ. ಕಳೆದುಕೊಂಡಿದ್ದಾರೆ. ಈ ಕುರಿತು ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ