ನಿಯಮ ಮೀರಿ ಜಲ್ಲಿ ಸಾಗಾಟ: ಚಿಂದಿಯಾದ ರಸ್ತೆ
Team Udayavani, Sep 16, 2020, 8:26 AM IST
ಸಂಪೂರ್ಣ ಹದಗೆಟ್ಟ ಅರಂತೋಡು-ತೊಡಿಕಾನ ರಸ್ತೆ.
ಅರಂತೋಡು: ಸುಳ್ಯ ಸೀಮೆ ಹಾಗೂ ಅತೀ ಪುರಾತನ ದೇಗುಲ ತೊಡಿಕಾನ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಸಂಪರ್ಕಿಸುವ ಅರಂತೋಡು – ತೊಡಿಕಾನ ರಸ್ತೆ ಜಲ್ಲಿ ಸಾಗಾಟದ ಟಿಪ್ಪರ್ಗಳ ಹಾವಳಿಯಿಂದಾಗಿ ಸಂಪೂರ್ಣ ಚಿಂದಿ ಯಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ತೊಡಿಕಾನ ರಸ್ತೆಗೆ ಸುಮಾರು ಐದು ವರ್ಷಗಳ ಹಿಂದೆ ಡಾಮರು ಹಾಕಲಾಗಿತ್ತು. ಇದೀಗ ಅರಂತೋಡು ತೊಡಿಕಾನ ರಸ್ತೆಯಲ್ಲಿ ಟಿಪ್ಪರ್ಗಳು ಕೊಡಗು ಜಿಲ್ಲೆಯ ಕ್ರಷರ್ನಿಂದ ನಿತ್ಯ ಹಲವು ಬಾರಿ ನಿಯಮ ಮೀರಿ ಟನ್ಗಟ್ಟಲೇ ಜಲ್ಲಿ ಹೇರಿಕೊಂಡು ಸಾಗುತ್ತಿರುವುದರಿಂದ ಅಲ್ಲಲ್ಲಿ ಹೊಂಡಗಳು ನಿರ್ಮಾಣ ಆಗಿವೆ.
ಜಿಲ್ಲಾ ಪಚಾಯತ್ ರಸ್ತೆ
ಅರಂತೋಡು – ತೊಡಿಕಾನ ಜಿ.ಪಂ. ರಸ್ತೆ 3 ಕಿ. ಮೀ. ಸಂಪೂರ್ಣ ಹದಗೆಟ್ಟಿದೆ. ತೊಡಿಕಾನ ಶ್ರೀ ಮಲ್ಲಿಕಾರ್ಜುನ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ರಸ್ತೆ ದುಃಸ್ಥಿತಿಯಿಂದಾಗಿ ಸಮಸ್ಯೆ ಎದುರಿಸುವಂತಾಗಿದೆ. ಅರಂತೋಡು-ತೊಡಿಕಾನ ರಸ್ತೆ ಪಟ್ಟಿ – ಕರಿಕೆ – ಭಾಗಮಂಡಲದ ಮೂಲಕ ತಲಕಾವೇರಿ ಸಂಪರ್ಕಿಸುತ್ತದೆ. ತೊಡಿಕಾನ ಗ್ರಾಮದಲ್ಲಿ ದ.ಕ. ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ಗಡಿ ಇದ್ದು, ಜಿಲ್ಲೆಯ ಗಡಿ ತನಕ ಸರ್ವಋತು ರಸ್ತೆಯಾಗಿ ಅಭಿವೃದ್ಧಿಗೊಂಡಿದೆ.
ಕ್ರಮ ಕೈಗೊಳ್ಳಲಾಗುವುದು
ಟಿಪ್ಪರ್ನಲ್ಲಿ ನಿಯಮ ಮೀರಿ ಹೆಚ್ಚು ಟನ್ ಜಲ್ಲಿ ಸಾಗಾಟ ಮಾಡುತ್ತಿರುವು ದರಿಂದ ಅರಂತೋಡು – ತೊಡಿ ಕಾನ ರಸ್ತೆ ಹದಗೆಟ್ಟಿದೆ ಎಂದು ದೂರು ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಸ. ಕಾರ್ಯಪಾಲಕ ಅಭಿಯಂತ ಹನುಮಂತರಾಯಪ್ಪ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ