ಅಣಬೆ ಬೆಳೆಯಲು ರೈತರಿಗೆ ಸಲಹೆ
Team Udayavani, Sep 19, 2020, 5:39 PM IST
ಪಾತಪಾಳ್ಯ: ಅಣಬೆಯಲ್ಲಿ ಪ್ರೋಟಿನ್ ಮತ್ತು ಕ್ಯಾಲ್ಸಿಯಂ ಭಾರೀ ಪ್ರಮಾಣದಲ್ಲಿರುತ್ತದೆ. ಮೊಣಕಾಲು ನೋವು ಇರುವವರು, ಶುಗರ್, ಬಿಪಿ ಇರುವವರ ಆರೋಗ್ಯಕ್ಕೂ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ ಎಂದು ಪುಲಗಲ್ ಗ್ರಾಪಂ ಆಡಳಿತಾಧಿಕಾರಿ ಎ.ಮಹೆಬೂಬ್ಬಾಷಾ (ಬಾಬು) ತಿಳಿಸಿದರು.
ಪುಲಗಲ್ ಗ್ರಾಪಂ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ 2020ರ ವಿಶೇಷ ಅಭಿಯಾನದ ಅಡಿಯಲ್ಲಿಬಚ cಲುಗುಂಡಿ, ಪೌಷ್ಟಿಕ ತೋಟ ಹಾಗೂ ಅಣಬೆ ಬೇಸಾಯದ ಬಗ್ಗೆ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು. ಅಣಬೆಯಲ್ಲಿ ಪ್ರೊಟಿನ್, ಜೀವಸತ್ವಗಳು, ಖನಿಜಾಂಶಗಳು ಹೇರಳವಾಗಿದ್ದು, ಶರ್ಕರ ಪಿಷ್ಠ ಕಡಿಮೆ ಇರುವುದರಿಂದ ಸಕ್ಕರೆ ರೋಗಿಗಳಿಗೆ ಒಳ್ಳೆ ಆಹಾರವಾಗಿದೆ. ಅತ್ಯಧಿಕ ಪ್ರೊಟಿನ್ ಇರುವ ಆಹಾರವರ್ಧಕ ಅಣಬೆಗೆ ಬೇಡಿಕೆಯಿದ್ದು, ರೈತರು ಇದನ್ನು ಬೆಳೆಯಬೇಕೆಂದು ತಿಳಿಸಿದರು.
ಪಿಡಿಒ ಶ್ರೀನಿವಾಸ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಣಬೆ ಬೇಸಾಯದ ಸಮುದಾಯ ಶೆಡ್ ನಿರ್ಮಾಣಕ್ಕೆ 95 ಸಾವಿರ ರೂ. ಅನುದಾನವಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಎನ್ಆರ್ಎಲ್ ಎಂ ಸ್ವ ಸಹಾಯ ಗುಂಪುಗಳಿಗೆ ಆದ್ಯತೆ ನೀಡಲಾಗುವುದು ಎಂದರು. ಕರವಸೂಲಿಗಾರ ಎನ್.ಕೃಷ್ಣಪ್ಪ, ಗುಮಾಸ್ತ ಚಂದ್ರಾ ರೆಡ್ಡಿ, ಡಿಇಒ ಲವಾಣಿಸುಬಹಾನ್ಖಾನ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ