ಕಸವು ಕನ್ಯೆ! ಸೀರೆಯಲ್ಲಿ ಸುಂದರಾಂಗಿ…


Team Udayavani, Oct 1, 2020, 7:46 PM IST

ಕಸವುಕನ್ಯೆ! ಸೀರೆಯಲ್ಲಿ ಸುಂದರಾಂಗಿ…

ಮಲಯಾಳಿ ಸೆಟ್‌ ಸೀರೆ ಎಂದೇ ಹೆಸರಾಗಿರುವ ಕಸವು ಸೀರೆಗಳಿಗೆ ವಿದೇಶಗಳಲ್ಲೂ ಬೇಡಿಕೆ ಇದೆ. ನೋಡಲೂ ಅಂದ, ಉಡಲು ಆರಾಮದಾಯಕ ಆಗಿರುವುದು ಈ ಸೀರೆಗಳ ಹೆಚ್ಚುಗಾರಿಕೆ.

ಸ್ವರ್ಣದ ಜರಿ ಉಳ್ಳ ಮಬ್ಬು ಬಿಳುಪು ಅಥವಾ ಬಿಳಿಬಣ್ಣದ ಸೀರೆಯನ್ನು ಮಲಯಾಳಿ ಸೆಟ್‌ ಸೀರೆ ಅಂತ ಕರೆಯುತ್ತಾರೆ. ಆದರೆ ಇದರ ನಿಜವಾದ ಹೆಸರುಕಸವು ಸೀರೆ.ಕೈಮಗ್ಗದಿಂದ ನೇಯಲಾಗುವ ಈ ವಿಶಿಷ್ಟ ಸೀರೆಯನ್ನು ಹಿಂದೆ ರಾಜಮನೆತನಕ್ಕೆ ಸೇರಿದವರು ಉಡುತ್ತಿದ್ದರು. ನಂತರ ಜನಸಾಮಾನ್ಯರು ಮದುವೆ, ಹಬ್ಬ- ಹರಿದಿನಗಳಲ್ಲಿ ಉಡಲು ಆರಂಭಿಸಿದರು.2018ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹದಿಂದ, ಬಹಳಷ್ಟು ನೇಕಾರರುಕಷ್ಟಕ್ಕೆ ಸಿಕ್ಕಿಕೊಂಡರು. ಪ್ರವಾಹದ ಸಂದರ್ಭದಲ್ಲಿ ಎಷ್ಟೋ ಕೈಮಗ್ಗಗಳು ನೀರಿನಲ್ಲಿ ಕೊಚ್ಚಿಹೋದವು,ಕೆಲವು ಮುರಿದುಹೋದವು. ಹೀಗಾಗಿ ವ್ಯಾಪಾರದಲ್ಲಿ ವಿಪರೀತ ನಷ್ಟ ಉಂಟಾಯಿತು.

ಆನಂತರದ ದಿನಗಳಲ್ಲಿ ಈ ಕೈಮಗ್ಗಕ್ಕೆ ಬೇಡಿಕೆ ಹೆಚ್ಚಿಸಲುಕೆಲವು ಎನ್‌.ಜಿ.ಓ.ಗಳು ಮುಂದಾದವು. ಮೇಕ್‌ಓವರ್‌ ಪಡೆದಕಸವು ಸೀರೆಗಳನ್ನು ತಯಾರಿಸಿ ಅವುಗಳಿಗೆ ಮಾರುಕಟ್ಟೆ ಸೃಷ್ಟಿಸಲು ಮುಂದೆಬಂದವು. ಇವುಗಳನ್ನು ಮಾಡರ್ನ್ ಕಸವು ಸೀರೆ ಎನ್ನಲಾಗುತ್ತದೆ. ತಿಳಿಹಸಿರು,ಕಂದು, ಬೂದು, ಹಳದಿ, ಗುಲಾಬಿ,ಕೇಸರಿ, ಕೆಂಪು, ನೀಲಿ, ಮುಂತಾದ ತಿಳಿಬಣ್ಣದಕಸವು ಸೀರೆಗಳನ್ನು ನೇಯಲು ನೇಕಾರರಿಗೆ ಉತ್ತೇಜನ ನೀಡಿದವು. ಇಷ್ಟಾದಮೇಲೆ, ಈ ಸೀರೆಗಳಿಗೆಕೇರಳದಲ್ಲಷ್ಟೇ ಅಲ್ಲ, ಅನ್ಯರಾಜ್ಯಗಳಲ್ಲೂ ಬೇಡಿಕೆ ಹೆಚ್ಚಾಯಿತು.

ಆನ್‌ಲೈನ್‌ ಮೂಲಕ ಬಹಳಷ್ಟು ಜನ ಈಗ ಬಟ್ಟೆ-ಬರೆ ಖರೀದಿಸುವ ಕಾರಣ, ಈ ಸೀರೆಗಳು ದೇಶದ ಮೂಲೆಮೂಲೆಗೂ ತಲುಪಿದವು. ನೋಡಲೂ ಅಂದ, ಉಡಲೂ ಆರಾಮದಾಯಿಕ ಆಗಿರುವಕಸವು ಸೀರೆಗಳಿಗ ವಿದೇಶಗಳಲ್ಲೂ ಬೇಡಿಕೆ ಇದೆ! ಇವುಗಳನ್ನುಕಚೇರಿಗೂ ಉಟ್ಟು ಕೊಂಡು ಹೋಗಬಹುದು. ಅಧ್ಯಾಪಕಿಯರು, ವಾರ್ತಾವಾಚಕರು, ಕಲೆಯತ್ತ ಒಲವು ಹೊಂದಿರುವವರು, ಶಾಸ್ತ್ರೀಯ ನೃತ್ಯಗಾರ್ತಿಯರು, ಸಾಹಿತಿಗಳು, ರಂಗಕಲಾವಿದರು, ಹೀಗೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಕೆಲಸ ಮಾಡುವ ಮಹಿಳೆಯರಿಗೆ ಈ ಸೀರೆಗಳ ಮೇಲೆ ಒಲವು ಇದೆ.

ಇವು ತೀರಾ ಸಾಂಪ್ರದಾಯಿಕವೂ ಅಲ್ಲ, ಅತೀ ಆಧುನಿಕವೂ ಅಲ್ಲ. ಹಾಗಾಗಿಯೇ ಇವುಗಳಿಗೆ ಬೇಡಿಕೆ ಹೆಚ್ಚು ಎಂದರೆ ತಪ್ಪಾಗಲಾರದು. ಪೂರ್ತಿ ಸೀರೆ ಸಾಲಿಡ್‌ ಕಲರ್ಡ್‌ (ಒಂದೇ ಬಣ್ಣದ್ದು) ಆಗಿದ್ದು,ಕೇವಲ ರವಿಕೆ ಬೇರೆ ಬಣ್ಣದ್ದೂ ಆಗಿರಬಹುದು. ಸೀರೆಗೆ ಮ್ಯಾಚ್‌ ಆಗದೆ ಇರುವ ಬಣ್ಣದ ರವಿಕೆಯನ್ನೂ ತೊಡಬಹುದು. ನಿಮ್ಮಲ್ಲೂ ಕಸವು ಸೀರೆಗಳಿದ್ದರೆ ಅವುಗಳನ್ನು ಉಟ್ಟು ಮೆರೆಯಿರಿ. ಇಲ್ಲವೇ,ಭಾರತೀಯ ನೇಕಾರರಿಗೆ ಉತ್ತೇಜನ ನೀಡಲು ಒಂದು ಕಸವು ಸೀರೆಯನ್ನಾದರೂ ಖರೀದಿಸಿ.

 

– ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.