ರವಿವಾರವೂ ಸಂತೆ ವ್ಯಾಪಾರಕ್ಕೆ ಅನುಮತಿ ನೀಡಿ: ಮನೋಹರ್ ಶೆಟ್ಟಿ
ಸುರತ್ಕಲ್ ಸಂತೆ ವ್ಯಾಪಾರಸ್ಥರ ಸಭೆ
Team Udayavani, Sep 24, 2020, 2:16 AM IST
ಸುರತ್ಕಲ್ ಸಂತೆ ವ್ಯಾಪಾರಸ್ಥರ ಸಭೆ ಜರಗಿತು.
ಸುರತ್ಕಲ್: ಇಲ್ಲಿನ ಸಂತೆ ವ್ಯಾಪಾರಸ್ಥರ ಸಭೆಯು ಸುರತ್ಕಲ್ ಪಾಲಿಕೆಯ ಉಪಕಚೇರಿಯಲ್ಲಿ ಬುಧ ವಾರ ಜರಗಿತು. 30 ವರ್ಷಗಳಲ್ಲಿ ನಡೆಯುತ್ತಿರುವ ರವಿವಾರದ ಸಂತೆಗೆ ಅನುಮತಿ ನೀಡಬೇಕು ಎಂದು ಇಂಟಕ್ ಜಿಲ್ಲಾಧ್ಯಕ್ಷ ಮನೋಹರ ಶೆಟ್ಟಿ ಅವರು ಇಂಟಕ್ ಸಂತೆ ವ್ಯಾಪಾರಸ್ಥರ ಒಕ್ಕೂಟದ ಪರವಾಗಿ ಮನವಿ ಮಾಡಿದರು.
ಬುಧವಾರದ ಸಂತೆ ಅಧಿಕೃತವಾಗಿದ್ದು, ಅನುಮತಿಯಿದೆ. ಬೃಹತ್ ಕೈಗಾರಿಕೆಗಳು ಸುರತ್ಕಲ್ ಸುತ್ತಮುತ್ತ ಆರಂಭವಾದಾಗ ಸಾವಿರಾರು ಕಾರ್ಮಿಕರ ಅನುಕೂಲಕ್ಕಾಗಿ ವಾರದ ರಜಾದಿನವಾದ ರವಿವಾರ ವ್ಯಾಪಾರಿಗಳು ಸಂತೆ ಆರಂಭಿಸಿದ್ದಾರೆ. 30 ವರ್ಷಗಳಲ್ಲಿ ಯಾರದ್ದೂ ಆಕ್ಷೇಪ ಇರಲಿಲ್ಲ. ಇದೀಗ ಬಡವರ ವ್ಯಾಪಾರಕ್ಕೆ ಅಡ್ಡಿಯುಂಟು ಮಾಡುವುದು ಉಚಿತವಲ್ಲ ಎಂದು ನುಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯ ಮನಪಾ ಸದಸ್ಯ ವರುಣ್ ಚೌಟ ಸುರತ್ಕಲ್ ಅವರು, ಮಾರುಕಟ್ಟೆ ವ್ಯಾಪಾರಸ್ಥರು ರವಿವಾರದ ಸಂತೆ ವ್ಯಾಪಾರಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಹಾಗಾಗಿ ಸಂತೆ ವ್ಯಾಪಾರಕ್ಕೆ ಅನುಮತಿ ನೀಡುವ ಬಗ್ಗೆ ಪಾಲಿಕೆಯಲ್ಲಿ ಚರ್ಚೆಯಾಗ ಬೇಕಿದೆ ಎಂದರು.
ಉಪಮೇಯರ್ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್, ಮನಪಾ ಸದಸ್ಯರಾದ ಸುಮಿತ್ರಾ ಕರಿಯ, ಶ್ವೇತಾ ಎ., ನಯನಾ ಆರ್. ಕೋಟ್ಯಾನ್, ಸರಿತಾ ಶಶಿಧರ್, ಲಕ್ಷ್ಮೀ ಶೇಖರ್ ದೇವಾಡಿಗ, ಲೋಕೇಶ್ ಬೊಳ್ಳಾಜೆ, ಇಂಟಕ್ನ ರಾಜ್ಯ ಕಾರ್ಯದರ್ಶಿ ಸುರೇಶ್, ವಿನೋದ್ ರಾಜ್, ಸಂತೆ ವ್ಯಾಪಾರಸ್ಥರ ಒಕ್ಕೂಟದ ಮಹಮ್ಮದ್, ಮನಪಾ ಸದಸ್ಯರುಗಳು, ಅಧಿ ಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.
ರವಿವಾರ ಸಂತೆ ಅನುಮತಿಗೆ ಮನವಿ
ಸ್ಥಾಯೀ ಸಮಿತಿ ಸಭೆಯಲ್ಲಿ ಚರ್ಚಿಸಿ ರವಿವಾರದ ಸಂತೆಗೆ ಅನುಮತಿ ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ಆಯುಕ್ತ ಶ್ರೀಧರ್ ಹೇಳಿದರು. ಪಾಲಿಕೆಯಿಂದ ಅನುಮತಿ ಸಿಗುವವರೆಗೆ ಬಡ ಸಂತೆ ವ್ಯಾಪಾರಸ್ಥರಿಗೆ ಬುಧವಾರ ಸಂತೆ ವ್ಯಾಪಾರದ ಜತೆಗೆ ರವಿವಾರವೂ ಅನುಮತಿ ನೀಡಿ ಬಡವರ್ಗದವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಮಹೋಹರ್ ಶೆಟ್ಟಿ ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Lok Sabha elections: ಲೋಕ ಸಮರ; ಮತದಾನದಲ್ಲಿ ಪುರುಷರೇ ಮೇಲುಗೈ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್