ಕೆಲಸ ಕೊಡಿಸುವ ನೆಪ: ನಿಲ್ದಾಣದಲ್ಲೇ ಇಬ್ಬರು ರೈಲ್ವೆ ಅಧಿಕಾರಿಗಳಿಂದ ಯುವತಿಯ ಅತ್ಯಾಚಾರ
Team Udayavani, Sep 27, 2020, 12:49 PM IST
ಭೋಪಾಲ್ : ಉತ್ತರ ಪ್ರದೇಶದ 22 ವರ್ಷದ ಯುವತಿಯೊಬ್ಬಳಿಗೆ ಕೆಲಸ ಕೊಡಿಸುವ ನೆಪದಲ್ಲಿ ಆಕೆಗೆ ಪಾನೀಯದಲ್ಲಿ ಮತ್ತು ಬರುವ ಔಷಧಿ ನೀಡಿ ಇಬ್ಬರು ರೈಲ್ವೆ ಅಧಿಕಾರಿಗಳು ರೈಲ್ವೆ ನಿಲ್ಡಾದಲ್ಲೇ ಅತ್ಯಾಚಾರ ಎಸಗಿದ ಘಟನೆ ಭೋಪಾಲ್ ರೈಲು ನಿಲ್ದಾಣದಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿ ಹಿತೇಶ್ ಚೌಧರಿ ಹೇಳಿಕೆಯಂತೆ ಘಟನೆಗೆ ಕುರಿತಂತೆ ರೈಲ್ವೆ ಅಧಿಕಾರಿಯಾದ ರಾಜೇಶ್ ತಿವಾರಿ(45) ಯನ್ನು ವಶಕ್ಕೆ ಪಡೆದಿದ್ದೇವೆ ಎಂದಿದ್ದಾರೆ.
ಉತ್ತರ ಪ್ರದೇಶದ ಯುವತಿಗೆ ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತಿದ್ದ ರಾಜೇಶ್ ತಿವಾರಿ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಈ ಸಂದರ್ಭ ಯುವತಿ ಕೆಲಸದ ಹುಡುಕಾಟದಲ್ಲಿ ಇರುವುದು ರಾಜೇಶ್ ತಿವಾರಿಗೆ ತಿಳಿಯಿತು ಇದನ್ನು ಅಸ್ತ್ರವಾಗಿ ಬಳಸಿಕೊಂಡ ತಿವಾರಿ ಯುವತಿಗೆ ಕೆಲಸ ಕೊಡುವ ನೆಪ ಹೇಳಿ ಭೋಪಾಲ್ ಗೆ ಬರುವಂತೆ ತಿಳಿಸಿದ್ದಾನೆ ಯುವತಿಯು ಕೆಲಸದ ಆಸೆಯಿಂದ ದೂರದ ಉತ್ತರ ಪ್ರದೇಶದಿಂದ ಭೋಪಾಲ್ ಗೆ ರೈಲಿನಲ್ಲಿ ಆಗಮಿಸಿದ್ದಾಳೆ. ಈ ವೇಳೆ ರಾಜೇಶ್ ತಿವಾರಿ ಹಾಗೂ ಆತನ ಗೆಳೆಯ ಇಬ್ಬರು ಸೇರಿ ರೈಲ್ವೆ ನಿಲ್ದಾಣದ ಕೊಟಡಿಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ :ಉಡುಪಿ ಶ್ರೀಕೃಷ್ಣ ಮಠ : ದೇಸೀತನವನ್ನು ಜನಪ್ರಿಯಗೊಳಿಸುವುದು ಪ್ರಮುಖ ಉದ್ದೇಶ
ಯುವತಿಗೆ ಕುಡಿಯಲು ತಂಪು ಪಾನೀಯವನ್ನು ನೀಡಿದ್ದು ಅದರಲ್ಲಿ ಇಬ್ಬರು ಅಧಿಕಾರಿಗಳು ಮತ್ತು ಬರುವ ಔಷಧಿಯನ್ನು ಹಾಕಿ ಅತ್ಯಾಚಾರ ಎಸಗಿದ್ದಾರೆ ಯುವತಿ ಎಚ್ಚರಗೊಂಡ ಬಳಿಕ ಘಟನೆಯ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಕೂಡಲೇ ಎಚ್ಚೆತ್ತ ಪೊಲೀಸ್ ಅಧಿಕಾರಿಗಳು ರಾಜೇಶ್ ತಿವಾರಿ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ