ಬಸ್ರೂರು ಬಸ್ ನಿಲ್ದಾಣ ಸಮೀಪ ಅಪಾಯಕಾರಿ ತಿರುವು
ಕನಿಷ್ಠ ಸೂಚನಾ ಫಲಕವೂ ಇಲ್ಲ
Team Udayavani, Sep 30, 2020, 2:07 AM IST
ಬಸ್ರೂರು ಬಸ್ ನಿಲ್ದಾಣ ಸಮೀಪವಿರುವ ಅಪಾಯಕಾರಿ ತಿರುವು.
ಬಸ್ರೂರು: ಬಸ್ರೂರು ಬಸ್ ನಿಲ್ದಾಣದ ಸಮೀಪ ಕುಂದಾಪುರ ಕಡೆಗೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಇರುವ ತಿರುವು ಅಪಾಯಕಾರಿಯಾಗಿದ್ದು, ವಾಹನ ಸವಾರರು ಅತಿ ಎಚ್ಚರಿಕೆಯಿಂದ ಸಂಚರಿಸ ಬೇಕಾಗಿದೆ.
ಬಸ್ರೂರು ಕಡೆಯಿಂದ ಸಾಗುವ ವಾಹನಗಳಿಗೆ ಈ ತಿರುವಿನಲ್ಲಿ ಎದುರುಗಡೆಯಿಂದ ಬರುವ ವಾಹನಗಳು ಕಾಣಿಸುವುದಿಲ್ಲ. ಇಲ್ಲಿ ಕನಿಷ್ಠ ಒಂದು ಸೂಚನಾ ಫಲಕವೂ ಇಲ್ಲ. ಸಿದ್ದಾಪುರ – ಶಿವಮೊಗ್ಗ ಕಡೆಯಿಂದ ಬರುವ ವಾಹನಗಳಿಗೆ ಈ ತಿರುವು ಅತ್ಯಂತ ಅಪಾಯಕಾರಿಯಾಗಿದ್ದು, ಈಗಾಗಲೇ ಹಲವು ಅಪಘಾತಗಳು ಸಂಭವಿಸಿವೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆ ಕನಿಷ್ಠ ವಾಹನ ಸವಾರರಿಗೆ ಕಾಣಿಸುವಂತೆ ಒಂದು ಸೂಚನಾ ಫಲಕವನ್ನು ಹಾಕಬೇಕು. ಅದಲ್ಲದೆ ಅತಿ ವೇಗದಲ್ಲಿ ಬರುವ ವಾಹನಗಳಿಗೆ ತಡೆಯಾಗಿ “ಹಂಪ್ಸ್’ (ವೇಗತಡೆ) ನಿರ್ಮಿಸ ಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಶೀಘ್ರ ಸೂಚನಾ ಫಲಕ ಅಳವಡಿಕೆ
ಬಸ್ರೂರು ಬಸ್ ನಿಲ್ದಾಣದ ಸಮೀಪ ನೀರಿನ ಟ್ಯಾಂಕ್ ಹತ್ತಿರದ ತಿರುವು ಅಪಾಯಕಾರಿಯಾಗಿದ್ದು ಶೀಘ್ರ ಇಲ್ಲಿ ಅಗತ್ಯ ಸೂಚನಾ ಫಲಕ ಅಳವಡಿಸಲಾಗುವುದು.
-ನಾಗೇಂದ್ರ ಜೆ., ಅಭಿವೃದ್ಧಿ ಅಧಿಕಾರಿ, ಬಸ್ರೂರು ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು
Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್ ಕರೆ
Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ
Malpe ಬೀಚ್: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…